ಆ್ಯಪ್ನಗರ

ನೀರಾವರಿ ಯೋಜನೆಗೆ ಕಾಯಕಲ್ಪ

ಶಿರಹಟ್ಟಿ : ತಾಲೂಕಿನ ಜಲ್ಲಿಗೇರಿ ಗ್ರಾಮದಲ್ಲಿ66 ಫಲಾನುಭವಿಗಳಿಗೆ ಶಾಸಕ ರಾಮಣ್ಣ ಲಮಾಣಿ ನಿವೇಶನದ ಹಕ್ಕುಪತ್ರ ವಿತರಿಸಿದರು. ನಂತರ ಮಾತನಾಡಿದ ಅವರು, ರಾಜ್ಯದಲ್ಲಿಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗುಡಿಸಲು ಮುಕ್ತ ರಾಜ್ಯವನ್ನಾಗಿಸುವುದಕ್ಕೆ ಪ್ರತಿಯೊಂದು ಬಡ

Vijaya Karnataka 15 Mar 2020, 5:00 am
ಶಿರಹಟ್ಟಿ : ತಾಲೂಕಿನ ಜಲ್ಲಿಗೇರಿ ಗ್ರಾಮದಲ್ಲಿ66 ಫಲಾನುಭವಿಗಳಿಗೆ ಶಾಸಕ ರಾಮಣ್ಣ ಲಮಾಣಿ ನಿವೇಶನದ ಹಕ್ಕುಪತ್ರ ವಿತರಿಸಿದರು.
Vijaya Karnataka Web support for irrigation project
ನೀರಾವರಿ ಯೋಜನೆಗೆ ಕಾಯಕಲ್ಪ

ನಂತರ ಮಾತನಾಡಿದ ಅವರು, ರಾಜ್ಯದಲ್ಲಿಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗುಡಿಸಲು ಮುಕ್ತ ರಾಜ್ಯವನ್ನಾಗಿಸುವುದಕ್ಕೆ ಪ್ರತಿಯೊಂದು ಬಡ ಕುಟುಂಬಕ್ಕೆ ವಿವಿಧ ವಸತಿ ಯೋಜನೆಗಳಲ್ಲಿಮನೆ ನಿರ್ಮಿಸಿಕೊಡುವ ಗುರಿ ಹೊಂದಿದೆ. ಜಲ್ಲಿಗೇರಿ ಗ್ರಾಮದಲ್ಲಿ3ಎಕರೆ ನಿವೇಶನದಲ್ಲಿಸಧ್ಯ 66 ಅರ್ಹರಿಗೆ ನಿವೇಶನ ಗುರುತಿಸಿ ಹಕ್ಕುಪತ್ರ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಗಳು ಪೂರ್ಣಗೊಂಡರೆ ರೈತರಿಗೆ ಅನುಕೂಲವಾಗಲಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಸೀತಮ್ಮ ಅಕ್ಕಿ, ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ತಾಪಂ ಇಓ ಡಾ. ಎನ್‌.ಎಚ್‌. ಓಲೇಕಾರ, ತಿಮ್ಮರಡ್ಡಿ ಅಳವಂಡಿ, ಈರನಗೌಡ ಪಾಟೀಲ, ನೀಲಮ್ಮ ಮೀಸಿ, ಶರಣಪ್ಪ ಮಾದರ, ಮಲ್ಲವ್ವ ವಡ್ಡರ, ಚಂದ್ರಶೇಖರ ಲಮಾಣಿ, ದೇವಪ್ಪ ಕಲಾಲ, ಬಾಬಣ್ಣ ಲಮಾಣಿ, ಮಹೇಶ ಲಮಾಣಿ, ಬಾಬಣ್ಣ ಅಂಗಡಿ, ಪರಶುರಾಮ ಸಾಳುಂಕಿ, ಪಿಡಿಓ ಎಸ್‌.ಪಿ.ಕಪ್ಪಲಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ