ಆ್ಯಪ್ನಗರ

ರಾಜ್ಯ ಮಟ್ಟದ ವಧು-ವರರ ಸಮಾವೇಶ

ಗದಗ : ನಗರದ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಭವನದಲ್ಲಿ ಜು.14 ರಂದು ಬೆಳಗ್ಗೆ 11ಕ್ಕೆ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಮತ್ತು ಕರ್ನಾಟಕ ವೀರಶೈವ ವಧು-ವರರ ಅನ್ಷೇಷಣಾ ಕೇಂದ್ರದ ಆಶ್ರಯದಲ್ಲಿ ರಾಜ್ಯಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಮತ್ತು ಪಾಲಕರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು.

Vijaya Karnataka 14 Dec 2022, 6:49 pm
ಗದಗ : ನಗರದ ಚೇಂಬರ್‌ ಆಫ್‌ ಕಾಮರ್ಸ್‌ ಸಭಾಭವನದಲ್ಲಿ ಜು.14 ರಂದು ಬೆಳಗ್ಗೆ 11ಕ್ಕೆ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಮತ್ತು ಕರ್ನಾಟಕ ವೀರಶೈವ ವಧು-ವರರ ಅನ್ಷೇಷಣಾ ಕೇಂದ್ರದ ಆಶ್ರಯದಲ್ಲಿ ರಾಜ್ಯಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಮತ್ತು ಪಾಲಕರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು.
Vijaya Karnataka Web marriage


ಸೋಮವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಮಾವೇಶದಲ್ಲಿ ವಧು-ವರರನ್ನು ಪರಸ್ಪರ ಪರಿಚಯಿಸಲಾಗುವುದು. ಅಪೇಕ್ಷೆ ಹೊಂದಿದ ವಧು-ವರರನ್ನು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು. ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು. ಭಾಗವಹಿಸುವ ವಧು-ವರರ 2 ಫೋಟೊ ಜಾತಕದೊಂದಿಗೆ ಭಾಗವಹಿಸಬಹುದು. ವಿಧವೆ, ವಿಧುರ, ಮರು ವಿವಾಹ ಆಗಬಯಸುವವರು, ಅಂಗವಿಕಲರು, ಪಾಲಕರು ಸಹ ಭಾಗವಹಿಸಬಹುದು ಎಂದರು.

ಬೃಹತ್‌ ವಧು-ವರರ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಜಂಗಮ, ಆರಾಧ್ಯರು, ಪಂಚಮಸಾಲಿ, ಬಣಜಿಗ, ಆದಿಬಣಜಿಗ, ಬಣಗಾರರು, ಶಿವಾಚಾರ್ಯ, ಕುಂಬಾರ, ಪಟ್ಟಸಾಲಿ, ಶಿವಶಿಂಪಿ, ಸಾದರು, ಗಾಣಿಗೇರ, ಮಡಿವಾಳರು, ಹಡಪದ, ನಾಮದ ರೆಡ್ಡಿ, ಲಿಂಗಾಯತರೆಡ್ಡಿ, ನೊಳಂಬ, ನೇಕಾರ, ಪಂಚಾಚಾರ್ಯ, ಹೂಗಾರ ಸೇರಿದಂತೆ ಎಲ್ಲ ಒಳಪಂಗಡಗಳ ಸರಕಾರಿ, ಅರೆಸರಕಾರಿ, ಡಾಕ್ಟರ್‌, ಎಂಜನಿಯರ್‌, ವಿದೇಶಿವಾಸಿ, ವ್ಯಾಪಾರಸ್ಥ, ಉದ್ಯೋಗಸ್ಥ, ಉದ್ದಿಮೆದಾರರು, ಪದವೀಧರ ವರಗಳು, ವಧುಗಳ ಭಾಗವಹಿಸಲಿದ್ದಾರೆ ಎಂದರು.

ವಿಶೇಷಚೇತನರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಉಚಿತವಾಗಿ ವಿಶೇಷಚೇತನರು ರಾಜ್ಯ ಮಟ್ಟದ ವಧು-ವರರ ಬೃಹತ್‌ ಸಮಾವೇಶದಲ್ಲಿ ಭಾಗವಹಿಸುತ್ತಾರೆ.

ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಕಾರ್ಯದರ್ಶಿ ಶಕುಂತಲಾ ನಂದಿಮಠ, ಶಿವಕುಮಾರ ಹಿರೇಮಠ, ಪ್ರಕಾಶ ಅಂಗಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ