ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಅವಶ್ಯ

ಗದಗ: ಇಂದಿನ ವಿದ್ಯಾರ್ಥಿಗಳು ತಮ್ಮ ತಾರುಣ್ಯ ಹಂತದಲ್ಲಿಯೇ ದಾರಿ ತಪ್ಪುತ್ತಿರುವುದು ದೇಶದ ದುರಂತವೆ ಸರಿ. ಅವರಿಗೆ ಉತ್ತಮ ಮಾರ್ಗದರ್ಶನ ಮಾಡಬೇಕಾಗಿದೆ ಎಂದು ಯೋಜನಾ ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ರುದ್ರೇಶ ಎಸ್‌.ಎನ್‌. ಹೇಳಿದರು.

Vijaya Karnataka 28 Jul 2019, 5:00 am
ಗದಗ: ಇಂದಿನ ವಿದ್ಯಾರ್ಥಿಗಳು ತಮ್ಮ ತಾರುಣ್ಯ ಹಂತದಲ್ಲಿಯೇ ದಾರಿ ತಪ್ಪುತ್ತಿರುವುದು ದೇಶದ ದುರಂತವೆ ಸರಿ. ಅವರಿಗೆ ಉತ್ತಮ ಮಾರ್ಗದರ್ಶನ ಮಾಡಬೇಕಾಗಿದೆ ಎಂದು ಯೋಜನಾ ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ರುದ್ರೇಶ ಎಸ್‌.ಎನ್‌. ಹೇಳಿದರು.
Vijaya Karnataka Web GDG-27RUDRAGOUD11
ಗದಗನ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಓರಿಯೆಂಟೇಶನ್‌ (ದಿಶೀಕರಣ) ಕಾರ್ಯಕ್ರಮದಲ್ಲಿ ಯೋಜನಾ ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ರುದ್ರೇಶ ಎಸ್‌.ಎನ್‌. ಮಾತನಾಡಿದರು.


ಶುಕ್ರವಾರ ನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಓರಿಯೆಂಟೇಶನ್‌ (ದಿಶೀಕರಣ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶ ಸೇವೆಯಂದರೆ ದೇಶದ ಗಡಿಯಲ್ಲಿ ನಿಂತು ಬಂದೂಕು ಹಿಡಿದು ಹೋರಾಡುವುದಷ್ಟೇ ಅಲ್ಲ, ದೇಶದ ಒಳಗಡೆಯು ಸಂವಿಧಾನಿಕವಾಗಿ ಉತ್ತಮ ಪ್ರಜೆಯಾಗಿ ಬದುಕುವುದು ಒಂದು ದೇಶ ಸೇವೆಯಾಗುತ್ತದೆ. ಕೇವಲ ಪದವಿಗಳನ್ನು ಪಡೆದುಕೊಂಡರಷ್ಟೇ ಸಾಲದು, ಪದವಿಯನ್ನು ಬದುಕಾಗಿ ಪರಿವರ್ತಿಸಿಕೊಳ್ಳಬೇಕು. ಅದು ಜಾಣತನ. ಒಬ್ಬ ಸಾಮಾನ್ಯ ಮನುಷ್ಯನು ಜಗತ್ತಿನ ಮಹಾನ್‌ ವ್ಯಕ್ತಿಯಾಗಬಲ್ಲ. ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಪ್ರಸಿದ್ಧಿ ಗೌರವವನ್ನು ಪಡೆಯಬಲ್ಲ. ಪರಿಸ್ಥಿತಿ ಒತ್ತಡಕ್ಕೆ ಹೆದರಿ ಓಡಿ ಹೋಗದೆ ಎದುರಿಸಿ ಗೆಲ್ಲುವುದೇ ಸಾಧಕನ ಬದುಕಾಗಿರುತ್ತದೆ ಎಂದರು.

ಪ್ರೊ.ಎಚ್‌.ಎಸ್‌. ಕೌಲಗಿ ಮಾತನಾಡಿ, ಅವಶ್ಯಕತೆಗಳೇ ಮನುಷ್ಯನ ಸಾಧನೆಯ ಕಾರಕಗಳು. ಪರಿಶ್ರಮ, ಪ್ರಯತ್ನ, ಜ್ಞಾನ ಧೈರ್ಯಗಳಂತ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.

ಪ್ರಭಾರ ಪ್ರಾಚಾರ್ಯ ಪ್ರೊ.ಎಸ್‌.ಟಿ.ಮೀಶಿ ಅಧ್ಯಕ್ಷ ತೆ ವಹಿಸಿದ್ದರು. ನಂತರ ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಶನ್‌ (ದಿಶೀಕರಣ) ಕಾರ್ಯಕ್ರಮ ನಡೆಯಿತು.

ಜ್ಯೋತಿ ಅಕ್ಕಿ, ಪ್ರೊ.ಅರ್ಚನಾ ಪಾಟೀಲ್‌, ಪ್ರೊ.ವಿನುತಾ ನಿರಮಾನಿಕ್‌, ಡಾ.ವೀಣಾ ಹೂಗಾರ, ಪ್ರೊ.ಎಸ್‌.ಜೆ.ಹಿರೇಮಠ, ಬಿ.ಎಂ. ಲಕ್ಕಮ್ಮನವರ, ಪ್ರೊ.ಎಸ್‌.ಎಫ್‌.ಹಾಸಿಲ್ಕರ್‌, ಪ್ರೊ.ಎಸ್‌.ವಿ.ಅಂಗಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ