ಆ್ಯಪ್ನಗರ

ಕೃಷಿ, ಹೈನುಗಾರಿಕೆಯಿಂದ ಲಾಭ ಪಡೆಯಿರಿ

ಡಂಬಳ : ಹಲವು ವರ್ಷಗಳ ಕೃಷಿ ಕ್ಷೇತ್ರದ ಅನುಭವದಿಂದ ಅವಿದ್ಯಾವಂತರು ಪ್ರಗತಿಪರ ರೈತರಾಗಿ ಆರ್ಥಿಕ ಸುಧಾರಣೆಯಾಗಿದ್ದು ವಿದ್ಯಾವಂತರು ಉದ್ಯೋಗವಿಲ್ಲದೆ ಪರದಾಡುವ ಬದಲು ತಮ್ಮಲ್ಲಿನ ಜ್ಞಾನ ಬಳಸಿಕೊಂಡು ಕೃಷಿ, ಹೈನುಗಾರಿಕೆ ವೃತ್ತಿಯಲ್ಲಿ ನಿರತರಾದರೆ ಸರಕಾರಿ ಖಾಸಗಿ ಕಂಪನಿಯಲ್ಲಿ ದುಡಿಯುವ ನೌಕರರ ಸಂಬಳಕ್ಕಿಂತ ಪ್ರತಿ ತಿಂಗಳು ಉತ್ತಮ ಆದಾಯ ಪಡೆಯಬಹುದೆಂದು ತೋಂಟದ ಡಾ.ಸಿದ್ದರಾಮ ಸ್ವಾಮಿಗಳು ಹೇಳಿದರು.

Vijaya Karnataka 21 Feb 2019, 5:00 am
ಡಂಬಳ : ಹಲವು ವರ್ಷಗಳ ಕೃಷಿ ಕ್ಷೇತ್ರದ ಅನುಭವದಿಂದ ಅವಿದ್ಯಾವಂತರು ಪ್ರಗತಿಪರ ರೈತರಾಗಿ ಆರ್ಥಿಕ ಸುಧಾರಣೆಯಾಗಿದ್ದು ವಿದ್ಯಾವಂತರು ಉದ್ಯೋಗವಿಲ್ಲದೆ ಪರದಾಡುವ ಬದಲು ತಮ್ಮಲ್ಲಿನ ಜ್ಞಾನ ಬಳಸಿಕೊಂಡು ಕೃಷಿ, ಹೈನುಗಾರಿಕೆ ವೃತ್ತಿಯಲ್ಲಿ ನಿರತರಾದರೆ ಸರಕಾರಿ ಖಾಸಗಿ ಕಂಪನಿಯಲ್ಲಿ ದುಡಿಯುವ ನೌಕರರ ಸಂಬಳಕ್ಕಿಂತ ಪ್ರತಿ ತಿಂಗಳು ಉತ್ತಮ ಆದಾಯ ಪಡೆಯಬಹುದೆಂದು ತೋಂಟದ ಡಾ.ಸಿದ್ದರಾಮ ಸ್ವಾಮಿಗಳು ಹೇಳಿದರು.
Vijaya Karnataka Web GDG-20DML1
ಡಂಬಳದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ನಡೆದ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ತೋಂಟದ ಡಾ.ಸಿದ್ದರಾಮ ಸ್ವಾಮಿಗಳು ಮಾತನಾಡಿದರು.


ಗ್ರಾಮದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ಆಯೋಜನೆ ಮಾಡಿರುವ ಕೃಷಿ ವಸ್ತು ಪ್ರದರ್ಶನ ಚಾಲನೆ ನೀಡಿ ಮಾತನಾಡಿ, ನಿವೃತ್ತಿ ಹೊಂದಿದ ನೌಕರರು, ಎಂಜನಿಯರ್‌, ಪದವಿ ಸ್ನಾತಕೋತ್ತರ ಪದವಿ ಪಡೆದ ನೂರಾರು ಯುವಕರು ಕೃಷಿ,ತೋಟಗಾರಿಕೆ, ಹೈನುಗಾರಿಕೆ,ಮೀನುಗಾರಿಕೆ, ಕುರಿ ಸಾಕಾಣಿಕೆಯಲ್ಲಿ ವೃತ್ತಿ ಕೈಗೊಂಡು ಉತ್ತಮ ಆಧಾಯವನ್ನು ಪಡೆಯುತ್ತಿದ್ದು ಹಲವು ಕೂಲಿ ಕಾರ್ಮಿಕರಿಗೂ ಉದ್ಯೋಗವನ್ನು ನೀಡಿದ್ದಾರೆ ಹೀಗಾಗಿ ವೈಜ್ಞಾನಿಕ ರೀತಿಯಲ್ಲಿ ಸುಧಾರೀತಿ ತಳಿಯ ಬೀಜಗಳನ್ನು ಬಿತ್ತನೆ ಮಾಡಿ ವಿವಿಧ ಬೆಳೆಗಳನ್ನು ಬೆಳೆಯಬೇಕು ವಿಶೇಷವಾಗಿ ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಕೃಷಿ ಅಧಿಕಾರಿ ಎಸ್‌.ಬಿ ರಾಮೇನಹಳ್ಳಿ ಸಾವಯವ ಭಾಗ್ಯ ಯೋಜನೆ, ಆಧುನಿಕ ಕೃಷಿಯಲ್ಲಿ ಯಾಂತ್ರಿಕರಣ, ಭೂ ಚೇತನ ಯೋಜನೆ, ಕೃಷಿ ಭಾಗ್ಯ ಯೋಜನೆ,ತೋಟಗಾರಿಕೆ ಇಲಾಖೆ ಯೋಜನೆಗಳು,ಮಣ್ಣು ಆರೋಗ್ಯ ಅಭಿಯಾನ, ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ, ಮಣ್ಣು ಪರೀಕ್ಷಾ ಯೋಜನೆಗಳು, ಮೀನುಗಾರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಜಾತ್ರಾ ಕಮೀಟಿ ಉಪಾಧ್ಯಕ್ಷ ಗವಿಸಿದ್ದಪ್ಪ ಬಿಸನಹಳ್ಳಿ, ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ.ಸಿ.ಆರ್‌. ಹಿರೇಮಠ, ಮರಿತಮ್ಮಪ್ಪ ಆದಮ್ಮನವರ, ಜಿ.ವಿ.ನಂಜಪ್ಪನವರ, ತಾಪಂ ಮಾಜಿ ಉಪಾಧ್ಯಕ್ಷ ಎನ್‌.ಟಿ. ಪ್ಯಾಟಿ ಕೃಷಿ ಇಲಾಖೆಯ ಗೌರಿಶಂಕರ ಸಜ್ಜನ, ವೈ.ವೈ.ಬನ್ನಿಕೊಪ್ಪ, ಎಸ್‌.ಬಿ.ಸೂಡಿ, ಬಸವರಾಜ ಬೇವಿನಮರದ,ಬಸವರಾಜ ಪ್ಯಾಟಿ, ಎನ್‌.ಬಿ. ಹೊಸಳ್ಳಿ, ಆರ್‌.ಎಚ್‌. ಹಳೇಮನಿ,ಟಿ.ವಿ. ರಾಟಿ, ಮಹೇಶ ಕೊಳ್ಳಾರ, ಡಿ.ಡಿ ಸೂರಟೂರ, ಶಂಭು ಮರಿಚಣ್ಣನವರ ಇತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ