ಆ್ಯಪ್ನಗರ

ಮಾ.1ಕ್ಕೆ ರಾಜ್ಯ ಮಟ್ಟದ ವಧು-ವರರ ಸಮಾವೇಶ

ಗದಗ: ನಗರದ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಂಗಣದಲ್ಲಿಮಾ.1 ರಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ನಿಂದ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಪಾಲಕರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು.

Vijaya Karnataka 26 Feb 2020, 5:00 am
ಗದಗ: ನಗರದ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಂಗಣದಲ್ಲಿಮಾ.1 ರಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ನಿಂದ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಪಾಲಕರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು.
Vijaya Karnataka Web state level bridal groomsmen convention
ಮಾ.1ಕ್ಕೆ ರಾಜ್ಯ ಮಟ್ಟದ ವಧು-ವರರ ಸಮಾವೇಶ


ಮಂಗಳವಾರ ನಗರದ ಪತ್ರಿಕಾಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಸಮಾವೇಶದಲ್ಲಿವಧು-ವರರನ್ನು ಪರಸ್ಪರ ಪರಿಚಯಸಲಾಗುವುದು. ಅಪೇಕ್ಷೆಹೊಂದಿದ ವಧು-ವರರನ್ನು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು. ವಧು-ವರರು ಎರಡೂ ಪೋಟೊ ಜಾತಕದೊಂದಿಗೆ ಭಾಗವಹಿಸಬೇಕು. ವಿಧವೆ, ವಿಧುರ, ಮರುವಿವಾಹ ಆಗಬಯಸುವವರು, ವಿವಾಹ ವಯೋಮಿತಿ ಮೀರಿದವರು, ವಿಶೇಷಚೇತನರು ಹಾಗೂ ಪಾಲಕರು ಭಾಗವಹಿಸಬೇಕು ಎಂದರು.

ವೀರಶೈವ ಲಿಂಗಾಯತ, ಜಂಗಮ, ಆರಾಧ್ಯರು, ಪಂಚಮಸಾಲಿ, ಬಣಜಿಗ, ಆದಿಬಣಜಿಗ, ಬಣಗಾರರು, ಶಿವಾಚಾರ್ಯ, ಕುಂಬಾರ, ಪಟ್ಟಸಾಲಿ, ಶಿವಶಿಂಪಿ, ಸಾದರು, ಗಾಣಿಗೇರ, ಮಡಿವಾಳರ, ಹಡಪದ, ನಾಮದ ರೆಡ್ಡಿ, ಲಿಂಗಾಯತರೆಡ್ಡಿ, ನೊಳಂಬ, ನೇಕಾರ, ಪಂಚಾಚಾರ್ಯ, ಹೂಗಾರ, ಮಾಲಗಾರ ಸೇರಿದಂತೆ ಎಲ್ಲಒಳಪಂಗಡಗಳ ಸರಕಾರಿ, ಅರೆಸಾರಕಾರಿ, ಡಾಕ್ಟರ್‌, ಎಂಜನಿಯರ್‌, ವ್ಯಾಪಾರಸ್ಥ, ಉದ್ಯೋಗಸ್ಥ, ಉದ್ದಿಮೆದಾರರು ಇತರರು ಭಾಗವಹಿಸಬೇಕು. ಮಾಹಿತಿಗಾಗಿ ಮೊ.7204139739,9686927111 ಅವರನ್ನು ಸಂರ್ಪಕಿಸಬೇಕು ಎಂದರು.

ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಕಾರ್ಯದರ್ಶಿ ಶಕುಂತಲಾ ನಂದಿಮಠ, ಮೋಹನಗೌಡ ಪಾಟೀಲ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ