ಆ್ಯಪ್ನಗರ

ಮಕ್ಕಳಲ್ಲಿಯ ಕಲೆ ಹೊರಬರಲು ಶ್ರಮಿಸಿ

ಕೊಣ್ಣೂರ: ಮಕ್ಕಳು ದೇವರ ಸಮಾನ ಆ ಮಕ್ಕಳಲ್ಲಿಹಲವು ರೀತಿಯ ಕಲೆ ಅಡಗಿರುತ್ತವೆ. ಆ ಕಲೆಯನ್ನು ಬೆಳಕಿಗೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ಭೈರನಹಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 4 Sep 2019, 5:00 am
ಕೊಣ್ಣೂರ: ಮಕ್ಕಳು ದೇವರ ಸಮಾನ ಆ ಮಕ್ಕಳಲ್ಲಿಹಲವು ರೀತಿಯ ಕಲೆ ಅಡಗಿರುತ್ತವೆ. ಆ ಕಲೆಯನ್ನು ಬೆಳಕಿಗೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ಭೈರನಹಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web strive to make art out of children
ಮಕ್ಕಳಲ್ಲಿಯ ಕಲೆ ಹೊರಬರಲು ಶ್ರಮಿಸಿ


ಅವರು ಸಮೀಪದ ಶಿರೋಳ ಎಸ್‌.ಎನ್‌.ಗಾಡಿ ಪ್ರಾಥಮಿಕ ಶಿಕ್ಷಣ ಸಂಸ್ಥೆ , ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಧಿಕಾರಿ ಕಾರ್ಯಾಲಯ ,ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ನರಗುಂದ ಆಶ್ರಯದಲ್ಲಿಹಮ್ಮಿಕೊಂಡ ಶಿರೋಳ ಕ್ಲಸ್ಟರ್‌ ಮಟ್ಟದ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿಮಾತನಾಡಿದರು. ಮಕ್ಕಳು ಶ್ರಮಪಟ್ಟು ಅಭ್ಯಾಸ ಮಾಡಬೇಕು ಎಂದರು.

ಕ್ಷೇತ್ರ ಸಂಪನ್ಮೋಲ ಅಧಿಧಿಕಾರಿ ರವಿ ಕಟ್ಟಿಮನಿ ಮಾತನಾಡಿ, ಮಕ್ಕಳಿಗೆ ಕೇವಲ ನಾಲ್ಕು ಗೋಡೆಗಳ ಮಧ್ಯ ಶಿಕ್ಷಣ ನೀಡಿದರೆ ಸಾಲದು. ಅದು ಗಾಳಿ, ಬೆಳಕು, ನೀರು ಸಿಗುವ ಪರಿಸರದಲ್ಲಿ ಮಗು ಬೆಳೆದಾಗ ಮಾತ್ರ ಹೊಸ ಕಲೆ ಸೃಷ್ಟಿಯಾಗುತ್ತವೆ ಎಂದರು.

ಸಂತ್ರಸ್ತ ಕುಟುಂಬಗಳಿಗೆ ಒಟ್ಟು 26 ನಿರಾಶ್ರಿತ ಕುಟುಂಬಕ್ಕೆ ಎಸ್‌. ಎನ್‌.ಗಾಡಿ ಶಿಕ್ಷಣ ಸಂಸ್ಥೆಯಿಂದ 2000 ರೂ. ಗಳ ಚೆಕ್‌ ವಿತರಿಸಲಾಯಿತು.

ಶಿರೋಳ ಗ್ರಾಪಂ ಉಪಾಧ್ಯಕ್ಷೆ ಶೇಖವ್ವ ಯಲಿಬಳ್ಳಿ,ಎಂ.ಎಸ್‌.ಯಾದವಾಡ,ಮರೆಗುದ್ದಿ,ಜಗದೀಶ ವಸ್ತ್ರದ,ಸೋಮಶೇಖರಯ್ಯ ವಸ್ತ್ರದ,ಶೇಖಣ್ಣ ಗಟ್ಟಿ,ಬಿ.ಜಿ.ಕರಕಿಕಟ್ಟಿ,ಮಹಾಬಲೇಶ ಕೊಡಬಳ್ಳಿ,ಮಲ್ಲಣ್ಣ ಜಾಬಣ್ಣವರ,ಡಿ.ವೈ.ಶಾಂತಗೇರಿ, ಶಿವಾನಂದ ಸೊಪ್ಪಿನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ