ಆ್ಯಪ್ನಗರ

ಮಣ್ಣಿನ ಮಡಕೆ ಒಯ್ಯಿರಿ, ತಣ್ಣನೆ ನೀರು ಕುಡಿಯಿರಿ...

ರೋಣ: ಮಡಕೆಯಲ್ಲಿ ಮಾಡಿದ ಅನ್ನ, ಮುದ್ದೆಯ ಸವಿ ಸವಿದವನೇ ಬಲ್ಲ. ಅಲ್ಲದೆ ಮಡಕೆಯಲ್ಲಿ ಮಾಡಿದ ಸಾಂಬಾರಿನ ಘಮಲು ನೆನೆದರೆ ಅಬ್ಬಾ! ಬಾಯಲ್ಲಿ ನೀರುಕ್ಕಿಸುತ್ತದೆ. ಇಂಥಾ ಮಣ್ಣಿನ ಮಡಕೆಗೆ ಬೇಸಿಗೆ ಬಂತೆಂದರೆ ಸುಗ್ಗಿಯೋ ಸುಗ್ಗಿ. ಜತೆಗೆ ಕುಂಬಾರರಿಗೂ... ವ್ಯಾಪಾರಿಗಳಿಗೂ... ಮತ್ತು ಮಡಕೆ ಕೊಂಡೋಯ್ದು ಅದರಲ್ಲಿನ ನೀರನ್ನು ಕುಡಿದು ಬಾಯಾರಿಕೆ ತಣಿಸಿಕೊಳ್ಳುವ ಜನರಿಗೂ ಸಹ...

Vijaya Karnataka 12 Apr 2018, 5:00 am
ರೋಣ: ಮಡಕೆಯಲ್ಲಿ ಮಾಡಿದ ಅನ್ನ, ಮುದ್ದೆಯ ಸವಿ ಸವಿದವನೇ ಬಲ್ಲ. ಅಲ್ಲದೆ ಮಡಕೆಯಲ್ಲಿ ಮಾಡಿದ ಸಾಂಬಾರಿನ ಘಮಲು ನೆನೆದರೆ ಅಬ್ಬಾ! ಬಾಯಲ್ಲಿ ನೀರುಕ್ಕಿಸುತ್ತದೆ. ಇಂಥಾ ಮಣ್ಣಿನ ಮಡಕೆಗೆ ಬೇಸಿಗೆ ಬಂತೆಂದರೆ ಸುಗ್ಗಿಯೋ ಸುಗ್ಗಿ. ಜತೆಗೆ ಕುಂಬಾರರಿಗೂ... ವ್ಯಾಪಾರಿಗಳಿಗೂ... ಮತ್ತು ಮಡಕೆ ಕೊಂಡೋಯ್ದು ಅದರಲ್ಲಿನ ನೀರನ್ನು ಕುಡಿದು ಬಾಯಾರಿಕೆ ತಣಿಸಿಕೊಳ್ಳುವ ಜನರಿಗೂ ಸಹ...
Vijaya Karnataka Web take clay pot drink cold water
ಮಣ್ಣಿನ ಮಡಕೆ ಒಯ್ಯಿರಿ, ತಣ್ಣನೆ ನೀರು ಕುಡಿಯಿರಿ...


ಹೌದು, ಈ ಬಾರಿಯ ಬೇಸಿಗೆ ಸ್ವಲ್ಪ ಜೋರಾಗಿಯೇ ಇದೆ. ಮಾರ್ಚ ಮಧ್ಯದಲ್ಲಿಯೇ ನೆತ್ತಿಸುಡುವ ರಣಬಿಸಿಲಿಗೆ ಜನ ಸುಸ್ತಾಗಿ ಛತ್ರಿ ಹಿಡಿದು ಓಡಾಡಿದ್ದಾರೆ. ಇಂಥ ಸಂದರ್ಭದಲ್ಲಿ ಜ್ಯೂಸ್‌, ಪಾನಕ, ಎಳನೀರು, ಕಲ್ಲಂಗಡಿ, ಮಜ್ಜಿಗೆ ಮಾರುವ ಮಾರಾಟಗಾರರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನರು ತಣ್ಣನೆಯ ನೀರಿಗಾಗಿ ಮೊರೆ ಹೋಗುತ್ತಿರುವುದಂತೂ ನಿಜ. ಅದರಲ್ಲೂ ಈಗ ಎಲ್ಲರ ಚಿತ್ತ ಮಡಕೆಕೊಳ್ಳುವುದರತ್ತ ನೆಟ್ಟಿದೆ.

ಮಡಕೆಯಲ್ಲಿನ ನೀರು ಫ್ರಿಜ್‌ನಲ್ಲಿನ ನೀರಿಗಿಂತಲೂ ಮೇಲು. ಈ ದಿಸೆಯಲ್ಲಿ ಮಡಕೆ ಮಾರುವ ವ್ಯಾಪಾರಿಗಳು ಮಳಿಗೆಗಳು, ಪುಟ್‌ಪಾತ್‌ಗಳು, ಹೆದ್ದಾರಿ- ರಸ್ತೆಗಳ ಆಸುಪಾಸಿನಲ್ಲಿ ಮಡಕೆಗಳನ್ನು ಸಂಗ್ರಹಿಸಿ ಗ್ರಾಹಕರಿಗಾಗಿ ಕಾಯುತ್ತಿದ್ದಾರೆ. ಅಲ್ಲದೆ ಜನರು ಮಣ್ಣಿನ ಮಡಕೆಯತ್ತ ಮನಸು ಮಾಡುವುದು ಬೇಸಿಗೆಯ ದಿನಗಳಲ್ಲಿ ಸಹಜವೂ ಆಗಿದೆ.

ಬೇಸಿಗೆ ಕುಂಬಾರರಿಗೆ ವರ: ಇದು ಮಡಕೆ ತಯಾರಿಸುವ ಕುಂಬಾರರಿಗೆ ಉತ್ತಮ ಆದಾಯ ಗಳಿಸಲು ಸದವಕಾಶವಾಗಿದೆ. ಆದ್ದರಿಂದಲೇ ಕುಂಬಾರರು ಹೆಚ್ಚಿನ ಬಂಡವಾಳ ಹೂಡಿ ಬಗೆ ಬಗೆಯ ಮಡಕೆಗಳ ಜತೆಗೆ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ಈಗ ಜನರು ಸಾಮಾನ್ಯ ಬಗೆಯ ಮಡಕೆಗಳನ್ನು ಕೊಳ್ಳುವುದಕ್ಕಿಂತ ಸ್ವಲ್ಪ ನೋಡಲು ಆಕರ್ಷಕವಾಗಿರುವ, ನಳದ ಸೌಲಭ್ಯವಿರುವ ಮಡಕೆ ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸಹಜವಾಗಿಯೇ ಕುಂಬಾರರು ಖುಷಿಯಲ್ಲಿದ್ದಾರೆ. ಆದರೂ ತಾವು ಹಾಕಿದ ಬಂಡವಾಳದ ಜತೆ ಸ್ವಲ್ಪ ಅದಾಯ ಸಿಕ್ಕರೆ ಸಾಕು ಎನ್ನುತ್ತಾರೆ ಸೂಡಿ ಗ್ರಾಮದ ಮಡಕೆ ತಯಾರಕ ಸಂಗನಬಸಪ್ಪ ಕುಂಬಾರ.

ಮಡಕೆಗಳ ಬೆಲೆ ತುಸು ದುಬಾರಿಯಾದರೂ ಕೊಳ್ಳಲು ಬರುವ ಗ್ರಾಹಕರಿಗೇನೂ ಕೊರತೆಯಿಲ್ಲ. ಬೇಸಿಗೆ ದಾಹ ತಣಿಸಲು ಮಡಕೆಯ ನೀರಿಗಾಗಿ ಮೊರೆ ಹೋಗದವರಿಲ್ಲ. ಮಡಕೆಗಳ ಬೆಲೆ ದುಬಾರಿ ಎನ್ನಿಸಿದರೂ ಬೇಸಿಗೆಯ ದಾಹ, ಸುಸ್ತನ್ನು ಹೋಗಲಾಡಿಸಲು ಮಡಕೆಯ ನೀರಿಗಿಂತ ಉತ್ತಮವಾದದ್ದು ಮತ್ತೊಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ