ಆ್ಯಪ್ನಗರ

ಅಶ್ವಗಂಧ ಬೇರಿಗೆ ಬೇಡಿಕೆ ಹೆಚ್ಚು

ಗದಗ: ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಅಶ್ವಗಂಧ ಬೆಳೆ ಕ್ಷೇತ್ರೋತ್ಸವ ನಡೆಯಿತು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಅಶ್ವಗಂಧ ಬೆಳೆಯು ಜಿಲ್ಲೆಯ ಮಧ್ಯಮ ಆಳದ ಕಪ್ಪು ಮಣ್ಣಿಗೆ ಸೂಕ್ತವಾದ

Vijaya Karnataka 1 Jan 2020, 5:00 am
ಗದಗ: ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಅಶ್ವಗಂಧ ಬೆಳೆ ಕ್ಷೇತ್ರೋತ್ಸವ ನಡೆಯಿತು.
Vijaya Karnataka Web 31RUDRAGOUD3_25
ಮುಂಡರಗಿ ತಾಲೂಕಿನ ಯಕ್ಲಾಸಪುರದಲ್ಲಿಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಿಂದ ಅಶ್ವಗಂಧ ಬೆಳೆ ಕ್ಷೇತ್ರೋತ್ಸವ ನಡೆಯಿತು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಅಶ್ವಗಂಧ ಬೆಳೆಯು ಜಿಲ್ಲೆಯ ಮಧ್ಯಮ ಆಳದ ಕಪ್ಪು ಮಣ್ಣಿಗೆ ಸೂಕ್ತವಾದ ಬೆಳೆಯಾಗಿದೆ. ರೈತರು ಕಡಲೆ ಹಾಗೂ ಜೋಳದ ಬೆಳೆಗೆ ಇದನ್ನು ಪರಾರ‍ಯಯ ಬೆಳೆಯಾಗಿ ಬೆಳೆಯಬೇಕೆಂದರು. ಔಷಧೀಯ ಸಸ್ಯವಾದ ಅಶ್ವಗಂಧ ಬೇರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಬೇಡಿಕೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರೈತರು ಈ ಬೆಳೆಯನ್ನು ಬೆಳೆಯಬೇಕೆಂದರು. ಈ ಬೆಳೆಗೆ ತೋಟಗಾರಿಕೆ ಇಲಾಖೆ ಪ್ರೋತ್ಸಾಹ ಧನ ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆಯಲು ತಿಳಿಸಿದರು.

ಅಶ್ವಗಂಧ ಬೆಳೆಗಾರರ ಸಂಘ ಅಧ್ಯಕ್ಷ ರಾಜೇಂದ್ರ ಶಿರೋಳ ಮಾತನಾಡಿ, 15 ವರ್ಷಗಳಿಂದ ಜಿಲ್ಲೆಯ ರೈತರು ಅಶ್ವಗಂಧ ಬೆಳೆಯುತ್ತಿದ್ದು ಬೆಳೆಯ ಖರೀದಿಯನ್ನು ಅಶ್ವಗಂಧ ಬೆಳೆಗಾರರ ಸಂಘದಿಂದ ಮಾಡಲಾಗುತ್ತಿದೆ ಎಂದರು. ಕಡಿಮೆ ಫಲವತ್ತಾದ ಮಣ್ಣಿನಲ್ಲಿಹಾಗೂ ಮಳೆಯ ಅನಿಶ್ಚಿತ ಸಂದರ್ಭದಲ್ಲಿಈ ಬೆಳೆಯನ್ನು ಲಾಭದಾಯಕವಾಗಿ ಬೆಳೆಯಬಹುದು ಎಂದರು.

ಕೆವಿಕೆ ತೋಟಗಾರಿಕೆ ತಜ್ಞ ಹೇಮಾವತಿ ಹಿರೇಗೌಡರ ಅವರು ಬೆಳೆಯ ಉತ್ಪಾದನಾ ತಾಂತ್ರಿಕತೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕೃಷಿ ವಿಸ್ತರಣಾ ತಜ್ಞ ಎಸ್‌.ಎಚ್‌.ಆದಾಪೂರ ಮಾತನಾಡಿ, ಜಿಲ್ಲೆಯಲ್ಲಿಹವಾಮಾನ ವೈಪರಿತ್ಯಕ್ಕೆ ಸೈರಣಾ ಬೆಳೆಯನ್ನಾಗಿ ಅಶ್ವಗಂಧವನ್ನು ಕೆವಿಕೆ ದತ್ತು ಗ್ರಾಮಗಳಲ್ಲಿಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಲಾಗುತ್ತಿದೆ ಎಂದರು. ಬಿ.ಕೆ.ಮಲ್ಲನಾಯ್ಕರ್‌, ಕೆವಿಕೆ ತಜ್ಞ ಎಸ್‌.ಕೆ.ಮುದ್ಲಾಪೂರ, ನಿಂಗಪ್ಪ ಹೊಂಬಳ, ಮುತ್ತಪ್ಪ ರೋಣದ, ಭರಮಪ್ಪ ಡೊಳ್ಳಿನ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ