ಆ್ಯಪ್ನಗರ

ಜೀವ ಹಿಂಡುವ ಧೂಳು !

ರೋಣ : ಕಾರುಗಳ ರೇಸ್‌ ಹಾಗೂ ಗೂಳಿ, ಟಗರಿನ ಕಾಳಗದಲ್ಲಿ ಧೂಳು ಸಾಮಾನ್ಯ. ಆದರೆ ಪಟ್ಟಣದಲ್ಲಿ ಅಂಥ ಯಾವ ಸ್ಪರ್ಧೆ ನಡೆಯುತ್ತಿಲ್ಲ. ಆದರೆ ಪಟ್ಟಣದಲ್ಲಿ ನಿತ್ಯ ಹಾರುತ್ತಿರುವ ಧೂಳು ಮಾತ್ರ ಜನರ ಕಣ್ಣನ್ನು ಹಾಳು ಮಾಡುತ್ತಿದೆ. ಅಷ್ಟರ ಮಟ್ಟಿಗೆ ಪಟ್ಟಣದ ಜನತೆಗೆ ಧೂಳು ಮಜ್ಜನ

Vijaya Karnataka 16 Jan 2019, 5:00 am
ರೋಣ : ಕಾರುಗಳ ರೇಸ್‌ ಹಾಗೂ ಗೂಳಿ, ಟಗರಿನ ಕಾಳಗದಲ್ಲಿ ಧೂಳು ಸಾಮಾನ್ಯ. ಆದರೆ ಪಟ್ಟಣದಲ್ಲಿ ಅಂಥ ಯಾವ ಸ್ಪರ್ಧೆ ನಡೆಯುತ್ತಿಲ್ಲ. ಆದರೆ ಪಟ್ಟಣದಲ್ಲಿ ನಿತ್ಯ ಹಾರುತ್ತಿರುವ ಧೂಳು ಮಾತ್ರ ಜನರ ಕಣ್ಣನ್ನು ಹಾಳು ಮಾಡುತ್ತಿದೆ. ಅಷ್ಟರ ಮಟ್ಟಿಗೆ ಪಟ್ಟಣದ ಜನತೆಗೆ ಧೂಳು ಮಜ್ಜನ ಆಗುತ್ತಿದೆ.ಅಷ್ಟೆ ಅಲ್ಲ ಧೂಳಿನಿಂದ ಅಲರ್ಜಿಯಾಗಿದೆ. ಧೂಳಿನಿಂದ ಉಂಟಾಗುವ ದುಷ್ಪರಿಣಾಮ ಹಲವಾರು. ಇದು ಪ್ರಕೃತಿಯನ್ನು ಕಲುಷಿತಗೊಳಿಸಿ, ಪ್ರತಿಯೊಬ್ಬರ ಶ್ವಾಸಕ್ಕೆ ತೊಂದರೆಯಾಗುತ್ತಿದೆ.
Vijaya Karnataka Web GDG-15 RON 4
ರೋಣ ರಸ್ತೆಯಲ್ಲಿ ವಾಹನಗಳು ತೆರಳ್ದಿರೆ ಧೂಳು ಆಳೇತ್ತರ ಏಳುತ್ತದೆ.


ಪಟ್ಟಣದ ಬಹುತೇಕ ಮುಖ್ಯ ರಸ್ತೆಗಳಲ್ಲಿರುವ ಗುಂಡಿಗೆ ಹಾಕಿರುವ ಮಣ್ಣು, ಪೈಪ್‌ಲೈನ್‌ ಅಳವಡಿಕೆಗೆ ಎಲ್ಲೆಂದರಲ್ಲಿ ತೆಗೆದ ಗುಂಡಿಗಳಿಂದ ನಿತ್ಯ ಹಾರುತ್ತಿರುವ ಧೂಳಿನಿಂದ ಪಟ್ಟಣ ದ್ರೋಣಾಪುರ (ರೋಣ)ದ ಬದಲಾಗಿ ಧೂಳಾಪುರ ಎಂಬ ಪಟ್ಟಣವಾಗಿದೆ. ಹೀಗಾಗಿ ಧೂಳಾಪುರವೆಂದು ಹಲವರು ಹೇಳುತ್ತಿದ್ದಾರೆ.

ಇದ್ದಬಿದ್ದ ಒಂದೆರಡು ಉತ್ತಮ ರಸ್ತೆಗಳಲ್ಲೇ ಬಸ್‌, ಇತರೇ ವಾಹನ ಹಾದು ಹೋದರೆ ಧೂಳು ಅಡರುತ್ತದೆ. ಇನ್ನು ಪಟ್ಟಣದ ಒಳ ರಸ್ತೆಗಳಲ್ಲಿ ಸಂಚರಿಸುವವರ ಸ್ಥಿತಿಯಂತೂ ತೀರಾ ಅಯೋಮಯ.
ಕಾಯಿಲೆಗಳ ಆಗರ :

ಇದರಿಂದ ಅಸ್ತಮಾ, ಕಣ್ಣುರಿತ, ಟಿಬಿ ಹಾಗೂ ಚರ್ಮ ರೋಗಗಳಿಂದ ಜನತೆ ಬಳಲುವಂತಾಗಿದೆ. ಕಾಲು,ಕೈಗೆ ಆದ ಗಾಯಗಳು ಧೂಳಿನಿಂದ ಶೀಘ್ರ ಮಾಯುತ್ತಿಲ್ಲ. ತಲೆಗೂದಲಿಗೂ ಧೂಳು ಆವರಿಸುವುದರಿಂದ ಕೂದಲು ಉದುರುತ್ತವೆ. ಇನ್ನೊಂದೆಡೆ ಕಣ್ಣಿನಲ್ಲೂ ಸಣ್ಣ ಸಣ್ಣ ಕಣಗಳು ಸೇರ್ಪಡೆಯಾಗುತ್ತಿರುವದರಿಂದ ಅವಧಿಗೆ ಮುನ್ನ ದೃಷ್ಠಿ ಕಳೆದುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಧೂಳಾಪುರದಿಂದ ಪಟ್ಟಣದ ಜನತೆ ಮಾರಕ ರೋಗಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗುತ್ತಿರುವುದು ನೋವಿನ ಸಂಗತಿ.ರಸ್ತೆ ಮೇಲಿನ ಧೂಳಿನಿಂದ ನಗರದ ಸಾಕಷ್ಟು ಜನರು ಡಸ್ಟ್‌ಅಲರ್ಜಿ, ಒಣಕೆಮ್ಮು ,ಅಸ್ತಮಾಕ್ಕೆ ತುತ್ತಾಗುತ್ತಿದ್ದಾರೆ.

ಇದೆಲ್ಲವನ್ನೂ ನೋಡಿ ಜನಪ್ರತಿನಿಧಿಗಳು,ಅಧಿಕಾರಿಗಳು ಸುಮ್ಮನಿರುವುದು ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಅಲರ್ಜಿಗೆ ಕಾರಣ :

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ ್ಯದಿಂದ ಪಟ್ಟಣದ ಪರಿಸರ ಹಳ್ಳಹಿಡಿದಿದೆ. ಎಲ್ಲೆಂದರಲ್ಲಿ ಕಿತ್ತುಹೋದ ರಸ್ತೆಗಳಿಂದ ಜನತೆ ರೋಸಿ ಹೋಗಿದ್ದಾರೆ. ಇದ್ದ ಉತ್ತಮ ರಸ್ತೆಗಳು ಧೂಳು ಮುಕ್ತವಾಗಿಲ್ಲ. ಮುಂದೊಂದು ಬಸ್‌ ಓಡುತ್ತಿದ್ದರೆ, ಅದರ ಹಿಂದೆ ಹೋದರೆ ಮುಗಿಯಿತು. ಅಂಥ ವ್ಯಕ್ತಿ ಇದ್ದಕ್ಕಿಂದ್ದಂತೆಯೇ ಧೂಳಿನ ಪೌಡರ್‌ನಲ್ಲಿ ಮಿಂದೇಳುತ್ತಾನೆ. ಹೀಗಾಗಿ ಪಟ್ಟಣದ ಪ್ರಮುಖ ರಸ್ತೆಗಳ ಎರಡು ಬದಿಯ ವ್ಯಾಪಾರಸ್ಥರು, ನಿತ್ಯ ರಸ್ತೆ ಮೂಲಕ ಸಂಚರಿಸುವ ಜನತೆಗೆ ಧೂಳು ಅಕ್ಷ ರಶಃ ಅಲರ್ಜಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ