ಆ್ಯಪ್ನಗರ

ಯಶಸ್ವಿ ಬೋಧನೆಗೆ ಸಾಂಸ್ಕೃತಿಕ ಮನಸ್ಸು ಬೇಕು

ಗದಗ: ಬೋಧನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಯಶಸ್ವಿಯಾಗಲು ಸಾಂಸ್ಕೃತಿಕ ಮನಸ್ಸು ಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಮನಸ್ಸಿನ ಕದ ತಟ್ಟಲು ಸಾಧ್ಯವೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಹಿರೇಮಠ ಹೇಳಿದರು.

Vijaya Karnataka 28 Sep 2019, 5:45 pm
ಗದಗ: ಬೋಧನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಯಶಸ್ವಿಯಾಗಲು ಸಾಂಸ್ಕೃತಿಕ ಮನಸ್ಸು ಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಮನಸ್ಸಿನ ಕದ ತಟ್ಟಲು ಸಾಧ್ಯವೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಹಿರೇಮಠ ಹೇಳಿದರು.
Vijaya Karnataka Web successful teaching requires a cultural mindset
ಯಶಸ್ವಿ ಬೋಧನೆಗೆ ಸಾಂಸ್ಕೃತಿಕ ಮನಸ್ಸು ಬೇಕು


ನಗರದ ವಿದ್ಯಾದಾನ ಸಮಿತಿಯ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿಪದವಿ ಪೂರ್ವ ಶಿಕ್ಷಣ ಇಲಾಖೆ, ಪ್ರಾಚಾರ್ಯರ ಸಂಘ ಹಾಗೂ ವಿದ್ಯಾದಾನ ಸಮಿತಿ ಬಾಲಕರ ಪದವಿ ಪೂರ್ವ ಕಾಲೇಜು ಇವುಗಳ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲೆಯ ಪ್ರಾಚಾರ್ಯರ ಹಾಗೂ ಉಪನ್ಯಾಸಕರಿಗೆ ನಡೆದ ಗಾಯನ ಹಾಗೂ ಗುಂಡು ಎಸೆತ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಹಾಗೂ ಉಪನ್ಯಾಸಕರು ವಿಷಯದ ಬಗ್ಗೆ ಆಳವಾದ ಜ್ಞಾನ ಪಡೆಯುವುದಲ್ಲದೆ ಅವರು ಒಬ್ಬ ಗಾಯಕರು, ನಟರು ಹಾಗೂ ಹಾಸ್ಯ ಪ್ರಜ್ಞೆ ಹೊಂದುವುದರ ಜತೆಗೆ ಕ್ರೀಡಾ ಮನೋಭಾವ ತಮ್ಮದಾಗಿಸಿಕೊಳ್ಳಬೇಕು. ವೃತ್ತಿ ಹಾಗೂ ಪ್ರವೃತ್ತಿ ಒಂದು ಗೂಡಿದಾಗ ಮಾತ್ರ ಬೋಧಿಸಿದ ವಿಷಯ ಮನದಟ್ಟು ಮಾಡಲು ಸಾಧ್ಯವೆಂದರು.

ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಗಳು. ವಿವಿಧ ಹವ್ಯಾಸಗಳನ್ನು ಉಪನ್ಯಾಸಕರು ತಮ್ಮ ವ್ಯಕ್ತಿತ್ವದಲ್ಲಿಮೈಗೂಡಿಸಿಕೊಂಡಾಗ ಇದನ್ನು ವಿದ್ಯಾರ್ಥಿಗಳು ಅನುಸರಿಸುತ್ತಾರೆ. ಆ ಮೂಲಕ ವಿದ್ಯಾರ್ಥಿಗಳಲ್ಲಿಸ್ಪರ್ಧಾತ್ಮಕ ಮನೋಭಾವ ಉಂಟಾಗುತ್ತದೆ. ಈ ಕಾರ್ಯವನ್ನು ಉಪನ್ಯಾಸಕರು ಮಾಡುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ, ಶ್ರೀರಂಗ ಹುಯಿಲಗೋಳ, ವೈ.ಸಿ. ಪಾಟೀಲ, ಶಿಕ್ಷಕರು ಇದ್ದರು. ಸಂಗೀತಾ ಕಳಸಾಪೂರ ಪ್ರಾರ್ಥಿಸಿದರು. ಕಿಶೋರಬಾಬು ನಾಗರಕಟ್ಟಿ ನಿರೂಪಿಸಿದರು. ಎಸ್‌. ಐ. ಮೇಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ