ಆ್ಯಪ್ನಗರ

ಗಣೇಶ ಮೂರ್ತಿಗೆ ಅಂತಿಮ ರೂಪ

​ ಮುಳಗುಂದ : ಗಣೇಶ ಹಬ್ಬ ಬಂತೆಂದರೆ ಗಣೇಶ ಮೂರ್ತಿ ತಯಾರಿಸಲು ಕೆರೆಯ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಬಳಸಿ ಸಿದ್ದಗೊಳಿಸುತ್ತಿರುವ ಪರಿಸರ ಸ್ನೇಹಿ ಗಣಪ ಮೂರ್ತಿಗಳ ತಯಾರಿಕೆ ಜೋರಾಗಿ ನಡೆಯುತ್ತದೆ.

Vijaya Karnataka 27 Aug 2019, 5:00 am
ವೀರಪ್ಪ ಸಿದ್ದನಗೌಡರ
Vijaya Karnataka Web GDG-26MUL1
ಮುಳಗುಂದ ಪಟ್ಟಣದಲ್ಲಿ ಮಾರಾಟಕ್ಕೆ ತಯಾರಾದ ಮಣ್ಣಿನ ಗಣೇಶ ಮೂರ್ತಿಗೆ ಅಂತಿಮ ರೂಪ ಕೊಡುತ್ತಿರುವ ಕೇಶವ ಕಮ್ಮಾರ.

ಮುಳಗುಂದ : ಗಣೇಶ ಹಬ್ಬ ಬಂತೆಂದರೆ ಗಣೇಶ ಮೂರ್ತಿ ತಯಾರಿಸಲು ಕೆರೆಯ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಬಳಸಿ ಸಿದ್ದಗೊಳಿಸುತ್ತಿರುವ ಪರಿಸರ ಸ್ನೇಹಿ ಗಣಪ ಮೂರ್ತಿಗಳ ತಯಾರಿಕೆ ಜೋರಾಗಿ ನಡೆಯುತ್ತದೆ.

ಸಮೀಪದ ಯಳವತ್ತಿ ಗ್ರಾಮದ ಕೇಶವ ಕಮ್ಮಾರ ಇವರು ಸುಮಾರು 35 ವರ್ಷಗಳ ಕಾಲ ಎಲ್ಲರ ಗಮನ ಸೇಳೆಯುವ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕಲಾವಿದನಾಗಿ ಎಲ್ಲರ ಕಣ್ಣು ಅರಳುವಂತೆ ಮಾಡಿದ್ದಾನೆ.

ಮಣ್ಣಿನ ಗಣೇಶ ಮೂರ್ತಿ ಕೆರಿ ಮಣ್ಣಿಗೆ ನೀರುಣಿಸಿ ಹದಗೊಳಿಸಿ ನಂತರ ದಿನಕ್ಕೆ ಒಂದು ಅಥವಾ ಎರಡು ಗಣೇಶ ಮೂರ್ತಿ ತಯಾರಿಸುತ್ತಾರೆ. ಇವರು ತಯಾರಿಸುವ ಗಣೇಶ ಮೂರ್ತಿಗೆ ಹೆಚ್ಚು ಬೇಡಿಕೆ ಇದೆ. ಈಗಾಗಲೆ ಪಟ್ಟಣದ ಜನರು ತಮಗೆ ಬೇಕಾದ ಗಣೇಶ ಮೂರ್ತಿ ಗುರುತಿಸಿ ಮುಂಗಡ ಹಣ ಪಾವತಿಸಿ ಹೊಗಿರುತ್ತಾರೆ.

ಸಣ್ಣ ಮೂರ್ತಿಗೆ 500 ರೂ.ದೊಡ್ಡ ಮೂರ್ತಿಗೆ 2500 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಮೂರ್ತಿ ತಯಾರಕ ಕೇಶವ ಕಮ್ಮಾರ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ