ಆ್ಯಪ್ನಗರ

ರಾಯರ ಮಧ್ಯಾರಾಧನೆ ವೈಭವ

ಗಜೇಂದ್ರಗಡ : ಪಟ್ಟಣದ ಗಂಜಿಪೇಟೆಯ ಉಡುಪಿ ಪಲಿಮಾರುಮಠ ಆದೀನದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀಗುರು ಜಗನ್ನಾಥ ದಾಸರ ಸೇವಾ ಸಮಿತಿಯಿಂದ 348ನೇ ಆರಾಧನಾ ಮಹೋತ್ಸವ ಪ್ರಯುಕ್ತ ಶನಿವಾರ ಮಧ್ಯಾರಾಧನೆ ವೈಭವದಿಂದ ನಡೆಯಿತು.

Vijaya Karnataka 18 Aug 2019, 5:00 am
ಗಜೇಂದ್ರಗಡ : ಪಟ್ಟಣದ ಗಂಜಿಪೇಟೆಯ ಉಡುಪಿ ಪಲಿಮಾರುಮಠ ಆದೀನದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀಗುರು ಜಗನ್ನಾಥ ದಾಸರ ಸೇವಾ ಸಮಿತಿಯಿಂದ 348ನೇ ಆರಾಧನಾ ಮಹೋತ್ಸವ ಪ್ರಯುಕ್ತ ಶನಿವಾರ ಮಧ್ಯಾರಾಧನೆ ವೈಭವದಿಂದ ನಡೆಯಿತು.
Vijaya Karnataka Web GDG-17GJD1
ಗಜೇಂದ್ರಗಡ ಗಂಜಿಪೇಟೆಯಲ್ಲಿ ದೇಗುಲದಲ್ಲಿ ಶನಿವಾರ ಮಧ್ಯಾರಾಧನೆ ಪ್ರಯುಕ್ತ ವಿಶೇಷ ಅಲಂಕೃತ ಶ್ರೀ ರಾಘವೇಂದ್ರಸ್ವಾಮಿ ಮೂರ್ತಿ.


ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ, ವಿಶೇಷ ಅಲಂಕಾರ ಮತ್ತು ಭಜನೆ, ಮಧ್ಯಾಹ್ನ ಮಹಾ ಮಂಗಳಾರತಿ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಗುರುಜಗನ್ನಾಥ ದಾಸರ ಭಜನಾ ಮಂಡಳಿಯಿಂದ ಭಜನೆ, ಪಾಲಕಿ, ಮಹಾ ಮಂಗ ಳಾರತಿ ಹಾಗೂ ಅಷ್ಠಾವಧಾನ ಸೇವೆ ಭಕ್ತಿಯಿಂದ ನಡೆಸಿದರು.

ಭೀಷ್ಮಾಸಾ ಬಾಕಳೆ, ಶಿವಶಂಕ್ರಪ್ಪ ಮೇದಕೆರ, ವೆಂಕಟೇಶ ಶೆಟ್ಟರ್‌, ನಾಗರಾಜ ವೆರ್ಣೇಕರ್‌, ರಾಜೇಶ ಹೊರಪೇಟೆ, ರಮೇಶ ಯಂಕಚ್ಚಿ, ಮಹದೇವ ವೆರ್ಣೇಕರ್‌, ಈರಣ್ಣಾ ಉರವಕೊಡ, ವಿಜಯ ರಾಯಬಾಗಿ, ಸುರೇಂದ್ರ ರಾಯಬಾಗಿ, ವೆಂಕಟೇಶ ರಾಯಬಾಗಿ, ಶ್ರೀಧರ ರಾಯಬಾಗಿ, ಗಣೇಶ ರಾಯಬಾಗಿ, ಕುಬೇಂದ್ರ ಪವಾರ, ಲಕ್ಷ ್ಮಣ ಬಾಕಳೆ, ಶಿವಾಜಿ ಕರಕಿಕಟ್ಟಿ, ಶ್ರೀಕಾಂತ ದಲಭಂಜನ, ಜ್ಞಾನೇಶ್ವರ ಭಾಂಡೆಗೆ, ಶಾಮಣ್ಣ ವನ್ನಾಲ, ವೆಂಕಟೇಶ ರಾಚೋಳಿ, ಮಂಜುನಾಥ ಅರಸಿದ್ದಿ, ಬಾಬಣ್ಣಾ ಸೂರ್ಯವಂಶಿ, ವಿಶ್ವನಾಥ ಕುಷ್ಟಗಿ, ಆನಂದ ಚೆನ್ನಿ, ಮಾರುತೆಪ್ಪ ಕಲ್ಲೊಡ್ಡ ಇನ್ನಿತರರಿದ್ದರು.

ಇಂದು ಉತ್ತರಾಧನೆ :
ಆ.18 ರಂದು ಉತ್ತರಾಧನೆ ನಿಮಿತ್ತ ರಾಘವೇಂದ್ರ ಯತಿಗಳ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಧಾರ್ಮಿಕ, ವಿಧಿ ವಿಧಾನ ಕೈಗೊಳ್ಳಲಾಗುವುದು. 11.30ಕ್ಕೆ ರಥೋತ್ಸವ, ಪಾಲಕಿ ಸೇವೆ, ಮಧ್ಯಾಹ್ನ 1ಕ್ಕೆ ಪ್ರಸಾದ ವಿತರಣೆ ಜರುಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ