ಆ್ಯಪ್ನಗರ

ಯೂರಿಯಾ ದಾಸ್ತಾನಿಗೆ ಕ್ರಮ ಕೈಗೊಳ್ಳಿ

ನರಗುಂದ: ತಾಲೂಕಿನ ಎಲ್ಲಕೃಷಿ ಪರಿಕರಗಳ ಮಾರಾಟಗಾರರು ಕಡ್ಡಾಯವಾಗಿ ಗೊಬ್ಬರ ದಾಸ್ತಾನು, ಬೆಲೆ ಫಲಕ ಹಾಕುವುದು, ಯೂರಿಯಾ ದಾಸ್ತಾನು ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದು ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸಹಾಯ ಕೃಷಿ ನಿರ್ದೇಶಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Vijaya Karnataka 22 Sep 2019, 5:00 am
ನರಗುಂದ: ತಾಲೂಕಿನ ಎಲ್ಲಕೃಷಿ ಪರಿಕರಗಳ ಮಾರಾಟಗಾರರು ಕಡ್ಡಾಯವಾಗಿ ಗೊಬ್ಬರ ದಾಸ್ತಾನು, ಬೆಲೆ ಫಲಕ ಹಾಕುವುದು, ಯೂರಿಯಾ ದಾಸ್ತಾನು ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದು ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸಹಾಯ ಕೃಷಿ ನಿರ್ದೇಶಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Vijaya Karnataka Web take action for urea storage
ಯೂರಿಯಾ ದಾಸ್ತಾನಿಗೆ ಕ್ರಮ ಕೈಗೊಳ್ಳಿ


ಎಲ್ಲರಸಗೊಬ್ಬರ ಮಾರಾಟಗಾರರು ತಮ್ಮ ಮಳಿಗೆಯಲ್ಲಿದಾಸ್ತಾನು ಹಾಗೂ ಮಾರಾಟ ಬೆಲೆ ಫಲಕಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು.

ಫಲಕದಲ್ಲಿರುವ ಅಂಕಿ ಅಂಶಕ್ಕೂ ಭೌತಿಕ ದಾಸ್ತಾನಿಗೂ ತಾಳೆಯಾಗುವಂತಿರಬೇಕು. ಬೆಳವಣೆಗೆ ಹಂತದಲ್ಲಿರುವ ವಿವಿಧ ಬೆಳೆಗಳಿಗೆ ಮೇಲ್ಗೊಬ್ಬರವಾಗಿ ಯೂರಿಯಾ ನೀಡಲು ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ತಾಲೂಕಿನಾದ್ಯಂತ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಸಾಕಷ್ಟು ದಾಸ್ತಾನು ಇಟ್ಟುಕೊಳ್ಳಲು ಮುಂಜಾಗೃತೆ ವಹಿಸಬೇಕು.

ಹೆಚ್ಚಿನ ಬೇಡಿಕೆಯಿರುವ ಸಂದರ್ಭ ಬಳಸಿಕೊಂಡು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಯಾರೂ ಮಾರಾಟ ಮಾಡಬಾರದು ಎಂದು ಸಹಾಯ ಕೃಷಿ ನಿರ್ದೇಶಕರು ಚನ್ನಪ್ಪ ಅಂಗಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ