ಆ್ಯಪ್ನಗರ

ಗುರಿ ತಲುಪಲು ಉತ್ತಮ ಆರೋಗ್ಯ ಅವಶ್ಯ

ಗದಗ: ನಗರದ ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಆಪ್ತ ಸಮಾಲೋಚನಾ ಕಾರ್ಯಕ್ರಮ ನಡೆಯಿತು.

Vijaya Karnataka 24 Mar 2019, 5:00 am
ಗದಗ: ನಗರದ ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಆಪ್ತ ಸಮಾಲೋಚನಾ ಕಾರ್ಯಕ್ರಮ ನಡೆಯಿತು.
Vijaya Karnataka Web the goal is to get good health
ಗುರಿ ತಲುಪಲು ಉತ್ತಮ ಆರೋಗ್ಯ ಅವಶ್ಯ


ಕೌನ್ಸಿಲರ್‌ ಮಹಮ್ಮದಶರೀಫ ಬೆನಕಲ್‌ ಮಾತನಾಡಿ, ಪ್ರತಿಯೊಬ್ಬರು ಗುರಿ ಮುಟ್ಟಲು ಆರೋಗ್ಯ ಪಾತ್ರ ಅತಿ ಅವಶ್ಯವಾಗಿದೆ. ಮಾನಸಿಕ ಖಾಯಿಲೆಗಳಾದ ತೀವ್ರತರ ಖಾಯಿಲೆ, ಸಾಮಾನ್ಯ ಖಾಯಿಲೆ, ಆತಂಕ, ಖಿನ್ನತೆ, ನಿಶ್ಯಕ್ತಿ, ಆಲಸ್ಯ, ಹಸುವಿನ ಬದಲಾವಣೆ, ಏಕಾಗ್ರತೆ ಕೊರತೆ, ಉನ್ಮಾದ ರೋಗ, ದೆವ್ವ ಮತ್ತು ದೇವರು ಬರುವುದು. ವ್ಯಕ್ತಿತ್ವ ನಿರೂಪಣೆಯಿಂದ ಅತಿಯಾದ ಸಿಟ್ಟು, ಅತಿಯಾದ ಮೊಬೈಲ್‌ ಬಳಕೆ, ಹಠಮಾರಿತನ ಇವು ಎಲ್ಲವುಗಳಿಗೆ ಮಾನಸಿಕ ಆಪ್ತ ಸಮಾಲೋಚನೆ ಚಿಕಿತ್ಸೆ ಅವಶ್ಯವಾಗಿದೆ ಎಂದರು.

ಮಧ್ಯಪಾನೀಯಗಳ ಬಳಕೆಯಿಂದ ಡೊಕೊಮಿನ್ನರ ದೌರ್ಬಲ್ಯ ಹೊಂದಿ ಮಾನಸಿಕ ಖಾಯಿಲೆ ಅಂಟಿಕೊಳ್ಳುತ್ತವೆ. ಕೆಲಸದ ಒತ್ತಡದಿಂದ ಮನುಷ್ಯನ ಕಾರ್ಯಗಳು ಕುಂಠಿತವಾಗುತ್ತವೆ. ಇವುಗಳನ್ನು ಹೋಗಲಾಡಿಸುವಿಕೆ ಪತ್ರಿಯೊಬ್ಬರಿಗೂ ಆಪ್ತ ಸಮಾಲೋಚನೆ ಬಹು ಮುಖ್ಯವಾಗಿದೆ ಎಂದು ಹೇಳಿದರು. ಅಧ್ಯಕ್ಷ ತೆ ವಹಿಸಿದ್ದ ಪ್ರೊ.ಎಮ್‌.ಬಿ.ಕೊಳವಿ ಮಾತನಾಡಿ, ಆಸೆಗಳು ಈಡೇರದಿದ್ದಾಗ ಮನಸ್ಸು ತುಮಲನಕ್ಕೆ ಒಳಗಾಗಿ ಮನಸ್ಸು ವಿಕಾರಗೊಳ್ಳುತ್ತದೆ. ಪ್ರಜ್ಞಾವಸ್ಥೆ, ಅರೆಪ್ರಜ್ಞಾವಸ್ಥೆ, ಮನೋಸ್ಥೈರ್ಯಕ್ಕೆ ಒಳಗಾಗುತ್ತಾನೆ ಎಂದರು. 200 ವಿದ್ಯಾರ್ಥಿಗಳೊಡನೆ ಆಪ್ತ ಸಮಾಲೋಚನೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ