ಆ್ಯಪ್ನಗರ

ನಾಳೆ ಪ್ರತಿಭಾ ಪುರಸ್ಕಾರ ಸಮಾರಂಭ

ಗದಗ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಜಿಲ್ಲಾರಡ್ಡಿ ಸಮಾಜ ಸಂಘದ ಆಶ್ರಯದಲ್ಲಿಅ.20 ರಂದು ಇದೇ ಮೊದಲ ಬಾರಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ,ಪಿಯುಸಿಯಲ್ಲಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಶೇಖರಡ್ಡಿ ಗದ್ದಿಕೇರಿ ಹೇಳಿದರು.

Vijaya Karnataka 19 Oct 2019, 5:00 am
ಗದಗ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಜಿಲ್ಲಾರಡ್ಡಿ ಸಮಾಜ ಸಂಘದ ಆಶ್ರಯದಲ್ಲಿಅ.20 ರಂದು ಇದೇ ಮೊದಲ ಬಾರಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ,ಪಿಯುಸಿಯಲ್ಲಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಶೇಖರಡ್ಡಿ ಗದ್ದಿಕೇರಿ ಹೇಳಿದರು.
Vijaya Karnataka Web talent reception ceremony tomorrow
ನಾಳೆ ಪ್ರತಿಭಾ ಪುರಸ್ಕಾರ ಸಮಾರಂಭ


ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು. ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿನಡೆಯುವ ಸಮಾರಂಭದಲ್ಲಿಬಳಗಾನೂರಿನ ಶಿವಶಾಂತವೀರ ಶರಣರು ಸಾನ್ನಿಧ್ಯ ಹಾಗೂ ಅಬ್ಬಿಗೇರಿಯ ಬಸವರಾಜ ಸ್ವಾಮೀಜಿ ಸಮ್ಮುಖವಹಿಸುವರು. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಯೋಗಿ ವೇಮನ ಜಿಲ್ಲಾರಡ್ಡಿ ಸಮಾಜ ಸಂಘದ ಗೌರವಾಧ್ಯಕ್ಷ, ಮಾಜಿ ಸಂಸದ ಆರ್‌.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಎಚ್‌.ಕೆ. ಪಾಟೀಲ ಆಗಮಿಸುವರು. ಮಾಜಿ ಶಾಸಕ ಬಿ.ಆರ್‌. ಯಾವಗಲ್‌, ಜಿ.ಎಸ್‌. ಪಾಟೀಲ, ಡಿ.ಆರ್‌. ಪಾಟೀಲ, ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಸದಸ್ಯರಾದ ಶೋಭಾ ಮೇಟಿ, ರೇಖಾ ಅಳವಂಡಿ, ರಾಜೂಗೌಡ ಕೆಂಚನಗೌಡ್ರ, ತಾಪಂ ಅಧ್ಯಕ್ಷ ಎಸ್‌.ಎಸ್‌. ಪಾಟೀಲ ಉಪಸ್ಥಿತರಿರುವರು ಎಂದರು.

ಪುರಸ್ಕರಿಸಲ್ಪಡುವ ಪ್ರತಿಭೆಗಳು: ಎಸ್‌ಎಸ್‌ಎಲ್‌ಸಿ (ಕನ್ನಡ ಮಾಧ್ಯಮ) ಕೀರ್ತಿ ಮಮಟಗೇರಿ,, ತ್ರಿವೇಣಿ ನೀಲಣ್ಣವರ, ಅಂಜಲಿ ಪಾಟೀಲ, . ಇಂಗ್ಲೀಷ್‌ ಮಾಧ್ಯಮ: ಕೃಷ್ಣಗೌಡ ಪಾಟೀಲ, ಶ್ರೀನಿಧಿ ಮುಂಭಾರಡ್ಡಿ, ಸಂಗೀತ ಶೆಟ್ಟರಡ್ಡಿ, . ಸಿಬಿಎಸ್‌ಇ ವಿಭಾಗ: ಐಶ್ವರ್ಯ ಮುದರಡ್ಡಿ, , ಶ್ರೇಯಾ ರಡ್ಡಿ, ವರ್ಷಾ ಮೇಟಿ, ಅನಿತಾ ಬಂಡಿವಾಡ, . ಕಾಲೇಜು ವಿಭಾಗ-ಕಲಾ ವಿಭಾಗ: ಚನ್ನಬಸಪ್ಪ ಕತ್ತಿ, ಪವಿತ್ರಾ ಹುಬ್ಬಳ್ಳಿ, ಸಾಗರ ಹೊಂಬಳ, . ವಿಜ್ಞಾನ ವಿಭಾಗ: ಅಂಜಲಿ ಸೋಮಪ್ಪ ಮೊರಬರಡ್ಡಿ, ಸಂತೋಷ ಕಬ್ಬೇರಳ್ಳಿ, ರೇವತಿ ಅಜ್ಜಿ, . ವಾಣಿಜ್ಯ ವಿಭಾಗ: ಸಾಗರ ಹದ್ಲಿ, ನವೀನ ಬೆಂಕಿ ಅವರಿಗೆ ಪುರಸ್ಕಾರ ನೀಡಲಾಗುವುದು ಎಂದರು. ನಿವೃತ್ತ ಡಿಡಿಪಿಐ ಎ.ಎನ್‌. ನಾಗರಳ್ಳಿ, ರವಿ ಕುಲಕರ್ಣಿ, ಶಂಕರ ಮುದರಡ್ಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ