ಆ್ಯಪ್ನಗರ

ಬಿತ್ತನೆ ಶುರು ಮಾಡಿದ ರೈತ

ರಾಘವೇಂದ್ರ ಕುಲಕರ್ಣಿ ​ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕೆಲದಿನಗಳ ದಿನ ಹಿಂದೆ ಗುಡುಗು, ಸಹಿತ ಮಿಂಚು, ಸಿಡಿಲಿನ ಜುಗಲ್‌ ಬಂದಿಯ ನಡುವೆ ಮಳೆ ಜತೆಗೆ ಆರ್ಭಟಿಸಿದ ಜೋರುಗಾಳಿ ಸಾಥ್‌ ನೀಡಿತು. ಇದು ಮುಂಗಾರು ಬಿತ್ತನೆಗೆ ಗಳೆ ಹೊಡೆಯಲು ಅನ್ನದಾತರಿಗೆ ಅನುಕೂಲ ಕಲ್ಪಿಸಿತು.

Vijaya Karnataka 7 Jun 2019, 5:00 am
ರಾಘವೇಂದ್ರ ಕುಲಕರ್ಣಿ
Vijaya Karnataka Web GDG-4GJD1

ಗಜೇಂದ್ರಗಡ :
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕೆಲದಿನಗಳ ದಿನ ಹಿಂದೆ ಗುಡುಗು, ಸಹಿತ ಮಿಂಚು, ಸಿಡಿಲಿನ ಜುಗಲ್‌ ಬಂದಿಯ ನಡುವೆ ಮಳೆ ಜತೆಗೆ ಆರ್ಭಟಿಸಿದ ಜೋರುಗಾಳಿ ಸಾಥ್‌ ನೀಡಿತು. ಇದು ಮುಂಗಾರು ಬಿತ್ತನೆಗೆ ಗಳೆ ಹೊಡೆಯಲು ಅನ್ನದಾತರಿಗೆ ಅನುಕೂಲ ಕಲ್ಪಿಸಿತು.

ಇತ್ತೀಚೆಗೆ ವರುಣನ ಕೃಪೆ ರೈತರ ಮೊಗದಲ್ಲಿ ಚೈತನ್ಯ ಮೂಡಿಸಿದೆ. ಕಳೆಗುಂದಿದ ಕೃಷಿ, ವಾಣಿಜ್ಯ ವಹಿವಾಟು ಚೇತರಿಕೆ ಕಂಡವು. ಬರದ ಬವಣೆಗೆ ತುತ್ತಾಗಿ ಕಡುಕಷ್ಟ ಅನುಭವಿಸಿದ ಅನ್ನದಾತರಿಗೆ ಮಳೆ ಭರವಸೆ ಚಿಗುರಿಸಿತು. ಪಟ್ಟಣ, ಸುತ್ತಲಿನ ಗ್ರಾಮದಲ್ಲಿ ಸುರಿದ ಮಳೆಯಿಂದ ರೈತ ಸಮೂಹ ಮುಂಗಾರು ಹಂಗಾಮಿನ ಬೆಳೆಗಳ ಬೀಜ ಬಿತ್ತನೆ ಕಾರ್ಯ ಪ್ರಾರಂಭಿಸಿದರು.

ಪಟ್ಟಣ ಸೇರಿದಂತೆ ಸುತ್ತ್ತಲಿನ ಗ್ರಾಮಗಳಲ್ಲಿ ಈಚೆಗೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದ್ದು, ರೈತರು ಮುಂಗಾರು ಹಂಗಾಮಿನ ಬೆಳೆಗಳ ಬೀಜಗಳನ್ನು ಬಿತ್ತನೆ ಮಾಡುವ ಮೂಲಕ ಭೂತಾಯಿ ಮಡಿಲಿಗೆ ಸಮರ್ಪಿಸುವ ಕಾರ್ಯ ಅಲ್ಲಲ್ಲಿ ಶುರುವಾಗಿದೆ.

ಮಳೆ ನಿರೀಕ್ಷೆಯಿಂದ ಹೊಲಗಳನ್ನು ಹರಗಿ ಹದಗೊಳಿಸಿ ಬಿತ್ತನೆಗೆ ಸಿದ್ಧಪಡಿಸಿದ್ದರು. ಕಳೆದ ಎರಡು ಸಲ ಸುರಿದ ಮಳೆಯಿಂದ ರೈತರು ಹೊಲಗಳತ್ತ ಮುಖ ಮಾಡಿದ್ದಾರೆ. ಚಕ್ಕಡಿ, ಜೋಡೆತ್ತಿನ ಸಹಿತ ಬಿತ್ತನೆ ಕೂರ್ಗಿ, ಬಿತ್ತುವ ಬೀಜ, ಗೊಬ್ಬರ ಸಹಿತ ಬಿತ್ತನೆಗೆ ಪೂರ್ವ ತಯಾರಿಯಲ್ಲಿದ್ದರು. ಈಗ ಸುರಿದ ಮಳೆ ಬಿತ್ತನೆಗೆ ಚಾಲನೆ ನೀಡಿದೆ.

ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಸಜ್ಜೆ, ಹೈಬ್ರಿಡ್‌ ಜೋಳ, ಗುರೆಳ್ಳು, ಯಳ್ಳು, ತೊಗರಿ ಬೀಜ ಬಿತ್ತನೆ ನಡೆಸಿದ್ದಾರೆ.

ಗುಳೆ ಹೋದವರು ವಾಪಸ್‌ : ಕೃಷಿ ಚಟುವಟಿಕೆಗೆ ಚಾಲನೆ ದೊರೆತಿದೆ. ಬೆಂಗಳೂರ, ಗೋವಾ, ಮಂಗಳೂರ, ಕಾರವಾರ ಮತ್ತಿತರ ಗುಳೆ ಹೋದವರೆಲ್ಲರೂ ತಿರುಗಿ ಸ್ವ ಗ್ರಾಮದತ್ತ ಮರಳುತ್ತಿದ್ದಾರೆ. ಗಜೇಂದ್ರಗಡ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಗೋಗೇರಿ, ಮಾಟ ರಂಗಿ, ರಾಮಾಪುರ, ಪುರ್ತಗೇರಿ, ಕೊಡಗಾನೂರ, ವೀರಾಪುರ, ಚಿಲ್‌ಝರಿ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ ಗ್ರಾಮಗಳಲ್ಲಿ ರೈತರು ಬಿತ್ತನೆಯಲ್ಲಿ ತಲ್ಲಿನರಾಗಿದ್ದಾರೆ. ಆದರೆ ನಿಡಗುಂದಿ, ಸೂಡಿ, ಮತ್ತಿತರ ಗ್ರಾಮಗಳ ಕಪ್ಪು ಮಿಶ್ರಿತ ಎರೆ ಭೂಮಿಯಲ್ಲಿ ಹೆಸರು ಕಾಳು ಬಿತ್ತನೆ ಕಾರ್ಯಕ್ಕೆ ಮತ್ತೊಂದು ಮಳೆಗೆ ಕಾಯುತ್ತಿದ್ದಾರೆ. ಮುಂಗಾರು ಹಂಗಾಮು ಮಳೆ ಸುರಿಯಲು ಪ್ರಾರಂಭಿಸಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ