ಗದಗ: ಸ್ಥಳೀಯ ಕೆಎಲ್ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತ್ರ ಹಾಗೂ ಗೃಹವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ನಗರದ ಜಾಕೀರ್ ಹುಸೇನ್ ಕಾಲೊನಿಯಲ್ಲಿರುವ ಜೀವನ ಸಂಧ್ಯಾ ವೃದ್ರಾಶ್ರಮಕ್ಕೆ ಸೋಮವಾರ ಶೈಕ್ಷ ಣಿಕ ಭೇಟಿ ನೀಡಿದರು.
ವಿದ್ಯಾರ್ಥಿಗಳು ವೃದ್ಧರೊಂದಿಗೆ ಆತ್ಮೀಯವಾಗಿ ಮಾತನಾಡಿ, ಯೋಗಕ್ಷೇಮ ವಿಚಾರಿಸಿ, ಆಶ್ರಮಕ್ಕೆ ಬಂದಂತಹ ಅನಿವಾರ್ಯತೆ, ಆಶ್ರಮದಲ್ಲಿ ದೊರೆಯುವ ಸೌಲಭ್ಯಗಳು, ವೃದ್ಧರ ದೈನಂದಿನ ಚಟುವಟಿಕೆಗಳು, ಊಟ ಉಪಚಾರ, ಯೋಗಕ್ಷೇಮ ಮತ್ತು ಅವರ ದೈಹಿಕ ಹಾಗೂ ಮಾನಸಿಕ ಅವಸ್ಥೆಯ ಕುರಿತು ವೃದ್ಧರೊಂದಿಗೆ ಚರ್ಚಿಸಿದರು.
ಸಂಸ್ಥಾಪನಾ ಅಧ್ಯಕ್ಷೆ ಮಣಿಬಾಯಿ ಕಾಂತಿಲಾಲ್ ಷಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಗಮದ ಧೈಯೋದ್ದೇಶಗಳು ಹಾಗೂ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವ ವೃದ್ಧರೊಂದಿಗೆ ಪ್ರೀತಿ ಮತ್ತು ಆದರದಿಂದ ಸಂವಹನ ನಡೆಸಿ ವೃದ್ಧರಿಗೆ ಹಣ್ಣು ಹಂಪಲು ವಿತರಿಸಿದರು. ಪ್ರೊ.ಪಿ.ಜೆ.ಕಟ್ಟಿಮನಿ, ಪ್ರೊ.ಜಿ.ಟಿ.ನಾಯಕ, ಪ್ರೊ.ವೀಣಾ ತಿರ್ಲಾಪೂರ, ಡಾ.ಬಾಪುಗೌಡಾ ಪಾಟೀಲ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳು ವೃದ್ಧರೊಂದಿಗೆ ಆತ್ಮೀಯವಾಗಿ ಮಾತನಾಡಿ, ಯೋಗಕ್ಷೇಮ ವಿಚಾರಿಸಿ, ಆಶ್ರಮಕ್ಕೆ ಬಂದಂತಹ ಅನಿವಾರ್ಯತೆ, ಆಶ್ರಮದಲ್ಲಿ ದೊರೆಯುವ ಸೌಲಭ್ಯಗಳು, ವೃದ್ಧರ ದೈನಂದಿನ ಚಟುವಟಿಕೆಗಳು, ಊಟ ಉಪಚಾರ, ಯೋಗಕ್ಷೇಮ ಮತ್ತು ಅವರ ದೈಹಿಕ ಹಾಗೂ ಮಾನಸಿಕ ಅವಸ್ಥೆಯ ಕುರಿತು ವೃದ್ಧರೊಂದಿಗೆ ಚರ್ಚಿಸಿದರು.
ಸಂಸ್ಥಾಪನಾ ಅಧ್ಯಕ್ಷೆ ಮಣಿಬಾಯಿ ಕಾಂತಿಲಾಲ್ ಷಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಗಮದ ಧೈಯೋದ್ದೇಶಗಳು ಹಾಗೂ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವ ವೃದ್ಧರೊಂದಿಗೆ ಪ್ರೀತಿ ಮತ್ತು ಆದರದಿಂದ ಸಂವಹನ ನಡೆಸಿ ವೃದ್ಧರಿಗೆ ಹಣ್ಣು ಹಂಪಲು ವಿತರಿಸಿದರು. ಪ್ರೊ.ಪಿ.ಜೆ.ಕಟ್ಟಿಮನಿ, ಪ್ರೊ.ಜಿ.ಟಿ.ನಾಯಕ, ಪ್ರೊ.ವೀಣಾ ತಿರ್ಲಾಪೂರ, ಡಾ.ಬಾಪುಗೌಡಾ ಪಾಟೀಲ ಹಾಗೂ ವಿದ್ಯಾರ್ಥಿಗಳು ಇದ್ದರು.