ಆ್ಯಪ್ನಗರ

ಪವಾಡದಂತೆ ಬದುಕುಳಿದ ಬೆಕ್ಕು

ಗದಗ : ಕೊಲ್ಲುವವನು ಒಬ್ಬನು ಇದ್ದರೆ ಕಾಯುವವನೂ ಒಬ್ಬನು ಇರುತ್ತಾನೆ ಎನ್ನುವ ಮಾತಿಗೆ ಪುಷ್ಠಿ ನೀಡುವಂತೆ, ಇಡೀ ಗ್ರಾಮವೇ ಪ್ರವಾಹಕ್ಕೆ ಹೆದರಿ ಸುರಕ್ಷಿತ ಸ್ಥಳಕ್ಕೆ ಹೋಗಿತ್ತು. ಆದರೂ ಪವಾಡ ಸದೃಶ್ಯ ರೀತಿಯಲ್ಲಿ ಮುದ್ದಿನ ಬೆಕ್ಕು ಬದುಕುಳಿದಿರುವುದು ಕಂಡು ಮಹಿಳೆ ಒಂದು ಕ್ಷಣ ಭಾವುಕಳಾದಳು.

Vijaya Karnataka 15 Aug 2019, 5:00 am
ಗದಗ : ಕೊಲ್ಲುವವನು ಒಬ್ಬನು ಇದ್ದರೆ ಕಾಯುವವನೂ ಒಬ್ಬನು ಇರುತ್ತಾನೆ ಎನ್ನುವ ಮಾತಿಗೆ ಪುಷ್ಠಿ ನೀಡುವಂತೆ, ಇಡೀ ಗ್ರಾಮವೇ ಪ್ರವಾಹಕ್ಕೆ ಹೆದರಿ ಸುರಕ್ಷಿತ ಸ್ಥಳಕ್ಕೆ ಹೋಗಿತ್ತು. ಆದರೂ ಪವಾಡ ಸದೃಶ್ಯ ರೀತಿಯಲ್ಲಿ ಮುದ್ದಿನ ಬೆಕ್ಕು ಬದುಕುಳಿದಿರುವುದು ಕಂಡು ಮಹಿಳೆ ಒಂದು ಕ್ಷಣ ಭಾವುಕಳಾದಳು.
Vijaya Karnataka Web GDG-14SALIM12


ಮಾನವೀಯತೆಗೆ ಸಾಕ್ಷಿಯಾಗಿರುವ ಈ ಘಟನೆ ನಡೆದಿದ್ದು ಜಿಲ್ಲೆಯ ರೋಣ ತಾಲೂಕಿನ ಹೊಳೆ ಹಡಗಲಿಯಲ್ಲಿ. ಗ್ರಾಮದ ಮಲ್ಲವ್ವ ಅಂದಪ್ಪ ಮಣ್ಣೂರ, ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ಗ್ರಾಮದ ಹೊರವಲಯದ ಆಸರೆ ಮನೆಯಲ್ಲಿ ಆಶ್ರಯ ಪಡೆದಿದ್ದಳು.

ನೆರೆ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ ಮಲ್ಲವ್ವ ತನ್ನ ಮನೆಗೆ ಮರಳಿದ್ದಳು. ಕೆಸರುಮಯ ಮನೆಯಲ್ಲಿ ಅಟ್ಟದ ಮೇಲೆ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದ ಬೆಕ್ಕು ಹೊರಬಂದು ಮನೆಯೊಡತಿಯನ್ನು ಸೇರಿಕೊಂಡಿತು.

ಮುದ್ದಿನ ಬೆಕ್ಕು ಕಂಡ ಮಹಿಳೆ, ಪ್ರೀತಿಯಿಂದ ಅದನ್ನು ಎತ್ತಿಕೊಂಡು ಬುಟ್ಟಿಯಲ್ಲಿ ಹಾಕಿಕೊಂಡು ಮುದ್ದಿಸಿ, ಒಂದಷ್ಟು ಆಹಾರ ಕೊಟ್ಟು ಸಂತೈಸಿದಳು. ಆರು ದಿನದ ನಂತರ ಮತ್ತೆ ಕಂಡ ಬೆಕ್ಕು ಕಂಡು ಮಹಿಳೆ ಒಂದು ಕ್ಷಣ ಭಾವುಕಳಾದಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ