ಆ್ಯಪ್ನಗರ

ನದಾಫ್‌ ಸಮಾಜದಿಂದ ಧ್ವಜಾರೋಹಣ

ನರಗುಂದ : ಇಲ್ಲಿನ ಅರ್ಭಾಣ ನದಾಫ್‌ ಓಣಿಯಲ್ಲಿ ನದಾಫ್‌ ಸಂಘದಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುರಸಭೆ ಸದಸ್ಯ ಮಹೇಶ ಬೋಳಶೆಟ್ಟಿ ಧ್ವಜಾರೋಹಣ ನೆರವೇರಿಸಿ ಜಾತಿ,ಮತ, ಪಂಥ ಎನ್ನದೇ ಎಲ್ಲರೂ ದೇಶಾಭಿಮಾನ ತೋರಬೇಕು ಎಂದರು.

Vijaya Karnataka 19 Aug 2019, 5:00 am
ನರಗುಂದ : ಇಲ್ಲಿನ ಅರ್ಭಾಣ ನದಾಫ್‌ ಓಣಿಯಲ್ಲಿ ನದಾಫ್‌ ಸಂಘದಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುರಸಭೆ ಸದಸ್ಯ ಮಹೇಶ ಬೋಳಶೆಟ್ಟಿ ಧ್ವಜಾರೋಹಣ ನೆರವೇರಿಸಿ ಜಾತಿ,ಮತ, ಪಂಥ ಎನ್ನದೇ ಎಲ್ಲರೂ ದೇಶಾಭಿಮಾನ ತೋರಬೇಕು ಎಂದರು.
Vijaya Karnataka Web the flame from the nadaf society
ನದಾಫ್‌ ಸಮಾಜದಿಂದ ಧ್ವಜಾರೋಹಣ


ಈ ಸಂದರ್ಭದಲ್ಲಿ ನದಾಫ್‌ ಜಮಾತಿನ ಪ್ರಮುಖರಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌, ಪೆನ್ನು ವಿತರಿಸಲಾಯಿತು. ಶಾಬುದ್ದಿನ ನದಾಫ್‌, ಮಹಮ್ಮದ ಇಕ್ಬಾಲ್‌ ನದಾಫ್‌, ಗೌಸುಸಾಬ ನದಾಪ್‌, ಹನನಸಾಬ ನದಾಫ್‌, ಬಾಲೇಸಾಬ ನದಾಪ್‌, ಕರೀಮಸಾಬ ನದಾಫ್‌,ಸೈಯ್ಯದ ನದಾಪ್‌, ಇಮಾಮಸಾಬ ನದಾಪ್‌, ಮಹಮ್ಮದ ನಾಯ್ಕರ, ರಾಮಣ್ಣ ಓದೇಕಾರ ಹಾಗೂ ಲಿಟಲ್‌ ಸ್ಟಾರ್‌ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷ ಕರು,ಮಕ್ಕಳು ಪಾಲ್ಗೊಂಡಿದ್ದರು.

ಸನ್ಮಾನ ಸಮಾರಂಭ: ಅಂದು ಸಂಜೆ ಅರ್ಭಾಣ ನದಾಫ್‌ ಸಮಾಜದಿಂದ 14 ನೇ ವಾರ್ಡಿನಿಂದ ಆಯ್ಕೆಯಾದ ಪುರಸಭೆ ಸದಸ್ಯ ಮಹೇಶ ಬೋಳಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಮಹೇಶ ಬೋಳಶೆಟ್ಟಿ ವಾರ್ಡನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ, ಅರ್ಭಾಣ ಗ್ರಾಮದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಬಿ.ಡಿ.ಪಾಟೀಲ, ಶಾಬುದ್ದಿನ ನದಾಫ್‌ ಮಾತನಾಡಿದರು. ಇಮಾಮಸಾಬ ನದಾಫ್‌, ಪರಶುರಾಮ ಜಂಬಗಿ, ಬಸವರಾಜ ಬೋಳಶೆಟ್ಟಿ, ಸತೀಶ ಸರನಾಯ್ಕರ, ರಾಮಣ್ಣ ಓದೇಕಾರ, ಸಮಾಜದ ಅಲ್ಲಿಸಾಬ ನದಾಪ್‌, ಹಸನಸಾಬ ನದಾಪ್‌, ಕರೀಮಸಾಬ ನದಾಪ್‌, ಮಾಬುಸಾಬ ನದಾಪ್‌, ಸುಬಾನಿ ಜಮಾದಾರ, ರಾಜೇಸಾಬ ನಾಯ್ಕರ ಉಪಸ್ಥಿತರಿದ್ದರು. ಮಹ್ಮದಇಕ್ಬಾಲ್‌ ನದಾಪ್‌ ಸ್ವಾಗತ, ಗೌಸುಸಾಬ ನದಾಪ್‌ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ