ಆ್ಯಪ್ನಗರ

ದೇವಿ ಪುರಾಣ ಆರಂಭ

ಗದಗ: ರೋಣ ತಾಲೂಕಿನ ಸಂದಿಗವಾಡ ಗ್ರಾಮದ ದ್ಯಾಮವ್ವನ ದೇವಸ್ಥಾನದಲ್ಲಿ ದಸರಾ ಹೋತ್ಸವದ ಅಂಗವಾಗಿ ಶನಿವಾರ ಘಟಸ್ಥಾಪನೆ ಮಾಡುವ ಮೂಲಕ ದೇವಿ ಪುರಾಣಕ್ಕೆ ಚಾಲನೆ ನೀಡಲಾಯಿತು.

Vijaya Karnataka 29 Sep 2019, 5:00 am
ಗದಗ: ರೋಣ ತಾಲೂಕಿನ ಸಂದಿಗವಾಡ ಗ್ರಾಮದ ದ್ಯಾಮವ್ವನ ದೇವಸ್ಥಾನದಲ್ಲಿ ದಸರಾ ಹೋತ್ಸವದ ಅಂಗವಾಗಿ ಶನಿವಾರ ಘಟಸ್ಥಾಪನೆ ಮಾಡುವ ಮೂಲಕ ದೇವಿ ಪುರಾಣಕ್ಕೆ ಚಾಲನೆ ನೀಡಲಾಯಿತು.
Vijaya Karnataka Web the beginning of the devi purana
ದೇವಿ ಪುರಾಣ ಆರಂಭ


ಸೆ.29ರಿಂದ ಅ.8ರವರಿಗೆ ನಿತ್ಯ ಸಂಜೆ 7ಕ್ಕೆ ದೇವಿ ಪುರಾಣ ಹಮ್ಮಿಕೊಳ್ಳಲಾಗಿದೆ. ಮ್ಯಾಗೇರಿಯ ಶಾಂತಯ್ಯ ಹಿರೇಮಠ ಅವರಿಂದ ದೇವಿ ಪುರಾಣ, ತ್ರಿಲಿಂಯ್ಯ ಬಿಳಗಿಮಠ ಅವರಿಂದ ಭಕ್ತಿ ಗೀತೆ, ಮಲ್ಲಿಕಾರ್ಜುನ ಹೂಗಾರ ಅವರು ತಬಲಾ ಸಾಥ್‌ ನೀಡುವರು. ನಿತ್ಯ ದೇವಸ್ಥಾನದಲ್ಲಿವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಮಾಡಲಾಗುತ್ತಿದೆ.

ಕಲ್ಮೇಶ್ವರ ಭಜನಾ ಸಂಘದಿಂದ ದ್ಯಾಮವ್ವನ ಗುಡಿಯಲ್ಲಿಭಜನೆ ಮಾಡಲಾಯಿತು.ಮಲ್ಲಾಪುರ ಗ್ರಾಪಂ ಅಧ್ಯಕ್ಷ ಹನಮಂತಗೌಡ ಹುಲ್ಲೂರು ಅಧ್ಯಕ್ಷತೆ ವಹಿಸಿದ್ದರು.

ಘಟಸ್ಥಾಪನೆಯಲ್ಲಿಮಹಾದೇವಗೌಡ ಪಾಟೀಲ, ರಾಜುಗೌಡ ಪಾಟೀಲ, ವೀರುಪಾಕ್ಷಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ, ಶಿವಲಿಂಗನಗೌಡ ಪಾಟೀಲ, ತೀಪ್ಪನಗೌಡ ಹುಲ್ಲೂರ, ಮಲ್ಲಪ್ಪ ಟೇಕ್ಕದ , ಮುತ್ತಪ್ಪ ವಾಲ್ಮೀಖಿ, ಮಲ್ಲೇಶ ಹೂಗಾರ, ಎಸ್‌.ಎಂ.ಪಾಟೀಲ, ನಿಂಗಪ್ಪ ಮೇಟಿ, ರಮೇಶ ಬಡಿಗೇರ, ರಾಚಯ್ಯ ಹಿರೇಮಠ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ