ಆ್ಯಪ್ನಗರ

ಪ್ರವಾಹದ ಬೀತಿಯಲ್ಲಿ ಜಲಾವೃತ ಗ್ರಾಮಗಳು

ನರಗುಂದ : ಮಲಪ್ರಭಾ ನದಿಗೆ ನೀರಿನ ಹರಿವು ಕಡಿಮೆಯಾಗಿದ್ದರಿಂದ ಶನಿವಾರ ಬೆಳಿಗ್ಗೆ ಕೊಣ್ಣೂರ, ಶಿರೋಳ,ವಾಸನ ಗ್ರಾಮಗಳು ಜಲದಿಂದ ಮುಕ್ತವಾಗಿದ್ದವು. ಮತ್ತೆ 50ಸಾವಿರ ಕ್ಯೂಸೆಕ್ಸ್‌ ನೀರು ಹರಿಬಿಟ್ಟಿದ್ದರಿಂದ ಭಾನುವಾರ ಬೆಳಗ್ಗೆಯಿಂದ ಗ್ರಾಮಗಳತ್ತ ಪ್ರವಾಹ ಏರಿಕೆ ಕಂಡು ಜನ ಭಯದಿಂದ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮಾಡಿದೆ.

Vijaya Karnataka 12 Aug 2019, 5:00 am
ನರಗುಂದ : ಮಲಪ್ರಭಾ ನದಿಗೆ ನೀರಿನ ಹರಿವು ಕಡಿಮೆಯಾಗಿದ್ದರಿಂದ ಶನಿವಾರ ಬೆಳಿಗ್ಗೆ ಕೊಣ್ಣೂರ, ಶಿರೋಳ,ವಾಸನ ಗ್ರಾಮಗಳು ಜಲದಿಂದ ಮುಕ್ತವಾಗಿದ್ದವು. ಮತ್ತೆ 50ಸಾವಿರ ಕ್ಯೂಸೆಕ್ಸ್‌ ನೀರು ಹರಿಬಿಟ್ಟಿದ್ದರಿಂದ ಭಾನುವಾರ ಬೆಳಗ್ಗೆಯಿಂದ ಗ್ರಾಮಗಳತ್ತ ಪ್ರವಾಹ ಏರಿಕೆ ಕಂಡು ಜನ ಭಯದಿಂದ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮಾಡಿದೆ.
Vijaya Karnataka Web GDG-11NRD3
ನರಗುಂದ ತಾಲೂಕು ಕೊಣ್ಣೂರ ಗ್ರಾಮ ಮತ್ತೆ ಜಲಾವೃಗೊಂಡಿದೆ.


ಕೊಣ್ಣೂರ ಗ್ರಾಮದ ಹೊಸ ಬಸ್‌ ನಿಲ್ದಾಣ, ನಾಡ ಕಚೇರಿವರೆಗೂ ನೀರು ತುಂಬಿ ಹರಿಯುತ್ತಿದ್ದು ಇನ್ನೂ ಏರಿಕೆ ಸ್ಥಿತಿಯಲ್ಲಿರುವುದು ಕಂಡು ಬಂದಿತು. ಭಾನುವಾರ ಬೆಳಗ್ಗೆಯಿಂದ ಮತ್ತೆ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಜನ ಸುರಕ್ಷಿತ ಸ್ಥಳಕ್ಕೆ ಬಂದು ನಿಂತು ಅಸಹಾಯಕತೆಯಿಂದ ವೀಕ್ಷಿಸುತ್ತಿರುವುದು ಕಂಡು ಬಂದಿತು.

ಬೆಣ್ಣೆ ಹಳ್ಳದ ಪ್ರವಾಹ ಇಳಿಕೆ:
ಬೆಣ್ಣೆ ಹಳ್ಳದ ಪ್ರವಾಹಕ್ಕೆ ಮುಳುಗಡೆಯಾಗಿದ್ದ ಕುರ್ಲಗೇರಿ ಗ್ರಾಮ ಮುಕ್ತವಾಗಿದ್ದು ನರಗುಂದ ಗದಗ ಒಳ ರಸ್ತೆ ಸಂಪರ್ಕ ಆರಂಭವಾಗಿಲ್ಲ. ನಡುಗಡ್ಡೆಯಾಗಿದ್ದ ಸುರಕೋಡ ಗ್ರಾಮಕ್ಕೆ ಸಂಪರ್ಕ ಆರಂಭವಾಗಿದ್ದು ಗ್ರಾಮದ ಮುಂದಿನ ಸೇತುವೆ ಮೇಲೆ ನೀರು ಹರಿಯುತ್ತಿದೆ. ಬೆಣ್ಣೆ ಹಳ್ಳದ ಪ್ರವಾಹ ಉಕ್ಕಿ ಹರಿದು ಪರಿಣಾಮ ಯಾವಗಲ್ಲ ಮುಂದಿನ ಸೇತುವೆ ಮುಳುಗಿ ನರಗುಂದ ರೋಣ ಸಂಪರ್ಕ ಸ್ಥಗಿತಗೊಂಡಿತ್ತು. ಪ್ರವಾಹ ಇಳಿದ ಪರಿಣಾಮ ರೋಣ ರಸ್ತೆ ಸಂಚಾರ ಆರಂಭವಾಗಿದೆ.

ಹುಬ್ಬಳ್ಳಿ ವಿಜಯಪುರ , ನರಗುಂದ ರೋಣ, ನರಗುಂದ ಗದಗ, ಮುನವಳ್ಳಿಗೆ ಹೋಗುವ ಸಂಪರ್ಕ ಕಡಿತಗೊಂಡಿದ್ದರಿಂದ ನರಗುಂದದಲ್ಲಿ ಸಿಲುಕೊಂಡ ಪ್ರಯಾಣಿಕರು ಪರದಾಡಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ