ಆ್ಯಪ್ನಗರ

ಮಕ್ಕಳಿಗೆ ಕೌಶಲ ಕಲಿಸಿ

ಗದಗ: ಮಕ್ಕಳು ಜ್ಞಾನ, ಸಂಯಮ, ತಾಳ್ಮೆ, ಪರಿಶ್ರಮ ಪಡುವಂತಹ ಗುಣಗಳನ್ನು ಕಲಿಯಬೇಕು ಎಂದು ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಪ್ರಾ.ಬಿ.ಸಿ. ಉಪ್ಪಿನ ಹೇಳಿದರು.

Vijaya Karnataka 19 Jan 2020, 5:00 am
ಗದಗ: ಮಕ್ಕಳು ಜ್ಞಾನ, ಸಂಯಮ, ತಾಳ್ಮೆ, ಪರಿಶ್ರಮ ಪಡುವಂತಹ ಗುಣಗಳನ್ನು ಕಲಿಯಬೇಕು ಎಂದು ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಪ್ರಾ.ಬಿ.ಸಿ. ಉಪ್ಪಿನ ಹೇಳಿದರು.
Vijaya Karnataka Web teach children skills
ಮಕ್ಕಳಿಗೆ ಕೌಶಲ ಕಲಿಸಿ


ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳನ್ನು ಕೇವಲ ನಾವು ಬೌದ್ಧಿಕವಾಗಿ ಬೆಳಸದೆ ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಿ ಸಮಾಜದಲ್ಲಿಬದುಕುವ ರೀತಿ ರೂಢಿಸಬೇಕು. ಶಾಲೆಯ ಶಿಸ್ತನ್ನು ನೋಡಿ ಮಿಲಿಟರಿ ಶಾಲೆ ವಾತಾವರಣ ನೋಡಿದಂತಾಯಿತು. ಶಾಲೆಯ ಸಮಯಪಾಲನೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಪಾಲಿಸುತ್ತಿರುವುದು ಶ್ಲಾಘನೀಯ ಎಂದರು.

ಶಾಲೆ ವಿದ್ಯಾರ್ಥಿಗಳಲ್ಲಿಶಿಸ್ತನ್ನು ಕಾಪಾಡುವ ಅರಿವು ಮೂಡಿಸುವಿಕೆ, ವಿದ್ಯುತ್‌ ಉಳಿತಾಯ ಮಾಡುವುದು, ಲಿಂಗ ತಾರತಮ್ಯ ಮಾಡದಿರುವುದರ ಕಲ್ಪನೆ, ನೀರಿನ ಸಂರಕ್ಷಣೆ, ಆಹಾರವನ್ನು ವ್ಯರ್ಥ ಅಥವಾ ಹಾಳು ಮಾಡಬಾರದು. ರಸ್ತೆ ಸುರಕ್ಷತಾ ನಿಯಮಗಳು ಪಾಲಿಸುವುದು ಮತ್ತು ಮುಂತಾದ ಜಾಗೃತಿ ಮೂಡಿಸಲಾಯಿತು.

ಉತ್ಪಾದನಾ ಕಾರ್ಯದಲ್ಲಿಆ್ಯಕಲೆಂಟ್‌, ಜೂಮರ್‌, ಪೆನ್‌ ಮತ್ತು ಮೊಬೈಲ ಆರ್ಗನೈಸರ್‌, ಡೋರ್‌ ಮ್ಯಾಟ್‌, ವಾಲ್‌ಹ್ಯಾಂಗಿಗ್‌, ಹೇರ್‌ಬೆಂಡ್‌, ಹೇರ್‌ಕ್ಲಿಪ್ಸನಂತಹ ವಸ್ತುಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಿ ಮಾರಾಟಕ್ಕೆ ಇಡಲಾಯಿತು.

ಶಾಲೆ ಸಂಸ್ಥಾಪಕ ಕಮಲಾ ಸೆಲ್ವರಾಜ, ಎಸ್‌.ರವಿ, ಆರ್‌. ಮಲ್ಲಿಕಾ, ಡಾ.ಎಂ.ಆರ್‌. ಪಾಟೀಲ, ಪ್ರಾ. ವಿ.ಎಂ. ಅಡ್ನೂರ್‌, ವಿನಾಯಕ ಆರ್‌., ಪ್ರಮೋದಸಿಂಗ್‌ ಬ್ಯಾಳಿ, ಆರ್‌.ವಿನಾಯಕ , ನಿತಿಕಾ ಮಾದಗುಂಡಿ, ಕೀರ್ತಿ ಮೇವುಂಡಿ, ಸ್ಫೂರ್ತಿ ಯಾದವಾಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ