ಆ್ಯಪ್ನಗರ

ಶಿವಶರಣರ ಕೊಡುಗೆ ಅಮೋಘ

ಗಜೇಂದ್ರಗಡ: ಸಮಾಜದಲ್ಲಿಮಾನವೀಯತೆ, ಸತ್ಯ, ಸಹಿಷ್ಣುತೆ ಹಾಗೂ ಉದಾತ್ತ ಧ್ಯೇಯಗಳತ್ತ ಮಾನವ ಕುಲವನ್ನು ಉದ್ಧಾರಗೊಳಿಸುವ ನಿಟ್ಟಿನಲ್ಲಿಶಿವಶರಣರ ಕೊಡುಗೆ ಅಮೋಘವಾಗಿದೆ ಎಂದು ಶಿಕ್ಷಕ ಎಸ್‌.ಎಸ್‌.ನರೇಗಲ್ಲ ಹೇಳಿದರು.

Vijaya Karnataka 29 Jan 2020, 5:14 pm
ಗಜೇಂದ್ರಗಡ: ಸಮಾಜದಲ್ಲಿಮಾನವೀಯತೆ, ಸತ್ಯ, ಸಹಿಷ್ಣುತೆ ಹಾಗೂ ಉದಾತ್ತ ಧ್ಯೇಯಗಳತ್ತ ಮಾನವ ಕುಲವನ್ನು ಉದ್ಧಾರಗೊಳಿಸುವ ನಿಟ್ಟಿನಲ್ಲಿಶಿವಶರಣರ ಕೊಡುಗೆ ಅಮೋಘವಾಗಿದೆ ಎಂದು ಶಿಕ್ಷಕ ಎಸ್‌.ಎಸ್‌.ನರೇಗಲ್ಲ ಹೇಳಿದರು.
Vijaya Karnataka Web the gift of sivasaran is great
ಶಿವಶರಣರ ಕೊಡುಗೆ ಅಮೋಘ


ಸ್ಥಳೀಯ ಮೈಸೂರ ಮಠದಲ್ಲಿಕಸಾಪ ತಾಲೂಕು ಹಾಗೂ ನಗರ ಘಟಕದ 185ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿ ಮತ್ತು ಶಿವಾನುಭವ ಗೋಷ್ಠಿಯಲ್ಲಿಶರಣ ಗೊಲ್ಲಾಳೇಶ್ವರ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿಮಾತನಾಡಿದರು.

ಶರಣ ಸಂಸ್ಕತಿ ಅಂದರೆ ಕಾಯಕ ಮತ್ತು ದಾಸೋಹ. ತ್ಯಾಗ ಮತ್ತು ಸೇವೆ ಶರಣರು ಕೊಟ್ಟ ಚಿರಂತನ ಮೌಲ್ಯಗಳಾಗಿವೆ. ಶರಣರು ಸರಳತೆಯ ಪ್ರತೀಕ. ಯಾವುದು ಸರಳವಾಗಿರುತ್ತದೆ ಅದು ಸುಂದರವಾಗಿರುತ್ತದೆ. ಸತ್ಯವೇ ದೇವರು. ವರ್ಗ, ವರ್ಣ, ಜಾತಿ ಬೇಧವನ್ನು ಅಳಿಸಿ ಸರ್ವರೂ ಸಮಾನರು ಎಂದು ಸಾರಿದ ಶರಣರು 12ನೇ ಶತಮಾನದಲ್ಲಿಯೇ ಕಲ್ಯಾಣ ಕರ್ನಾಟಕದ ಪರಿಕಲ್ಪನೆ ಹುಟ್ಟು ಹಾಕಿದ್ದಾರೆ ಎಂದರು.

ವಿಜಯಮಹಾಂತ ಶ್ರೀ ಸಾನ್ನಿಧ್ಯ ವಹಿಸಿ, ಮಹಾಶರಣ ಕುರುಬ ಗೊಲ್ಲಾಳೇಶ್ವರರು ತಮ್ಮ ಕುರಿ ಕಾಯುವ ಕಾಯಕದಲ್ಲಿಯೇ ಪರವಸ್ತು ಕಂಡವರು. ಆಧ್ಯಾತ್ಮಿಕ ಕೇವಲ ಮೇಲ್ವರ್ಗದವರಿಗೆ ಅಲ್ಲ. ಅದನ್ನು ಎಲ್ಲರೂ ಸಾಧಿಸಬಹುದು ಎಂಬುದನ್ನು ಶರಣರು ಪ್ರತಿಪಾದಿಸಿ ತೋರಿಸಿದರು ಎಂದರು.

ಈ ವೇಳೆ ಕಸಾಪ ವತಿಯಿಂದ ಸಾಹಿತ್ಯ ಚಿಗುರು ಪ್ರಶಸ್ತಿಯನ್ನು ಡಾ.ಗೋವಿಂದರಾಜ ತಳಕೋಡ, ಎಸ್‌.ಬಿ.ಹೀರೆಮಠ, ಗೀತಾ ಶ್ರೀಧರ ಯಾಳಗಿ, ತಯಬಲಿ ಹೊಂಬಳ, ಕೆ.ಬಿ.ಅಮಾತೆಣ್ಣವರ ಅವರಿಗೆ ನೀಡಿ ಸನ್ಮಾನಿಸಲಾಯಿತು.

ಡಾ.ಬಿ.ವಿ.ಕಂಬ್ಳಾಳ, ಕಳಕಪ್ಪ ಮಳಗಿ, ಟಿ.ಎಸ್‌.ರಾಜೂರ, ಮಂಜುನಾಥ ಅಂಗಡಿ, ಮಹಾಂತೇಶ ಅರಳಿ, ಬಿ.ವಿ.ಮುನವಳ್ಳಿ, ಮಹೇಶ ಕುರಿ, ವಿಜಯಲಕ್ಷ್ಮಿ ಚಟ್ಟೇರ, ಬಿ.ಟಿ.ಹೊಸಮನಿ, ಮಂಜುಳಾ ರೇವಡಿ, ಪಾರಮ್ಮ ತಾಳಿಕೋಟಿ, ಹುಚ್ಚಪ್ಪ ಹಾವೇರಿ, ಕೆ.ಜಿ.ಸಂಗಟಿ, ಸುರೇಶ ಪತ್ತಾರ, ಎಂ.ಎಸ್‌.ಮಕಾನದಾರ, ಮಹಾಂತೇಶ ಮಳಗಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ