ಆ್ಯಪ್ನಗರ

ತಾಪಂ ಸಿಬ್ಬಂದಿಯಿಂದ ಸ್ವಚ್ಛಮೇವ ಜಯತೆ

ನರಗುಂದ : ಇಲ್ಲಿನ ತಾಪಂ ಆವರಣ ಮತ್ತು ಉದ್ಯಾನದಲ್ಲಿ ಕಸ ಕಡ್ಡಿ ತೆಗೆದು, ಮುಳ್ಳುಕಂಟಿ ಕಡಿದು ಸ್ವಚ್ಛಗೊಳಿಸುವ ಮೂಲಕ ಪಿಡಿಒ, ಕಾರ್ಯದರ್ಶಿ, ಗ್ರಾಪಂ ಸಿಬ್ಬಂದಿಗಳಿಂದ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Vijaya Karnataka 10 Jun 2019, 5:00 am
ನರಗುಂದ : ಇಲ್ಲಿನ ತಾಪಂ ಆವರಣ ಮತ್ತು ಉದ್ಯಾನದಲ್ಲಿ ಕಸ ಕಡ್ಡಿ ತೆಗೆದು, ಮುಳ್ಳುಕಂಟಿ ಕಡಿದು ಸ್ವಚ್ಛಗೊಳಿಸುವ ಮೂಲಕ ಪಿಡಿಒ, ಕಾರ್ಯದರ್ಶಿ, ಗ್ರಾಪಂ ಸಿಬ್ಬಂದಿಗಳಿಂದ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web GDG-7NRD2
ನರಗುಂದ ತಾಪಂ ಆವರಣದಲ್ಲಿ ತಾಪಂ,ಗ್ರಾಪಂ ಸಿಬ್ಬಂದಿ ಮುಳ್ಳಿನಗಿಡ, ಕಸ ಕಡ್ಡಿ ತೆಗೆದು ಸ್ವಚ್ಛಗೊಳಿಸಿದರು.


ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಕನಕರಡ್ಡಿ ನೇತೃತ್ವದಲ್ಲಿ ಬೆಳಗ್ಗೆಯಿಂದ ತಾಪಂ ಆವರಣದಲ್ಲಿ ಗುದ್ಲಿ, ಸಲಕಿ,ಪೊರಕೆ ಹಿಡಿದ ಸಿಬ್ಬಂದಿ ಸ್ವಚ್ಛಗೊಳಿಸಿದರು. ಪಂಚಾಯಿತಿ ಕಟ್ಟಡದ ಮೇಲೆ ಬಿದಿದ್ದ ಗಿಡಗಳ ಎಲೆಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಆವರಣದಲ್ಲಿ ಬೆಳೆದು ನಿಂತಿದ್ದ ಕಂಟಿಗಳನ್ನು ಕಡಿದರು. ಹಾಳು ಬಿದಿದ್ದ ಉದ್ಯಾನ ಸ್ವಚ್ಛಗೊಳಿಸಿದರು. ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಲಾಮೃತ ಕಾರ್ಯಕ್ರಮಕ್ಕೆ 100 ಗುಂಡಿ ತೋಡಿ ಸಸಿ ನೆಡಲು ಸಿದ್ದತೆ ಮಾಡಿಕೊಂಡಿದ್ದಾಗಿ ಇಒ ಕನಕರಡ್ಡಿ ತಿಳಿಸಿದರು.

ಪಿಡಿಒಗಳಾದ ಸೋಮಲಿಂಗಪ್ಪ ಹಿರೇಮನಿ, ಯಲ್ಲಪ್ಪಗೌಡ ಶಂಕರಗೌಡ್ರ, ಈಶ್ವರಗೌಡ ಪಾಟೀಲ, ಕಾವೇರಿ ಹಿಮಕರ, ಕೃಷ್ಣಮ್ಮ ಹಾದಿಮನಿ, ವಿರುಪಾಕ್ಷ ಗೌಡ ರಾಯನಗೌಡ್ರ, ದರಿಯಪ್ಪ ಸಾವಳಗಿ, ಹನಮಂತ ಅರಳಕಟ್ಟಿ, ಸದಾಶಿವ ಹರನಟ್ಟಿ, ಕಾರ್ಯದರ್ಶಿಗಳಾದ ಮಲ್ಲಪ್ಪ ವಾಲಿ, ಜಿ.ಎಪ್‌.ಗುಡಿಸಲಮನಿ, ಲಿಂಗನಗೌಡ, ಎಸ್‌.ಎಂ.ಮೆಣಸಗಿ, ಮೋಹನ ಅಂಗಡಿ, ದೇವರಡ್ಡಿ ಹಂಚಿನಾಳ ಮತ್ತು ಎಂ.ಎನ್‌.ನಿಟ್ಟಾಲಿ ಇತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ