ಆ್ಯಪ್ನಗರ

ಬ್ಯಾಂಕ್‌ ನಿವೃತ್ತರ ಒಕ್ಕೂಟ ರಚನೆ

ಗದಗ: ಬ್ಯಾಂಕ್‌ ನಿವೃತ್ತ ನೌಕರರು ಅಸಂಖ್ಯಾತ ಸಮಸ್ಯೆ ಹೊತ್ತು ಜೀವನ ಕಳೆಯುತ್ತಿದ್ದಾರೆ. ಅವುಗಳ ನಿವಾರಣೆಗಾಗಿ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟ ರಚಿಸಲಾಗಿದೆ. ಡಿ.18 ರಂದು ಉದ್ಘಾಟನೆಗೊಳ್ಳಲಿದೆ.

Vijaya Karnataka 16 Dec 2018, 5:00 am
ಗದಗ: ಬ್ಯಾಂಕ್‌ ನಿವೃತ್ತ ನೌಕರರು ಅಸಂಖ್ಯಾತ ಸಮಸ್ಯೆ ಹೊತ್ತು ಜೀವನ ಕಳೆಯುತ್ತಿದ್ದಾರೆ. ಅವುಗಳ ನಿವಾರಣೆಗಾಗಿ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟ ರಚಿಸಲಾಗಿದೆ. ಡಿ.18 ರಂದು ಉದ್ಘಾಟನೆಗೊಳ್ಳಲಿದೆ.
Vijaya Karnataka Web the formation of the bank retirement union
ಬ್ಯಾಂಕ್‌ ನಿವೃತ್ತರ ಒಕ್ಕೂಟ ರಚನೆ


ಎಲ್ಲ ಸರಕಾರಿ ನೌಕರರಿಗೆ ಸಿಗುವಂತೆ ಬ್ಯಾಂಕ್‌ ನಿವೃತ್ತರ ನೌಕರರ ಸಂಬಳದಲ್ಲಿ ಹೆಚ್ಚಳವಾಗಲಿ ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ತೋಟಿಗೇರ ಆಗ್ರಹಿಸಿದರು.

ನಗರದಲ್ಲಿ ನಡೆದ ಜಿಲ್ಲಾ ನಿವೃತ್ತ ಬ್ಯಾಂಕ್‌ ನೌಕರರ ಸಭೆಯಲ್ಲಿ ಅವರು ಮಾತನಾಡಿ, ಇತರೆ ನೌಕರದಾರರಿಗೆ ಗ್ರಾಚ್ಯುಟಿಯ ಹೆಚ್ಚಳ 2016 ರಿಂದ ಅನ್ವಯವಾದರೇ, ಬ್ಯಾಂಕ್‌ ನಿವೃತ ನೌಕರದಾರರಿಗೆ 2018 ರಿಂದ ಅನ್ವಯವಾಗಿದೆ. ಕೌಟುಂಬಿಕ ಪಿಂಚಣಿ ಹಣ ಇತರರಿಗೆ ಅರ್ದದಷ್ಟು ಸಿಕ್ಕರೇ, ಬ್ಯಾಂಕ್‌ ಬಾಂಧವರಿಗೆ ಶೇ.15 ರಷ್ಟು ನೀಡಲಾಗುತ್ತಿದೆ. ನಿವೃತ್ತ ನೌಕರರಿಗೆ ತುಟ್ಟಿಭತ್ಯೆ 6 ತಿಂಗಳಿಗೊಮ್ಮೆ ಆಗುತ್ತದೆ ಎಂದು ಬೇಸರಪಟ್ಟರು. ಅಮಾನತುಗೊಂಡ, ಸಿಆರ್‌ಎಸ್‌ ಆದ ಹಾಗೂ ರಾಜೀನಾಮೆ ಕೊಟ್ಟ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಸುಪ್ರೀಕೋರ್ಟ್‌ ಆದೇಶಿಸಿದೆ ಎಂದರು.

ಒಕ್ಕೂಟದ ಕಾರ್ಯದರ್ಶಿ ವಿ.ಬಿ.ಗವಾಯಿ, ಎಲ್‌.ನಾರಾಯಣಸ್ವಾಮಿ, ವಿ.ಬಿ.ಚಿಕ್ಕನರಗುಂದ, ರಾಮಚಂದ್ರ ಗುಡಿ, ಆರ್‌.ಜಿ.ರಟ್ಟಿಹಳ್ಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ