ಆ್ಯಪ್ನಗರ

ವಕಾರ ಮುಂದುವರಿದ ತೆರವು ಕಾರ್ಯ

ಗದಗ : ಅವಳಿ ನಗರದ ಹೃದಯ ಭಾಗದಲ್ಲಿರುವ ವಕಾರ ಸಾಲು ತೆರವು ಕಾರಾರ‍ಯಚರಣೆ 3ನೇ ದಿನವೂ ಮುಂದುವರಿದ್ದು, ಜೆಸಿಬಿಗಳ ಘರ್ಜನೆ ಮತ್ತೆ ಮುಂದುವರಿದಿದೆ.

Vijaya Karnataka 16 Jul 2019, 5:00 am
ಗದಗ : ಅವಳಿ ನಗರದ ಹೃದಯ ಭಾಗದಲ್ಲಿರುವ ವಕಾರ ಸಾಲು ತೆರವು ಕಾರಾರ‍ಯಚರಣೆ 3ನೇ ದಿನವೂ ಮುಂದುವರಿದ್ದು, ಜೆಸಿಬಿಗಳ ಘರ್ಜನೆ ಮತ್ತೆ ಮುಂದುವರಿದಿದೆ.
Vijaya Karnataka Web GDG-15SALIM2


ಸತತ ಎರಡು ದಿನ 30ಕ್ಕೂ ಹೆಚ್ಚು ಜೆಸಿಬಿ, ಹಿಟಾಚಿ, ಟ್ಯಾಕ್ಟರ್‌ಗಳು ಹಾಗೂ 400ಕ್ಕೂ ಹೆಚ್ಚು ಸಿಬ್ಬಂದಿ ಬಳಸಿಕೊಂಡು ಜಿಲ್ಲಾಡಳಿತ ವಕಾರಸಾಲು ತೆರವು ಕಾರಾರ‍ಯಚರಣೆ ನಡೆಸಿತ್ತು. ಸೋಮವಾರ ಗದಗ ಬೆಟಗೇರಿ ನಗರಸಭೆ ಸಿಬ್ಬಂದಿ ಮಾತ್ರ ಕಾರಾರ‍ಯಚರಣೆಯಲ್ಲಿ ಭಾಗವಹಿಸಿದ್ದರು.

ತೆರವು ಕಾರಾರ‍ಯಚರಣೆಗಾಗಿ ಅಕ್ಕಪಕ್ಕದ ಪುರಸಭೆ, ಪಪಂನಿಂದ ಬಂದಿದ್ದ ಪೌರ ಕಾರ್ಮಿಕರು ಸೋಮವಾರ ತಮ್ಮ ಮೂಲ ಸ್ಥಾನಕ್ಕೆ ತೆರಳಿದರು. ಹೀಗಾಗಿ ಸೋಮವಾರ ನಡೆದ ಕಾರಾರ‍ಯಚರಣೆಯಲ್ಲಿ ಗದಗ -ಬೆಟಗೇರಿ ನಗರಸಭೆ ಪೌರ ಕಾರ್ಮಿಕರು ಮಾತ್ರ ಭಾಗವಹಿಸಿದ್ದರು. ಜೆಸಿಬಿ, ಹಿಟಾಚಿಗಳ ಸಂಖ್ಯೆಯೂ ಕಡಿಮೆಯಾಗಿತ್ತು.

ಕಾರಾರ‍ಯಚರಣೆಯಿಂದ ಉಂಟಾದ ಅವಶೇಷ ತೆರವು ಮಾಡುವ ಕಾರ್ಯ ಸೋಮವಾರದಿಂದ ಆರಂಭವಾಯಿತು. ಕೆಲ ಭೂಬಾಡಿಗೆದಾರರು ಕಲ್ಲು, ಕಬ್ಬಿಣ, ಕಟ್ಟಿಗೆಗಳನ್ನು ತಮ್ಮ ತಮ್ಮ ವಾಹನಗಳಲ್ಲಿ ಹೊತ್ತೊಯ್ದರು. ಇನ್ನು ಕೆಲವರು ಅವುಗಳನ್ನು ಮಾರಾಟ ಮಾಡಿದರು.

ಕಳ್ಳರ ಕಾಟ :
ತೆರವು ಕಾರ್ಯಾಚರಣೆ ಮಧ್ಯೆಯೂ ಕೆಲ ಕಳ್ಳರು ಕಬ್ಬಿಣಗಳ ಕಳ್ಳತನ ನಡೆಸಿದ್ದು ವರದಿಯಾಗಿದೆ. ಅಲ್ಲದೇ ಗುಜರಿ ಆಯುವವರು ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ