ಆ್ಯಪ್ನಗರ

ಪ್ಲಾಸ್ತಿಕ್‌ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ

ಮುಂಡರಗಿ : ಇಲ್ಲಿಯ ಕ.ರ.ಬೆಲ್ಲದ ಮಹಾವಿದ್ಯಾಲಯದಲ್ಲಿ ಸ್ವಚ್ಚತಾ ಪಕ್ವಾಡ್‌ ಯೋಜನೆಯಡಿ ಮಹಾವಿದ್ಯಾಲಯದ ಕಾಲೇಜು ಆವರಣ, ಉದ್ಯಾನ, ಕೊಠಡಿ, ಪ್ರಯೋಗಾಲಯ, ಜಿಮ್‌ ಹಾಲ್‌ ಹಾಗೂ ಗ್ರಂಥಾಲಯದ ಆವರಣ ಸ್ವಚ್ಛಗೊಳಿಸಲಾಯಿತು.

Vijaya Karnataka 7 Aug 2019, 5:00 am
ಮುಂಡರಗಿ : ಇಲ್ಲಿಯ ಕ.ರ.ಬೆಲ್ಲದ ಮಹಾವಿದ್ಯಾಲಯದಲ್ಲಿ ಸ್ವಚ್ಚತಾ ಪಕ್ವಾಡ್‌ ಯೋಜನೆಯಡಿ ಮಹಾವಿದ್ಯಾಲಯದ ಕಾಲೇಜು ಆವರಣ, ಉದ್ಯಾನ, ಕೊಠಡಿ, ಪ್ರಯೋಗಾಲಯ, ಜಿಮ್‌ ಹಾಲ್‌ ಹಾಗೂ ಗ್ರಂಥಾಲಯದ ಆವರಣ ಸ್ವಚ್ಛಗೊಳಿಸಲಾಯಿತು.
Vijaya Karnataka Web strive for a plastic free society
ಪ್ಲಾಸ್ತಿಕ್‌ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ


ಈ ಸಂದರ್ಭದಲ್ಲಿ ಮಾತನಾಡಿದ ಪ್ರಾ. ಡಾ. ಡಿ.ಸಿ.ಮಠ, ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಸ್ವಚ್ಛತಾ ಯೋಜನಾ ಅಭಿಯಾನದ ವಿಷಯ ತಿಳಿದು ಸ್ವಚ್ಛತಾ ಅರಿವು ಮೂಡಿಸಿಕೊಂಡು ಕಾಲೇಜಿನ ಆವರಣ ಸಾರ್ವಜನಿಕ ಆಸ್ಪತ್ರೆ, ಬಸ್‌ ನಿಲ್ದಾಣ, ಕೊಳಚೇಗೇರಿ ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆ ಮಾಡಿ ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಬೇಕು ಎಂದರು. ಅದರಂತೆ ನಂತರ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಎನ್‌ಎಸ್‌ಎಸ್‌ ಯೋಜನಾಧಿಕಾರಿ ಡಾ. ಆರ್‌. ಎಚ್‌ ಜಂಗಣವಾರಿ ಮಾತನಾಡಿ, ಎಲ್ಲ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ಆ.1 ರಿಂದ 15 ರವರೆಗೆ ನಡೆಯಬಹುದಾದ ಸ್ವಚ್ಛತಾ ಕಾರ್ಯಕ್ರಮ ವಿವರವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಸ್ವಚ್ಛತಾ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಪ್ರೊ. ಎಸ್‌.ಆರ್‌.ಬಸಾಪೂರ, ಡಾ.ಎ.ಎಸ್‌.ಕಲ್ಯಾಣಿ, ಡಾ.ಕುಮಾರ್‌.ಜೆ., ಡಾ.ಸಚಿನ್‌ ಉಪ್ಪಾರ, ಪ್ರೊ.ಸಂತೋಷ ಹಿರೇಮಠ, ಪ್ರೊ.ಹನುಮಂತಪ್ಪ ಎನ್‌, ಪ್ರೊ ಕುಮಾರ ಕಲ್ಮಠ, ಪ್ರೊ ಎಸ್‌, ಮುಂಡರಗಿಮಠ, ಪ್ರೊ.ಎ.ಎಸ್‌. ಬನ್ನಿಕೊಪ್ಪ, ಪ್ರೊ ಎಮ್‌.ಎಮ್‌ ಗದಗ, ಡಾ. ವನಜಾಕ್ಷೀ ಭರಮಗೌಡರ, ಗೀತಾ.ಬಿ, ಎಸ್‌.ಟಿ.ಮರಳಿ, ಕು. ಕೆ.ಕೆ ಉಳ್ಳಾಗಡ್ಡಿ ಮುಂತಾದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ