ಆ್ಯಪ್ನಗರ

ದುಷ್ಟಶಕ್ತಿ ಸಂಹರಿಸಿದ ದೇವಿ ಸ್ಮರಣೆ ಅಗತ್ಯ

ಲಕ್ಕುಂಡಿ: ದೇಶದ ಕಾಶ್ಮೀರ ಮತ್ತು ಲಡಾಕ್‌ ಪ್ರದೇಶವನ್ನು ಉಗ್ರರನ್ನು ಸೆದೆ ಬಡಿಯುವುದರ ಮೂಲಕ ಆ ಪ್ರದೇಶವನ್ನು ಸ್ವತಂತ್ರವನ್ನಾಗಿ ಮಾಡಿದ್ದು ನಿಜವಾಗಲೂ ಈಗ ಸಂಪೂರ್ಣ ಸ್ವಾಂತಂತ್ರ್ಯ ದೊರೆತಂತಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಫಕೀರ ಸಿದ್ದರಾಮ ಸ್ವಾಮಿಗಳು ಹೇಳಿದರು.

Vijaya Karnataka 13 Oct 2019, 5:00 am
ಲಕ್ಕುಂಡಿ: ದೇಶದ ಕಾಶ್ಮೀರ ಮತ್ತು ಲಡಾಕ್‌ ಪ್ರದೇಶವನ್ನು ಉಗ್ರರನ್ನು ಸೆದೆ ಬಡಿಯುವುದರ ಮೂಲಕ ಆ ಪ್ರದೇಶವನ್ನು ಸ್ವತಂತ್ರವನ್ನಾಗಿ ಮಾಡಿದ್ದು ನಿಜವಾಗಲೂ ಈಗ ಸಂಪೂರ್ಣ ಸ್ವಾಂತಂತ್ರ್ಯ ದೊರೆತಂತಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಫಕೀರ ಸಿದ್ದರಾಮ ಸ್ವಾಮಿಗಳು ಹೇಳಿದರು.
Vijaya Karnataka Web the evil spirit needs the memory of the goddess
ದುಷ್ಟಶಕ್ತಿ ಸಂಹರಿಸಿದ ದೇವಿ ಸ್ಮರಣೆ ಅಗತ್ಯ


ಇಲ್ಲಿಯ ಗ್ರಾಮ ದೇವತೆ ದೇವಸ್ಥಾನದಲ್ಲಿವಿಜಯ ದಶಮಿಯಂಗವಾಗಿ ಹಮ್ಮಿಕೊಂಡಿದ್ದ 40ನೇ ವರ್ಷದ ದೇವಿ ಪುರಾಣ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ದೇವಿ ಪುರಾಣದಲ್ಲಿಬರುವ ರಾಕ್ಷಸರನ್ನು ದೇವಿ ಸಂಹಾರ ಮಾಡಿ ಈ ಜಗತ್ತಿಗೆ ಬೆಳಕು ನೀಡಿದ್ದಾಳೆ ಎಂದರು.

ಕೊಲಾರದ ದಿಗಂಬರೇಶ್ವರ ಸಂಸ್ಥಾನಮಠದ ಯೋಗಿ ಕಲ್ಲಿನಾಥ ದೇವರು ಮಾತನಾಡಿ, ವೈಜ್ಞಾನಿಕವಾಗಿರುವ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಶೇ. 60 ರಷ್ಟು ಯುವ ಸಮೂಹ ಧಿಕ್ಕರಿಸಿ ಮಧ್ಯ, ಧೂಮ ವ್ಯಸನಿಗಳಾಗುತ್ತಿರುವುದು ಕಳವಳಕಾರಿ. ಟಿವಿ, ಮೊಬೈಲ್‌ನಲ್ಲಿಬರುವ ಧಾರಾವಾಹಿಗಳು ನಮ್ಮ ಸಂಪ್ರದಾಯಗಳನ್ನು ದೂರ ಮಾಡುತ್ತಿವೆ. ಧಾರಾವಾಹಿಯಲ್ಲಿಯ ಪಾಶ್ಚಿಮಾತ್ಯ ದೇಶಗಳ ಉಡುಗೆ, ತೊಡುಗೆ, ಭಾಷೆ, ಜೀವನ ಶೈಲಿಗಳನ್ನು ನಮ್ಮ ಮಹಿಳೆಯರು ಅಳವಡಿಸಿಕೊಳ್ಳುವುದರಿಂದ ಅವಿಭಕ್ತ ಕುಟುಂಬಗಳು ನಾಶವಾಗುತ್ತಿವೆ. ಆದ್ದರಿಂದ ಇವುಗಳಿಂದ ಆದಷ್ಟು ದೂರವಿದ್ದು ದೇವಿ ಪುರಾಣದಲ್ಲಿಯ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು. ಜಿಪಂ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಾಜಿ ಸೈನಿಕ ದತ್ತಣ್ಣ ಜೋಶಿ ಮಾತನಾಡಿದರು.
ಪುರಾಣ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಮಹನೀಯರನ್ನು ಹಾಗೂ ರಂಗೋಲಿ ಸ್ಪರ್ಧೆ ವಿಜೇತರನ್ನು ಸನ್ಮಾನಿಸಲಾಯಿತು. ಪ್ರೊ.ಶಂಕರಗೌಡ ಬಿರಾದಾರ ಪುರಾಣ ಪ್ರವಚನ ಮಂಗಲಗೊಳಿಸಿದರು. ಶ್ರೀಕಾಂತ ಬಡಿಗೇರ ಪಠಣ ಮಾಡಿದರು. ಶಂಕ್ರಪ್ಪ ಬಣವಿ, ಈರಣ್ಣ ಬಡಿಗೇರ ಸಂಗೀತ ಸೇವೆ ನೀಡಿದರು. ವಿರುಪಾಕ್ಷಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಲ್ಲಮಪ್ರಭು ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳು, ಗ್ರಾಪಂ ಅಧ್ಯಕ್ಷ ಎಸ್‌.ಎಂ.ಬೂದಿಹಾಳ, ತಾಪಂ ಉಪಾಧ್ಯಕ್ಷೆ ಸುಜಾತಾ ಖಂಡು, ಪುರಾಣ ಸಮಿತಿ ಅಧ್ಯಕ್ಷ ಇಮಾಮಸಾಬ ನದಾಫ, ಅಶೋಕ ಬೂದಿಹಾಳ ಇತರರು ಉಪಸ್ಥಿತರಿದ್ದರು. ಬಸವರಾಜ ಭೂಮಣ್ಣವರ ಸ್ವಾಗತಿಸಿದರು. ಪ್ರಕಾಶ ಅರಹುಣಸಿ ನಿರೂಪಿಸಿದರು. ಎಸ್‌.ಸಿ. ಭಾವಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ