ಆ್ಯಪ್ನಗರ

ರೈತರು ಪಿಂಚಣಿ ಯೋಜನೆ ಪ್ರಯೋಜನ ಪಡೆಯಿರಿ

ರೋಣ: ರೈತರಿಗೆ ಪಿಂಚಣಿ ಒದಗಿಸಲು ಕೇಂದ್ರ ಸರಕಾರ ಬಜೆಟ್‌ನಲ್ಲಿಘೋಷಣೆ ಮಾಡಿದ್ದ ಪ್ರಧಾನಮಂತ್ರಿ ಕಿಸಾನ್‌ ಮಾನ್‌ಧನ್‌ ಯೋಜನೆಗೆ ನೋಂದಣಿ ಆರಂಭವಾಗಿದ್ದು, ಅರ್ಹ ರೈತರು ಜನಪರ ಯೋಜನೆಯ ಪ್ರಯೋಜನ ಪಡೆಯುವ ಮೂಲಕ ಆರ್ಥಿಕವಾಗಿ ಸದೃಡರಾಗಬೇಕು ಎಂದು ತಹಸೀಲ್ದಾರ ಶರಣಮ್ಮ ಕಾರಿ ಹೇಳಿದರು

Vijaya Karnataka 21 Oct 2019, 5:00 am
ರೋಣ: ರೈತರಿಗೆ ಪಿಂಚಣಿ ಒದಗಿಸಲು ಕೇಂದ್ರ ಸರಕಾರ ಬಜೆಟ್‌ನಲ್ಲಿಘೋಷಣೆ ಮಾಡಿದ್ದ ಪ್ರಧಾನಮಂತ್ರಿ ಕಿಸಾನ್‌ ಮಾನ್‌ಧನ್‌ ಯೋಜನೆಗೆ ನೋಂದಣಿ ಆರಂಭವಾಗಿದ್ದು, ಅರ್ಹ ರೈತರು ಜನಪರ ಯೋಜನೆಯ ಪ್ರಯೋಜನ ಪಡೆಯುವ ಮೂಲಕ ಆರ್ಥಿಕವಾಗಿ ಸದೃಡರಾಗಬೇಕು ಎಂದು ತಹಸೀಲ್ದಾರ ಶರಣಮ್ಮ ಕಾರಿ ಹೇಳಿದರು
Vijaya Karnataka Web take advantage of the farmers pension scheme
ರೈತರು ಪಿಂಚಣಿ ಯೋಜನೆ ಪ್ರಯೋಜನ ಪಡೆಯಿರಿ


ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಮಾನ್‌ಧನ್‌ ರೈತರ ಪಿಂಚಣಿ ಯೋಜನೆಯ ಪ್ರಚಾರ ಪ್ರತಿಗಳ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರಿಗೆ ಮಾಸಿಕ 3000 ಸಾವಿರ ರೂ.ಗಳ ಯೋಜನೆ ಇದಾಗಿದ್ದು, ನೋಂದಣಿ ಕಾರ್ಯ ಶುಕ್ರವಾರದಿಂದಲೇ ಆರಂಭವಾಗಿದೆ. ಬಹುತೇಕ ರೈತರು ನೋಂದಣಿ ಮಾಡಿಕೊಳ್ಳಲು ಉತ್ಸುಕರಾಗಿದ್ದು, ಅಗತ್ಯ ಮಾಹಿತಿ ಒದಗಿಸಲಾಗುತ್ತಿದೆ. ತಾಲೂಕಿನಲ್ಲಿಹೆಚ್ಚಿನ ರೈತರು ನೋಂದಣಿ ಮಾಡಿಸಿ, ಪಿಂಚಣಿ ಯೋಜನೆಯ ಲಾಭ ಪಡೆಯಬೇಕು. ಕಷ್ಟಪಟ್ಟು ಕೃಷಿ ಕೆಲಸ ಮಾಡಿದರೂ ರೈತರಿಗೆ ಅಗತ್ಯದಷ್ಟು ಸಂಪಾದನೆ ಆಗುತ್ತಿಲ್ಲ. ಹೀಗಾಗಿ ಸಾಮಾಜಿಕ ಭದ್ರತೆಯ ಯೋಜನೆ ಅತ್ಯಗತ್ಯ. ರೈತರ ಆದಾಯ ವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಹಲವು ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿಪಿಂಚಣಿ ಯೋಜನೆಯನ್ನೂ ರೂಪಿಸಿದೆ. ರೈತರಿಗೆ ಯೋಜನೆ ತಲುಪಿಸಲು ಕಂದಾಯ ಇಲಾಖೆ ಒತ್ತು ನೀಡಿದ್ದು, ರೈತರು ಪ್ರಯೋಜನ ಪಡೆಯಬೇಕು ಎಂದರು

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ಪಾಟೀಲ ಮಾತನಾಡಿ, ರೈತರು ಸರಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು. ರೈತರ ಶ್ರಮದಿಂದ ಇಂದು ಜಗತ್ತು ಸಂಪತ್ತಿನಿಂದ ಕೂಡಿದೆ. ಸರ್ವರಿಗೂ ಆಹಾರ ಧಾನ್ಯಗಳು ದೊರೆಯುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಸಂಕಷ್ಟ ಅರಿತು ಇಂತಹ ಮಹತ್ವದ ಹಲವು ಯೋಜನೆ ಜಾರಿಗೆ ತಂದಿದೆ. ಅವುಗಳಿಗೆ ಅಗತ್ಯ ಅನುದಾನ ಮೀಸಲಿಟ್ಟಿವೆ. ಹೀಗಾಗಿ ರೈತರು ಸಂಬಂದಿಸಿದ ಇಲಾಖೆಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಕಾಲಕಾಲಕ್ಕೆ ಬರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು

ಪ್ರೇಮಾ ನಾಯಕ, ತೇಲಿ, ತಾಪಂ ಇಒ ಸಂತೋಷ ಪಾಟೀಲ, ಆರ್‌.ಬಿ.ಬೇವಿನಮರದ ಸೇರಿದಂತೆ ಕೃಷಿ,ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಾಲೂಕಿನ ಹಲವು ಗ್ರಾಮಗಳ ರೈತರು, ರೈತ ಮುಖಂಡರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ