ಗದಗ: ನಗರದ ಮಾರಲ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನಡೆಯುತ್ತಿರುವ ಆರ್ಯಭಟ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿಸರಸ್ವತಿ ಪೂಜಾ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ನಡೆಯಿತು.
ಪ್ರಿನ್ಸಿಪಾಲ ಕೆ.ಆರ್. ಚವ್ಹಾಣ ಮಾತನಾಡಿ, ಮಕ್ಕಳು ಕೇವಲ ಪರೀಕ್ಷಾ ದೃಷ್ಟಿಯಿಂದ ಓದಿದರೆ ಸಾಲದು. ಸಾಧನೆಯ ದೃಷ್ಟಿಯಿಂದ ಓದಿ ಒಳ್ಳೆಯ ಫಲಿತಾಂಶ ಪಡೆಯಬೇಕು. ಮಕ್ಕಳಿಗೆ ಸಮಾಜದಲ್ಲಿಗುರುತಿಸಿಕೊಳ್ಳುವ ಒಬ್ಬ ಒಳ್ಳೆಯ ವ್ಯಕ್ತಿ ಆಗಬೇಕು ಎಂಬ ಮಹಾದಾಸೆ ಹೊತ್ತ ಪಾಲಕರು ಕಷ್ಟಪಟ್ಟು ಬೆವರು ಸುರಿಸಿ ಸಾಕಿ ಸಲುಹಿ ಯಾವುದೇ ಕೊರತೆಯಿಲ್ಲದೆ ಶಿಕ್ಷಣವನ್ನು ಕೊಡಿಸಲು ಮುಂದಾದಾಗ ಅವರ ಕನಸನ್ನು ನನಸು ಮಾಡಿ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಗಂಗನಗೌಡರ, ವಿದ್ಯಾರ್ಥಿಗಳ ಪರಿಶ್ರಮ, ಆಸಕ್ತಿ, ಏಕಾಗ್ರತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಸಂಸ್ಥೆಯ ಕ್ಯಾಬ್ರಿಡ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವತ್ಸಲಾ ಮೂಲಿಮನಿ, ಶಿಸ್ತು, ಸಂಯಮ, ಏಕಾಗ್ರತೆಯನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಪ್ರಶಾಂತಕುಮಾರ ದೊಡ್ಡಮನಿ ಮಾತನಾಡಿ, ಮಕ್ಕಳು ಅಮೂಲ್ಯ ಸಮಯವನ್ನು ವ್ಯರ್ಥಮಾಡದೇ ಆಸಕ್ತಿಯಿಂದ ಓದಿ ಒಳ್ಳೆಯ ಫಲಿತಾಂಶ ಪಡೆದು ಹೆತ್ತವರಿಗೆ, ಶಿಕ್ಷಕರಿಗೆ, ಸಂಸ್ಥೆಗೆ, ಸಮಾಜಕ್ಕೆ ಒಳ್ಳೆಯ ಕೀರ್ತಿ ತರುವಂತಹ ವ್ಯಕ್ತಿಯಾಗಬೇಕು ಎಂದರು. ಅಮೃತಾ ಹಸರಡ್ಡಿ, ಪೂಜಾ ಕರುಗಲ್, ಅಮೃತಾ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಿನ್ಸಿಪಾಲ ಕೆ.ಆರ್. ಚವ್ಹಾಣ ಮಾತನಾಡಿ, ಮಕ್ಕಳು ಕೇವಲ ಪರೀಕ್ಷಾ ದೃಷ್ಟಿಯಿಂದ ಓದಿದರೆ ಸಾಲದು. ಸಾಧನೆಯ ದೃಷ್ಟಿಯಿಂದ ಓದಿ ಒಳ್ಳೆಯ ಫಲಿತಾಂಶ ಪಡೆಯಬೇಕು. ಮಕ್ಕಳಿಗೆ ಸಮಾಜದಲ್ಲಿಗುರುತಿಸಿಕೊಳ್ಳುವ ಒಬ್ಬ ಒಳ್ಳೆಯ ವ್ಯಕ್ತಿ ಆಗಬೇಕು ಎಂಬ ಮಹಾದಾಸೆ ಹೊತ್ತ ಪಾಲಕರು ಕಷ್ಟಪಟ್ಟು ಬೆವರು ಸುರಿಸಿ ಸಾಕಿ ಸಲುಹಿ ಯಾವುದೇ ಕೊರತೆಯಿಲ್ಲದೆ ಶಿಕ್ಷಣವನ್ನು ಕೊಡಿಸಲು ಮುಂದಾದಾಗ ಅವರ ಕನಸನ್ನು ನನಸು ಮಾಡಿ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಗಂಗನಗೌಡರ, ವಿದ್ಯಾರ್ಥಿಗಳ ಪರಿಶ್ರಮ, ಆಸಕ್ತಿ, ಏಕಾಗ್ರತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಸಂಸ್ಥೆಯ ಕ್ಯಾಬ್ರಿಡ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವತ್ಸಲಾ ಮೂಲಿಮನಿ, ಶಿಸ್ತು, ಸಂಯಮ, ಏಕಾಗ್ರತೆಯನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಪ್ರಶಾಂತಕುಮಾರ ದೊಡ್ಡಮನಿ ಮಾತನಾಡಿ, ಮಕ್ಕಳು ಅಮೂಲ್ಯ ಸಮಯವನ್ನು ವ್ಯರ್ಥಮಾಡದೇ ಆಸಕ್ತಿಯಿಂದ ಓದಿ ಒಳ್ಳೆಯ ಫಲಿತಾಂಶ ಪಡೆದು ಹೆತ್ತವರಿಗೆ, ಶಿಕ್ಷಕರಿಗೆ, ಸಂಸ್ಥೆಗೆ, ಸಮಾಜಕ್ಕೆ ಒಳ್ಳೆಯ ಕೀರ್ತಿ ತರುವಂತಹ ವ್ಯಕ್ತಿಯಾಗಬೇಕು ಎಂದರು. ಅಮೃತಾ ಹಸರಡ್ಡಿ, ಪೂಜಾ ಕರುಗಲ್, ಅಮೃತಾ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಇದ್ದರು.