ದೇಶದ ಅಭಿವೃದ್ದಿಯೆ ಗುರಿ
ನರಗುಂದ: ಸಂವಿಧಾನ ಜಾರಿಯಾಗಿ 71 ವರ್ಷಗಳು ಕಳೆದಿದ್ದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ವಿಜ್ಞಾನ, ತಂತ್ರಜ್ಞಾನದಲ್ಲಿ, ಕೃಷಿಯಲ್ಲಿಸಾಕಷ್ಟು ಅಭಿವೃದ್ದಿ ಕಂಡಿರುವ ಭಾರತ ಮುನ್ನಡೆದಿದೆ. ದೇಶದ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸೋಣ ಎಂದು ತಹಸೀಲ್ದಾರ ಎ.ಎಚ್.ಮಹೇಂದ್ರ ಹೇಳಿದರು.
Vijaya Karnataka 27 Jan 2020, 5:00 am
ನರಗುಂದ: ಸಂವಿಧಾನ ಜಾರಿಯಾಗಿ 71 ವರ್ಷಗಳು ಕಳೆದಿದ್ದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ವಿಜ್ಞಾನ, ತಂತ್ರಜ್ಞಾನದಲ್ಲಿ, ಕೃಷಿಯಲ್ಲಿಸಾಕಷ್ಟು ಅಭಿವೃದ್ದಿ ಕಂಡಿರುವ ಭಾರತ ಮುನ್ನಡೆದಿದೆ. ದೇಶದ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸೋಣ ಎಂದು ತಹಸೀಲ್ದಾರ ಎ.ಎಚ್.ಮಹೇಂದ್ರ ಹೇಳಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿನಡೆದ ಗಣರಾಜ್ಯೊತ್ಸವ ಸಮಾರಂಭದಲ್ಲಿಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಜಗತ್ತಿನಲ್ಲೇ ಪ್ರಜಾಪ್ರಭುತ್ವ ಹೊಂದಿದ ಭಾರತ ಎಂಬುದು ಹೆಮ್ಮೆ ತರುವ ವಿಷಯ. ಮಹಿಳೆಯರ ಸಬಲೀಕರಣ, ನಿಷ್ಪಕ್ಷಪಾತ ಚುನಾವಣೆ ಜತೆಗೆ ವಿಜ್ಞಾನ, ತಂತ್ರಜ್ಞಾನದಲ್ಲಿ, ಕೃಷಿ ಅಭಿವೃದ್ದಿಯಲ್ಲಿದೇಶದ ಭದ್ರತೆ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ವಿಠಲ ತಿಮ್ಮರಡ್ಡಿ ಮಾತನಾಡಿ, ನಾವೆಲ್ಲಹೆಮ್ಮೆಪಡುವ ದಿನವಾಗಿದೆ. ಜಗತ್ತಿನಲ್ಲಿಶ್ರೇಷ್ಠ, ಸದೃಢ ಭಾರತ ನಿರ್ಮಾಣಕ್ಕೆ ಡಾ.ಅಂಬೇಡ್ಕರ ಕೊಟ್ಟ ಸಂವಿಧಾನ ಜಾರಿಗೆ ಬಂದ ದಿನ ಇದಾಗಿದೆ ಎಂದರು.
ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ ಮಾತನಾಡಿ, ದೇಶದ ಅಭಿವೃದ್ದಿಗೆ ನಾವೆಲ್ಲಕೈಜೋಡಿಸೋಣ ಎಂದರು. ಧ್ವಜವಂದನೆ ಪರೇಡ್ನಲ್ಲಿಪೋಲಿಸ್, ಎನ್ಸಿಸಿ, ಸ್ಕೌಟ್ಸ್ ಗೈಡ್ಸ್ ಹಾಗೂ ಸೇವಾ ದಳದಿಂದ ಪರೇಡ್ ನಡೆಯಿತು. ಉತ್ತಮ ಪಥ ಸಂಚಲನ ನಡೆಸಿದ ನಂ.3 ಪ್ರಾಥಮಿಕ ಶಾಲೆಯ ಸೇವಾದಳ ಪ್ರಥಮ, ಎಂಪಿಎಸ್ ನಂ.2 ದ್ವಿತೀಯ ಹಾಗೂ ಬಾಲಕರ ಪ್ರಾಥಮಿಕ ಶಾಲೆಯ ಸ್ಕೌಟ್ಸ್, ಗೈಡ್ಸ್ ಮತ್ತು ವಿವೇಕಾನಂದ ಶಾಲೆಯ ಸೇವಾದಳ ತೃತೀಯ ಬಹುಮಾನ ಪಡೆಯಿತು. ದೆಹಲಿಯ ಥಲಸೇನಾ ಕ್ಯಾಂಪ್ನಲ್ಲಿಪಾಲ್ಗೊಂಡಿದ್ದ ಎನ್ಸಿಸಿ ಕೆಡೆಟ್ ಈರಣ್ಣ ಪಂಚನ್ನವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಸ್ವಾತಂತ್ರ್ಯ ಯೋಧ ಭೀಮಪ್ಪ ಹಡಪದ, ಡಿವೈಎಸ್ಪಿ ಶಿವಾನಂದ ಕಟಗಿ, ಜಿಪಂ ಸದಸ್ಯೆ ರೇಣುಕ ಅವರಾದಿ, ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ಸದಸ್ಯ ಪ್ರಭು ಎಲಿಗಾರ, ಎ.ಎಂ.ಹುಡೇದ, ಪುರಸಭೆ ಸದಸ್ಯರಾದ ಪ್ರಶಾಂತ ಜೋಶಿ, ರಾಚನಗೌಡ್ರ ಪಾಟೀಲ, ಮಹೇಶ ಭೋಳಶೆಟ್ಟಿ, ಚಂದ್ರಗೌಡ ಪಾಟೀಲ, ಅಪ್ಪಣ್ಣ ನಾಯ್ಕರ, ಮಾರುತಿ ಅರ್ಬಾಣದ, ಎಲಿಗಾರ, ವಡ್ಡಿಗೇರಿ, ಬಿ.ಬಿ.ಐನಾಪೂರ, ಚಂದ್ರ ದಂಡಿನ, ಎನ್.ವಿ.ಮೇಟಿ, ಹನಮಂತ ಹವಾಲ್ದಾರ, ಕೃಷಿ ಇಲಾಖೆಯ ಚನ್ನಪ್ಪ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಇದ್ದರು.
ಶಾಲಾ ಮಕ್ಕಳಿಂದ ನಾಡ ಗೀತೆ, ಸಮನ್ವಯಾಧಿಕಾರಿ ಬಸವರಾಜ ಮಜ್ಜಗಿ ಸ್ವಾಗತ, ಗಿರೀಶ ದಾಸರ ನಿರೂಪಿಸಿದರು. ರೈತ ಗೀತೆಯೊಂದಿಗೆ ಆರಂಭವಾದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೊರೆಗೊಂಡವು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿನಡೆದ ಗಣರಾಜ್ಯೊತ್ಸವ ಸಮಾರಂಭದಲ್ಲಿಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಜಗತ್ತಿನಲ್ಲೇ ಪ್ರಜಾಪ್ರಭುತ್ವ ಹೊಂದಿದ ಭಾರತ ಎಂಬುದು ಹೆಮ್ಮೆ ತರುವ ವಿಷಯ. ಮಹಿಳೆಯರ ಸಬಲೀಕರಣ, ನಿಷ್ಪಕ್ಷಪಾತ ಚುನಾವಣೆ ಜತೆಗೆ ವಿಜ್ಞಾನ, ತಂತ್ರಜ್ಞಾನದಲ್ಲಿ, ಕೃಷಿ ಅಭಿವೃದ್ದಿಯಲ್ಲಿದೇಶದ ಭದ್ರತೆ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ವಿಠಲ ತಿಮ್ಮರಡ್ಡಿ ಮಾತನಾಡಿ, ನಾವೆಲ್ಲಹೆಮ್ಮೆಪಡುವ ದಿನವಾಗಿದೆ. ಜಗತ್ತಿನಲ್ಲಿಶ್ರೇಷ್ಠ, ಸದೃಢ ಭಾರತ ನಿರ್ಮಾಣಕ್ಕೆ ಡಾ.ಅಂಬೇಡ್ಕರ ಕೊಟ್ಟ ಸಂವಿಧಾನ ಜಾರಿಗೆ ಬಂದ ದಿನ ಇದಾಗಿದೆ ಎಂದರು.
ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ ಮಾತನಾಡಿ, ದೇಶದ ಅಭಿವೃದ್ದಿಗೆ ನಾವೆಲ್ಲಕೈಜೋಡಿಸೋಣ ಎಂದರು. ಧ್ವಜವಂದನೆ ಪರೇಡ್ನಲ್ಲಿಪೋಲಿಸ್, ಎನ್ಸಿಸಿ, ಸ್ಕೌಟ್ಸ್ ಗೈಡ್ಸ್ ಹಾಗೂ ಸೇವಾ ದಳದಿಂದ ಪರೇಡ್ ನಡೆಯಿತು. ಉತ್ತಮ ಪಥ ಸಂಚಲನ ನಡೆಸಿದ ನಂ.3 ಪ್ರಾಥಮಿಕ ಶಾಲೆಯ ಸೇವಾದಳ ಪ್ರಥಮ, ಎಂಪಿಎಸ್ ನಂ.2 ದ್ವಿತೀಯ ಹಾಗೂ ಬಾಲಕರ ಪ್ರಾಥಮಿಕ ಶಾಲೆಯ ಸ್ಕೌಟ್ಸ್, ಗೈಡ್ಸ್ ಮತ್ತು ವಿವೇಕಾನಂದ ಶಾಲೆಯ ಸೇವಾದಳ ತೃತೀಯ ಬಹುಮಾನ ಪಡೆಯಿತು. ದೆಹಲಿಯ ಥಲಸೇನಾ ಕ್ಯಾಂಪ್ನಲ್ಲಿಪಾಲ್ಗೊಂಡಿದ್ದ ಎನ್ಸಿಸಿ ಕೆಡೆಟ್ ಈರಣ್ಣ ಪಂಚನ್ನವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಸ್ವಾತಂತ್ರ್ಯ ಯೋಧ ಭೀಮಪ್ಪ ಹಡಪದ, ಡಿವೈಎಸ್ಪಿ ಶಿವಾನಂದ ಕಟಗಿ, ಜಿಪಂ ಸದಸ್ಯೆ ರೇಣುಕ ಅವರಾದಿ, ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ಸದಸ್ಯ ಪ್ರಭು ಎಲಿಗಾರ, ಎ.ಎಂ.ಹುಡೇದ, ಪುರಸಭೆ ಸದಸ್ಯರಾದ ಪ್ರಶಾಂತ ಜೋಶಿ, ರಾಚನಗೌಡ್ರ ಪಾಟೀಲ, ಮಹೇಶ ಭೋಳಶೆಟ್ಟಿ, ಚಂದ್ರಗೌಡ ಪಾಟೀಲ, ಅಪ್ಪಣ್ಣ ನಾಯ್ಕರ, ಮಾರುತಿ ಅರ್ಬಾಣದ, ಎಲಿಗಾರ, ವಡ್ಡಿಗೇರಿ, ಬಿ.ಬಿ.ಐನಾಪೂರ, ಚಂದ್ರ ದಂಡಿನ, ಎನ್.ವಿ.ಮೇಟಿ, ಹನಮಂತ ಹವಾಲ್ದಾರ, ಕೃಷಿ ಇಲಾಖೆಯ ಚನ್ನಪ್ಪ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಇದ್ದರು.
ಶಾಲಾ ಮಕ್ಕಳಿಂದ ನಾಡ ಗೀತೆ, ಸಮನ್ವಯಾಧಿಕಾರಿ ಬಸವರಾಜ ಮಜ್ಜಗಿ ಸ್ವಾಗತ, ಗಿರೀಶ ದಾಸರ ನಿರೂಪಿಸಿದರು. ರೈತ ಗೀತೆಯೊಂದಿಗೆ ಆರಂಭವಾದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೊರೆಗೊಂಡವು.