ಆ್ಯಪ್ನಗರ

ಗುಳೆ ಹೋದವರ ಸರ್ವೇ

ಶಿರಹಟ್ಟಿ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನದ ಪ್ರಮಾಣ ಹೆಚ್ಚಿಸುವುದಕ್ಕಾಗಿ ತಾಲೂಕು ಸ್ವೀಪ್‌ ಸಮಿತಿ ಮುಂದಾಗಿ ಅದಕ್ಕಾಗಿ ಸಿಬ್ಬಂದಿಗಳನ್ನು ಸಹ ನಿಯೋಜಿಸಿ ಗುಳೇ ಹೋದ ಮತದಾರರನ್ನು ಗುರುತಿಸಲು ಮಾಹಿತಿ ಕಲೆ ಹಾಕುತ್ತಿದ್ದಾರೆ.

Vijaya Karnataka 2 Apr 2019, 5:00 am
ಶಿರಹಟ್ಟಿ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನದ ಪ್ರಮಾಣ ಹೆಚ್ಚಿಸುವುದಕ್ಕಾಗಿ ತಾಲೂಕು ಸ್ವೀಪ್‌ ಸಮಿತಿ ಮುಂದಾಗಿ ಅದಕ್ಕಾಗಿ ಸಿಬ್ಬಂದಿಗಳನ್ನು ಸಹ ನಿಯೋಜಿಸಿ ಗುಳೇ ಹೋದ ಮತದಾರರನ್ನು ಗುರುತಿಸಲು ಮಾಹಿತಿ ಕಲೆ ಹಾಕುತ್ತಿದ್ದಾರೆ.
Vijaya Karnataka Web survey of those who have fled
ಗುಳೆ ಹೋದವರ ಸರ್ವೇ


ತಾಂಡಾಗಳಲ್ಲಿ ಸಮೀಕ್ಷೆ :

ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಬರುವಂತಹ ಆದ್ರಳ್ಳಿ ತಾಂಡಾ, ಅಡರಕಟ್ಟಿ ತಾಂಡಾ, ಹರದಗಟ್ಟಿ ತಾಂಡಾ, ಕುಂದ್ರಳ್ಳಿ ತಾಂಡಾ, ಶೆಟ್ಟಿಕೇರಿ ತಾಂಡಾ, ಛಬ್ಬಿ ತಾಂಡಾ, ಗುಡ್ಡದಪುರ, ದೊಡ್ಡೂರು, ದೊಡ್ಡೂರು ತಾಂಡಾ, ಮುನಿಯನ್‌ ತಾಂಡಾ, ಉಳ್ಳಟ್ಟಿ, ಯಲ್ಲಾಪೂರ, ಉಂಡೇನಹಳ್ಳಿ, ಅಕ್ಕಿಗುಂದ ತಾಂಡಾ, ನೆಲೋಗಲ್‌ ತಾಂಡಾ, ಬೂದಿಹಾಳ ತಾಂಡಾ, ಜಲ್ಲಿಗೇರಿ ತಾಂಡಾ, ಮಾಗಡಿ, ಶಿವಾಜಿನಗರ ತಾಂಡಾ, ದೇವಿಹಾಳ ತಾಂಡಾ, ಸೂರಣಗಿ ತಾಂಡಾ, ಸುವರ್ಣಗಿರಿ ತಾಂಡಾ, ಸೇವಾನಗರ ಹೀಗೆ 23 ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಗುಳೆ ಹೋಗಿರುವ ಮಾಹಿತಿ ಮೇರೆಗೆ ಆಯಾ ಗ್ರಾಮಕ್ಕೆ ಸಂಬಂಧಿಸಿದಂತಹ ಗ್ರಾಪಂ ಬಿಲ್‌ ಕಲೆಕ್ಟರ್‌ ಹಾಗೂ ವಾಟರ್‌ಮನ್‌ಗಳನ್ನು ಸಮೀಕ್ಷೆ ನಡೆಸುವುದಕ್ಕಾಗಿ ತಾಲೂಕು ಸ್ವೀಪ್‌ ಸಮಿತಿ ನಿಯೋಜಿಸಿದೆ.

ಮನೆ ಮನೆಗೆ ತೆರಳಿ ಮಾಹಿತಿ :

ವಿವಿಧ ಕಾರಣಾಂತರಗಳಿಂದ ತಾಂಡಾಗಳಲ್ಲಿ ಗುಳೆ ಹೋದ ಮತದಾರರನ್ನು ಗುರುತಿಸಿ ಅವರನ್ನು ಅವರ ಕುಟುಂಬದ ಸದಸ್ಯರ ಮೂಲಕ ಮೊಬೈಲ್‌ ನಂಬರ್‌ ಪಡೆದು ನಂತರ ಅವರನ್ನು ಸಂಪರ್ಕಿಸಿ ಏ.23ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಪ್ರೇರೆಪಿಸುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಲಾಗಿದೆ. ಹಾಗೂ ನಿಯೋಜಿಸಿದ ಸಿಬ್ಬಂದಿಗಳು ತಮಗೆ ವಹಿಸಿದ ಗ್ರಾಮ,ತಾಂಡಾಗಳಿಗೆ ಭೇಟಿ ನೀಡಿ ಗುಳೆ ಹೋದ ಮತದಾರರನ್ನು ಗುರುತಿಸಿ ನಮೂನೆ-1ರಲ್ಲಿ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿದ ಬಗ್ಗೆ ನಮೂನೆ-2ರಂತೆ ಮಾಹಿತಿ ತಯಾರಿಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೂಲಕ ತಾಪಂಗೆ ಮಾಹಿತಿ ಸಲ್ಲಿಸಬೇಕೆಂದು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಮತದಾರ ಹೊರಗುಳಿಯಬಾರದು :

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ತಮಗೆ ಸೂಕ್ತವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತಮ ಸರಕಾರ ರಚಿಸಲು ಸಾರ್ವತ್ರಿಕ ಚುನಾವಣೆಗಳು ಅನುವು ಮಾಡಿಕೊಡುತ್ತವೆ. ಈ ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಯಾವೊಬ್ಬ ಮತದಾರನೂ ಹೊರಗುಳಿಯಬಾರದು ಮತ್ತು ಪ್ರತಿಯೊಂದು ಮತವೂ ಅತ್ಯಮೂಲ್ಯ ಎಂಬ ನೆಲಗಟ್ಟಿನಡಿ ಭವಿಷ್ಯದ ಮತದಾರರು, ನೂತನ ಮತದಾರರು ಮತ್ತು ನೊಂದಣಿ ರಹಿತ ಯುವ ಮತದಾರರನ್ನು ಗುರಿಯನ್ನಾಗಿಸಿಕೊಂಡು ಕೆಳಹಂತದಲ್ಲೂ ಸಹ ಸ್ವಿಪ್‌ ಸಮಿತಿ ಮೂಲಕ ಗುಳೆ ಹೋದವರನ್ನು ಗುರುತಿಸಿ ಮತದಾನಕ್ಕೆ ಕರೆತರಲು ಪ್ರೇರೇಪಿಸುತ್ತಿರುವುದು ಶ್ಲಾಘನೀಯ ಕಾರ‍್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ