ಆ್ಯಪ್ನಗರ

ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ

ನರೇಗಲ್ಲ : ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಅಂತಾರಾತ್ಮದ ಶಕ್ತಿ. ಅದನ್ನು ಉತ್ತಮ ಶಿಕ್ಷ ಣ ಪಡೆಯುವ ಮೂಲಕ ಸಾದರಪಡಿಸಬೇಕು ಎಂದು ಜಿಲ್ಲಾ ಪಿಯು ಉಪ ನಿರ್ದೇಶಕ ಎಸ್‌. ಎಸ್‌. ಹಿರೇಮಠ ಹೇಳಿದರು.

Vijaya Karnataka 19 Aug 2019, 5:15 pm
ನರೇಗಲ್ಲ : ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಅಂತಾರಾತ್ಮದ ಶಕ್ತಿ. ಅದನ್ನು ಉತ್ತಮ ಶಿಕ್ಷ ಣ ಪಡೆಯುವ ಮೂಲಕ ಸಾದರಪಡಿಸಬೇಕು ಎಂದು ಜಿಲ್ಲಾ ಪಿಯು ಉಪ ನಿರ್ದೇಶಕ ಎಸ್‌. ಎಸ್‌. ಹಿರೇಮಠ ಹೇಳಿದರು.
Vijaya Karnataka Web the contribution of monasteries to the field of education is immense
ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ


ಸ್ಥಳೀಯ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ನಾಡಿನ ಹತ್ತು ಹಲವು ಮಠಗಳು ಶಿಕ್ಷ ಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿವೆ. ಅದರಲ್ಲೂ ನರೇಗಲ್ಲ ಶ್ರೀ ಅನ್ನದಾನೇಶ್ವರ ಮಠವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷ ಣ ಸಂಸ್ಥೆ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಶಿಕ್ಷ ಣಕಾಶಿ ಎಂಬ ಕೀರ್ತಿಗೆ ಪಾತ್ರವಾಗಿದೆ. ವಿದ್ಯಾರ್ಥಿಗಳು ಕೇವಲ ಓದಿನಿಂದಲೆ ಸಾಧನೆ ಮಾಡಬೇಕೆಂದಿಲ್ಲ ಕ್ರೀಡೆ, ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಾಧನೆ ತೋರಬಹುದು. ನಿಮ್ಮಲ್ಲಿರುವ ಜ್ಞಾನದ ಶಕ್ತಿ ಅರಿತುಕೊಂಡಾಗ ಮಾತ್ರ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು.

ಡಾ. ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಏನು ಬೇಕಾದರೂ ಸಾಧಿಸುವಂತಹ ವಯಸ್ಸಿರುತ್ತದೆ. ಇಂತಹ ಅಮೂಲ್ಯ ವಯಸ್ಸು ಮತ್ತು ಸಮಯವನ್ನು ಸಾಧನೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮೊದಲು ತಮ್ಮ ಜವಾಬ್ದಾರಿ ಕಡೆಗೆ ಚಿಂತನೆ ಹರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರು ಒಂದೆ ವೃತ್ತಿಯತ್ತ ಮುಖಮಾಡದೆ ಹೊಸತನ ಸಂಶೊಧನೆಗಳ ಮೂಲಕ ದೇಶದಲ್ಲಷ್ಟೆ ಅಲ್ಲದೆ ವಿವಿದ ರಾಷ್ಟ್ರಗಳು ಮೆಚ್ಚುವಂತ ಕಾರ್ಯ ಸಾಧನೆ ನಿಮ್ಮದಾಗಬೇಕು ಎಂದರು.

ಹಾಲಕೆರೆ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಸ್ವಾತಂತ್ರ್ಯ ಪೂರ್ವದಲ್ಲಿಯೆ ಶೈಕ್ಷ ಣಿಕ ಕ್ಷೇತ್ರಕ್ಕೆ ಮುನ್ನುಡಿಗೆ ಪಾತ್ರರಾದ ಗುರು ಅನ್ನದಾನ ಶ್ರೀಗಳ ಈ ಶಿಕ್ಷ ಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಲ್ಲಲು ನಿಮ್ಮಂತಹ ಲಕ್ಷ ಲಕ್ಷ ವಿದ್ಯಾರ್ಥಿಗಳೆ ಸಾಕ್ಷಿಗಳಾಗಿದ್ದಾರೆ. ಇಂದಿನ ಯುವ ಶಕ್ತಿ ಭಾರತ ದೇಶದ ಸಂಸ್ಕೃತಿ ಪರಂಪರೆಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಹೋಗುವ ಗುರುತರ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು. ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ವಿವಿಧ ಅಂಗ ಸಂಸ್ಥೆಗಳಲ್ಲಿ ಓದಿ ಹೆಚ್ಚು ಅಂಕ ಪಡೆದ 301 ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಯಿತು. ಪಿಯು ಕಾಲೇಜು ಅಧ್ಯಕ್ಷ ಡಾ. ಶಾಂತಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಸೋಮನಕಟ್ಟಿ, ಆಡಳಿತಾಧಿಕಾರಿ ಎಸ್‌.ಜಿ.ಹಿರೇಮಠ, ಪ್ರಾ. ವೈ. ಸಿ. ಪಾಟೀಲ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ