ಆ್ಯಪ್ನಗರ

ಸಂಘಟನೆಗಳ ಬಲದಿಂದ ಹೋರಾಟ ಯಶಸ್ವಿ

ಗದಗ : ಸಂಘಟನೆಗಳ ಬಲವೇ ನ್ಯಾಯಯುತವಾದ ಹೋರಾಟಗಳ ಯಶಸ್ವಿಗೆ ಕಾರಣವಾಗುತ್ತದೆ ಎಂದು ಲಡಾಯಿ ಪ್ರಕಾಶನದ ಪ್ರಕಾಶಕ, ಚಿಂತಕ ಬಸವರಾಜ ಸೂಳಿಭಾವಿ ಹೇಳಿದರು.

Vijaya Karnataka 19 Aug 2019, 5:00 am
ಗದಗ : ಸಂಘಟನೆಗಳ ಬಲವೇ ನ್ಯಾಯಯುತವಾದ ಹೋರಾಟಗಳ ಯಶಸ್ವಿಗೆ ಕಾರಣವಾಗುತ್ತದೆ ಎಂದು ಲಡಾಯಿ ಪ್ರಕಾಶನದ ಪ್ರಕಾಶಕ, ಚಿಂತಕ ಬಸವರಾಜ ಸೂಳಿಭಾವಿ ಹೇಳಿದರು.
Vijaya Karnataka Web struggle with the force of organizations is successful
ಸಂಘಟನೆಗಳ ಬಲದಿಂದ ಹೋರಾಟ ಯಶಸ್ವಿ


ಕಳಸಾಪುರದ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ 24/7 ನೀರು ಸರಬರಾಜು ಯೋಜನೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಂಘಟನೆಗಳನ್ನು ಒಡೆಯುವ ಸಂಚು ನಡೆಯುತ್ತಿರುತ್ತವೆ. ನಿಮ್ಮ ನಿಮ್ಮಲ್ಲಿ ಒಡಕು ಮೂಡಿಸುವ ಕೆಲಸಗಳೂ ನಡೆಯುತ್ತಿರುತ್ತವೆ. ಅದನ್ನು ಅರಿತುಕೊಂಡು ಪರಸ್ಪರ ನಿಮ್ಮೊಳಗೆ ಮಾತನಾಡಿ ಚರ್ಚಿಸಿ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಸಂಘದ ಶ್ರೇಯಸ್ಸಿಗಾಗಿ ಶ್ರಮಿಸಿದಾಗ ನಮಗೆ ನ್ಯಾಯಯುತವಾಗಿ ದೊರೆಯುವ ಸೌಕರ್ಯ ದೊರೆಯುತ್ತವೆ ಎಂದರು.

ಸಂಘದಲ್ಲಿ ಎಂದಿಗೂ ವ್ಯಕ್ತಿ ಮುಖ್ಯವಾಗಬಾರದು. ವಿಚಾರ, ಸಾಮರ್ಥ್ಯ‌, ಸಾಧನೆ ಮುಖ್ಯವಾಗಬೇಕು ಎಂದ ಅವರು, 24/7 ನೀರಿನ ಕಾರ್ಯ ಪ್ರಾರಂಭಿಸಲು ಯಾವುದೇ ಮುಹೂರ್ತ, ಪಂಚಾಂಗ ನೋಡದೆ ಸ್ವಾತಂತ್ರ್ಯ ದಿನ ನಿಗದಿ ಮಾಡಿರುವುದಕ್ಕೆ ಸಂಘದ ಸದಸ್ಯರನ್ನು ಅಭಿನಂದಿಸಿದರು.

ಕಳಸಾಪೂರ ಕೆ.ಎಚ್‌.ಬಿ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾರುತಿ ಸಿದ್ದಾಪೂರ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಮಚಂದ್ರ ಹಂಸನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ ದಾನಪ್ಪಗೌಡ್ರ ಸ್ವಾಗತಿಸಿದರು. ಜಿ. ಬಿ. ವಾಲ್ಮೀಕಿ ವಂದಿಸಿದರು. ಬಿ. ಬಿ. ಗಾಯಕವಾಡ ನಿರೂಪಿಸಿದರು. ವೆಂಕನಗೌಡ ಹಿರೇಗೌಡರ, ಎಸ್‌.ಎ. ನಾಯ್ಕರ, ಶಿವು ಘಾರ್ಗಿ, ಎಂ. ಎಸ್‌. ಚಳಗೇರಿ, ಪ್ರಭು ಗಂಟಿಮಠ, ಎಚ್‌. ಆರ್‌. ಪಾಟೀಲ, ಎಂ.ಎಸ್‌.ಚಿಟ್ಟಿ, ಸತೀಶ ರಾಯಬಾಗಿ, ಮುತ್ತು ಬಿಳೆಯಲಿ, ಬಸವರಾಜ ಬಿಳೆಯಲಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ