ಆ್ಯಪ್ನಗರ

ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಿಗೆ ಸನ್ಮಾನ

ಮುಂಡರಗಿ : ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಡಾ.ಬಸವರಾಜ ಬಳ್ಳಾರಿ ಅವರನ್ನು ಇಲಾಖೆಯ ಡಿ ದರ್ಜೆ ನೌಕರರು ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಸನ್ಮಾನಿಸಿದರು.

Vijaya Karnataka 29 Jun 2019, 5:00 am
ಮುಂಡರಗಿ : ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಡಾ.ಬಸವರಾಜ ಬಳ್ಳಾರಿ ಅವರನ್ನು ಇಲಾಖೆಯ ಡಿ ದರ್ಜೆ ನೌಕರರು ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಸನ್ಮಾನಿಸಿದರು.
Vijaya Karnataka Web taluk government employees association president felicitated
ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಿಗೆ ಸನ್ಮಾನ


ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಸವರಾಜ ಬಳ್ಳಾರಿ, ತಾಲೂಕು ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವ ಹಿರಿಯರಿಗೆ ಗೌರವ ತರುವ ಕೆಲಸ ಮಾಡುತ್ತೇನೆ. ನೌಕರರ ಸಮುದಾಯ ಭವನವನ್ನು 15 ತಿಂಗಳ ಅವಧಿಯಲ್ಲಿಯೇ ಪೂರ್ಣಗೊಳಿಸುವ ಇರಾದೆಯಿದೆ. ಅಲ್ಲದೇ ರಾಜ್ಯ ಸರಕಾರಿ ನೌಕರರ ಸಂಘದ ಶತಮಾನೋತ್ಸವದಂಗವಾಗಿ ಜಿಲ್ಲೆಗೊಂದು ಭವನ ಬರಲಿದ್ದು, ಆ ಭವನವನ್ನು ಮುಂಡರಗಿ ಪಟ್ಟಣಕ್ಕೆ ತರುವಲ್ಲಿ ಪ್ರಯತ್ನಿಸುತ್ತೇನೆ ಎಂದರು.

ವಿರೇಶ ಎಂ. ಮಾತನಾಡಿ, ನಮ್ಮ ಇಲಾಖೆಯ ವಿಸ್ತರಣಾಧಿಕಾರಿಗಳು ನೌಕರರ ಸಂಘಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ರಿಯಾಶೀಲ ಚಟುವಟಿಕೆಯ ಡಾ.ಬಸವರಾಜ ಬಳ್ಳಾರಿಯವರು ಹಿಡಿದ ಕೆಲಸವನ್ನು ಸಾಧಿಸುತ್ತಾರೆ ಎಂದರು.

ಎಸ್‌.ಶ್ರೀದೇವಿ ಮಾತನಾಡಿ, ನೌಕರರ ಸಂಘದ ಅಧ್ಯಕ್ಷ ರಾಗಿರುವ ಡಾ.ಬಸವರಾಜ ಬಳ್ಳಾರಿಯವರು ನೌಕರರ ಜತೆಗೆ ಆತ್ಮೀಯವಾಗಿ ವಿಶ್ವಾಸದಿಂದಿರುತ್ತಾರೆ. ವಸತಿ ನಿಲಯಗಳ ನೌಕರರು, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾದರೂ ತಕ್ಷ ಣವೇ ಬಗೆಹರಿಸುತ್ತಾರೆ. ಇಂತಹ ಕ್ರಿಯಾಶೀಲ ವ್ಯಕ್ತಿತ್ವದ ಡಾ.ಬಸವರಾಜರು ನೌಕರರ ಸಂಘದ ಅಧ್ಯಕ್ಷ ರಾಗಿ ಇನ್ನೂ ಹೆಚ್ಚಿನ ಸೇವೆ ಮಾಡಲಿ ಎಂದರು.

ವಿಠಲ್‌ ನಾವಳ್ಳಿ ಮಾತನಾಡಿದರು. ಎಸ್‌.ಬಿ.ಕಲ್ಮಠ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಖಾಜಾವಲಿ, ಶೋಭಾ ನಾಯಕ, ನಿಂಗಪ್ಪ, ಸಂತೋಷ ಮತ್ತಿತರರು ಉಪಸ್ಥೀತರಿದ್ದರು. ವಿಜಯಕುಮಾರ ಜಾಧವ್‌ ಸ್ವಾಗತಿಸಿ, ನಿರೂಪಿಸಿದರು. ಶ್ರೀಶೈಲ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ