ಆ್ಯಪ್ನಗರ

ಸಹಕಾರಿ ರಂಗದ ಕೊಡುಗೆ ಅಪಾರ

ಗಜೇಂದ್ರಗಡ: ಏಷ್ಯಾ ಖಂಡದಲ್ಲಿಮೊದಲ ಬಾರಿಗೆ ಸಹಕಾರಿ ಸಂಘ ಸ್ಥಾಪಿಸಿದ ದಿ. ಸಿದ್ದನಗೌಡ ಪಾಟೀಲ್‌ ಸಹಕಾರಿ ರಂಗದ ಪಿತಾಮಹರಾಗಿದ್ದಾರೆ. ಇಂತಹ ಮಹನೀಯರು ನೀಡಿರುವ ಕೊಡುಗೆ ಸಹಕಾರಿ ರಂಗವನ್ನು ಸರಿಯಾಗಿ ಬಳಸಿದರೆ ಅದು ಎಲ್ಲರನ್ನೂ ಬೆಳೆಸುತ್ತದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Vijaya Karnataka 19 Nov 2019, 5:00 am
ಗಜೇಂದ್ರಗಡ: ಏಷ್ಯಾ ಖಂಡದಲ್ಲಿಮೊದಲ ಬಾರಿಗೆ ಸಹಕಾರಿ ಸಂಘ ಸ್ಥಾಪಿಸಿದ ದಿ. ಸಿದ್ದನಗೌಡ ಪಾಟೀಲ್‌ ಸಹಕಾರಿ ರಂಗದ ಪಿತಾಮಹರಾಗಿದ್ದಾರೆ. ಇಂತಹ ಮಹನೀಯರು ನೀಡಿರುವ ಕೊಡುಗೆ ಸಹಕಾರಿ ರಂಗವನ್ನು ಸರಿಯಾಗಿ ಬಳಸಿದರೆ ಅದು ಎಲ್ಲರನ್ನೂ ಬೆಳೆಸುತ್ತದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
Vijaya Karnataka Web the contribution of the cooperative arena is immense
ಸಹಕಾರಿ ರಂಗದ ಕೊಡುಗೆ ಅಪಾರ


ಸ್ಥಳೀಯ ಶ್ರೀ ಜಗದಂಬಾ ಸಮುದಾಯ ಭವನದಲ್ಲಿಸೋಮವಾರ ನಡೆದ ಸಹಕಾರ ಸಪ್ತಾಹ ಪ್ರಯುಕ್ತ ಸರಕಾರ ಹೊಸ ದಿನ ಯೋಜನೆ ಉದ್ಘಾಟಿಸಿ ಮಾತನಾಡಿದರು.

ಅಶೋಕ ವನ್ನಾಲ ಮಾತನಾಡಿ, ನೇಕಾರರಿಗೆ ಯಡಿಯೂರಪ್ಪನವರ ಸರಕಾರದಲ್ಲಿಸಾಲ ಮನ್ನಾ ಆಗಿದೆ. ಬೆಟಗೇರಿಯಲ್ಲಿಸವಲತ್ತು ದೊರಕಿದೆ. ಉಳಿದ ಕಡೆಗೆ ಲಾಭ ಒದಗಲಿಲ್ಲ. ಕಾರಣ ಅಖಿಲ ಭಾರತ ಸಹಕಾರ ಸಂಘದವರು ಕನಿಷ್ಠ 3 ರೂ. ಬಡ್ಡಿಯಂತೆ ನೇಕಾರರಿಗೆ ಸಾಲ ಕೊಡಲು ಸಲಹೆ ನೀಡಬೇಕು ಎಂದರು.

ಮಹಾ ಮಂಡಳಿ ಅಧ್ಯಕ್ಷ ಜಿ. ಪಿ. ಪಾಟೀಲ್‌ ಮಾತನಾಡಿ, ಕೆಸಿಸಿ ಬ್ಯಾಂಕ್‌ ವತಿಯಿಂದ ಸಾರ್ವಜನಿಕರಿಗೆ ಹಲವಾರು ರೀತಿಯಲ್ಲಿಸಹಾಯ ಮಾಡಲು ಮುಂದಾಗಿದೆ. ರಾಜ್ಯದಲ್ಲಿರೈತರ ಆತ್ಮಹತ್ಯೆ ತಡೆಗಟ್ಟಲು ಕೆಸಿಸಿ ಬ್ಯಾಂಕ್‌ ವತಿಯಿಂದ 7 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಗದಗ ನೇಕಾರರಿಗೆ ಶೇ. 3 ರೂ. ಬಡ್ಡಿಯಂತೆ ಸಾಲ ಕೊಡಲು ನಿರ್ಧರಿಸಿದ್ದೇವೆ ಎಂದರು.

ವೆಂಕುಸಾ ಭಾಂಡಗೆ, ತಿಮ್ಮಣ್ಣಾ ವನ್ನಾಲ, ವಿಶ್ವನಾಥ ಮೇಘರಾಜ, ಪ್ರಶಾಂತ ಮುಧೋಳ, ನೀಲಕಂಠ ಅಸೂಟಿ, ಐ. ಎಸ್‌. ಪಾಟೀಲ, ಎಸ್‌. ಪಿ. ಹಿರೇಮಠ, ಎಸ್‌. ಡಿ. ಹೊಸಮನಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ