ಆ್ಯಪ್ನಗರ

ಮಾದಕ ವಸ್ತುಗಳಿಂದ ದೂರವಿರಿ

ಮುಂಡರಗಿ : ತಾಲೂಕಿನ ಕಲಕೇರಿ ಎಂ.ಬಿ. ಪಾಟೀಲ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜನಲ್ಲಿ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನ ಬಾಹಿರ ಸಾಗಣೆ ವಿರೋಧಿ ಸಪ್ತಾಹ ದಿನಾಚರಣೆ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು .

Vijaya Karnataka 9 Jul 2019, 5:00 am
ಮುಂಡರಗಿ : ತಾಲೂಕಿನ ಕಲಕೇರಿ ಎಂ.ಬಿ. ಪಾಟೀಲ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜನಲ್ಲಿ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನ ಬಾಹಿರ ಸಾಗಣೆ ವಿರೋಧಿ ಸಪ್ತಾಹ ದಿನಾಚರಣೆ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು .
Vijaya Karnataka Web stay away from drugs
ಮಾದಕ ವಸ್ತುಗಳಿಂದ ದೂರವಿರಿ


ಜಿಲ್ಲಾ ಆರೋಗ್ಯ ಶಿಕ್ಷ ಣಾಧಿಕಾರಿ ಗೀತಾ ಕಾಂಬಳೆ ಮಾತನಾಡಿ, ಈ ಒಂದು ಮಾದಕ ವಸ್ತುಗಳಿಗೆ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ, ಅದಕ್ಕಾಗಿ ಇಂತಹ ಮಾದಕ ವಸ್ತುಗಳ ಸೇವೆನೆ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾಲೇಜು ಆವರಣದಲ್ಲಿ ಮಾಡಲು ಹೇಳಿದರು. ಯುವ ಜನರಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡು ಬಂದರೆ ಆಪ್ತ ಸಮಾಲೋಚನೆ ಮುಖಾಂತರ ಪರಿಹಾರ ಕಂಡುಕೊಳ್ಳಬಹುದು. ಅದರ ಬದಲಾಗಿ ಗಾಂಜಾ, ಅಫೀಮ್‌, ಚರಸ್‌, ಬ್ರೌನ್‌ ಶುಗರ್‌ ಮುಂತಾದ ಸೇವನೆಯಿಂದ ಯುವ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಅಪರಾಧಗಳು ಹೆಚ್ಚಾಗುತ್ತವೆ ಎಂದರು.

ಮುಖ್ಯ ಅತಿಥಿ ಡಾ. ಎಸ್‌ ಎಸ್‌ ಪಾಟೀಲ ಮಾತನಾಡಿ,ಮಾದಕ ವಸ್ತುಗಳ ಸೇವನೆಯಿಂದ ಎಚ್‌ಐವಿ ಏಡ್ಸ್‌, ಹೆಪಾಟೈಟಿಸ್‌-ಬಿ, ಮನೋರೋಗ, ಮುರ್ಛೆರೋಗ, ಸಂತಾನ ಹೀನತೆ, ಶ್ವಾಸಕೋಶ ಸಂಬಂಧ ರೋಗಗಳು, ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು, ನಡುಗುವಿಕೆ ಮಾನಸಿಕ ಖಿನ್ನತೆ ಸಮಸ್ಯೆಗಳು ಬರುತ್ತವೆ ಎಂದರು.

ಪ್ರಾ. ಎ. ಮಂಜುನಾಥ ಅಧ್ಯಕ್ಷ ತೆ ವಹಿಸಿದ್ದರು.ಭಾಷಣ ಸ್ಪರ್ಧೆಯಲ್ಲಿ ಪ್ರವೀಣ ಲಮಾಣಿ ಪ್ರಥಮ , ಜಗದೀಶ ಲಮಾಣಿ ದ್ವಿತೀಯ, ಗಣೇಶ ಲಮಾಣಿ ತೃತೀಯ ಬಹುಮಾನ ಪಡೆದರು.ವಿ.ವೈ. ತಿಮ್ಮಾಪೂರ ಸ್ವಾಗತಿಸಿ, ನಿರೂಪಿಸಿದರು. ಎಸ್‌.ಬಿ. ಕಲಗುಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ