ಆ್ಯಪ್ನಗರ

ಟಂಟಂ ಬಿದ್ದು 8 ಜನ ಗಾಯ

ಲಕ್ಷ್ಮೇಶ್ವರ : ಲಕ್ಷ್ಮೇಶ್ವರ-ಗದಗ ರಸ್ತೆಯ ಗೊಜನೂರು ಹಳ್ಳದಲ್ಲಿ ಮಂಗಳವಾರ ಟಂಟಂ ಚಾಲಕನ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಬಿದ್ದಿದ್ದು, ವಾಹನದಲ್ಲಿದ್ದ ಚಾಲಕ ಸೇರಿ 8 ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.

Vijaya Karnataka 17 Jan 2019, 5:00 am
ಲಕ್ಷ್ಮೇಶ್ವರ : ಲಕ್ಷ್ಮೇಶ್ವರ-ಗದಗ ರಸ್ತೆಯ ಗೊಜನೂರು ಹಳ್ಳದಲ್ಲಿ ಮಂಗಳವಾರ ಟಂಟಂ ಚಾಲಕನ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಬಿದ್ದಿದ್ದು, ವಾಹನದಲ್ಲಿದ್ದ ಚಾಲಕ ಸೇರಿ 8 ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
Vijaya Karnataka Web tantum fell and 8 injured
ಟಂಟಂ ಬಿದ್ದು 8 ಜನ ಗಾಯ


ಗದಗ ತಾಲೂಕಿನ ಯಲಿಶಿರಂದ ಗ್ರಾಮದ ನಾಗಪ್ಪ ಬಿಜಾಪುರ ಎಂಬ ಕುಟುಂಬದವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಕ್ತಿಮಂದಿರ ದರ್ಶನಕ್ಕೆ ತೆರಳಿದ್ದರು, ಸಂಜೆ ವಾಪಸ್ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಟಂಟಂ ಬಿದ್ದಿದೆ. ವಾಹನದಲ್ಲಿದ್ದ ನಾಗಪ್ಪ ಬಿಜಾಪುರ, ಅಕ್ಷ ಯ ಬಿಜಾಪುರ, ರೇಖಾ ಬಿಜಾಪುರ, ರಮೇಶ ಬಿಜಾಪುರ, ಅಭಿಷೇಕ ಬಿಜಾಪುರ, ಅರ್ಚನಾ ಬಿಜಾಪುರ, ನೀಲಕಂಠ ಬಿಜಾಪುರ, ಚಾಲಕ ನೀಲಪ್ಪ ಹರಿಹರ ಗಾಯಗೊಂಡಿದ್ದಾರೆ. ಅಭಿಷೇಕ ಎಂಬವರಿಗೆ ತೀವ್ರ ಗಾಯಗೊಡಿದ್ದು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ