ಜಾತಿ ಬೇಧವಿಲ್ಲದ ಸಮಾಜ ಶರಣರ ಗುರಿ
ಗದಗ : 12ನೇ ಶತಮಾನದ ವಚನ ಚಳವಳಿ ಮತ್ತು ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತರಾಗಿದ್ದರು. ಬೆಡಗಿನ ಹಾಗೂ ಬಂಡಾಯ ಮನೋಭಾವದ ವಚನ ರಚಿಸಿದ್ದಾರೆ ಎಂದು ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
Vijaya Karnataka 18 Jul 2019, 5:00 am
ಗದಗ : 12ನೇ ಶತಮಾನದ ವಚನ ಚಳವಳಿ ಮತ್ತು ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತರಾಗಿದ್ದರು. ಬೆಡಗಿನ ಹಾಗೂ ಬಂಡಾಯ ಮನೋಭಾವದ ವಚನ ರಚಿಸಿದ್ದಾರೆ ಎಂದು ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಎಡೆಯೂರು ಜ.ತೋಂಟದಾರ್ಯ ಮಠದಲ್ಲಿ ನಡೆದ 2441 ನೇ ಶಿವಾನುಭವದಲ್ಲಿ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗಮ್ಮನವರು ಮಹಾಶರಣೆಯಾಗಿದ್ದು ಅವರೂ ಸಹ ಅನೇಕ ವಚನ ರಚಿಸುವ ಮೂಲಕ ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬಂತೆ ಆದರ್ಶ ಜೀವನ ಸಾಗಿಸಿದ್ದಾರೆ.
ಶರಣರು ಜಾತಿ, ವರ್ಗ, ವರ್ಣ, ಲಿಂಗಬೇಧವಿಲ್ಲದ ಸಮಾಜ ನಿರ್ಮಿಸಿ, ಸರ್ವರ ಕಲ್ಯಾಣವಾಗಬೇಕೆಂದು ಬಯಸಿದರು ಎಂದರು.
ಮಹಾಶರಣ ಹಡಪದ ಅಪ್ಪಣ್ಣನವರ ವಚನಸಾರ ಕುರಿತು ಪ್ರೊ.ಜಯಶ್ರೀ ಪಟ್ಟಣಶೆಟ್ಟಿ ಮಾತನಾಡಿ, ಅನುಭವ ಮಂಟಪದ ಆಧಾರ ಸ್ಥಂಭ ಹಡಪದ ಅಪ್ಪಣ್ಣನವರಾಗಿದ್ದರು. ಒಳ್ಳೆಯ ನಡೆ ನುಡಿ, ಕಾಯಕ್ಕೆ ಬಾಗುವವರೆ ನಿಜವಾದ ಶರಣರು ಎಂಬುದು ಅಪ್ಪಣ್ಣವರ ಅಭಿಮತವಾಗಿತ್ತು. ಅವರ ವಚನಗಳು ಸರಳತೆ ಮತ್ತು ಗಂಭೀರತೆಯಿಂದ ಕೂಡಿವೆ. ಅಲ್ಲಮಪ್ರಭುಗಳಿಂದ ಪ್ರಭಾವಿತರಾದ ಅಪ್ಪಣ್ಣನವರು ಬಂಡಾದ ವಚನ ರಚಿಸಿ ಸಮಾಜದ ಕೊಂಕು ನುಡಿಗಳಿಗೆ ಉತ್ತರಿಸಿದರು ಎಂದು ತಿಳಿಸಿದರು.
ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ರಾಗಿ ಆಯ್ಕೆಯಾದ ಈಶ್ವರಪ್ಪ ಮುನವಳ್ಳಿ,ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ನಾಗಪ್ಪ ಸವಡಿ ಅವರನ್ನು ತೋಂಟದಶ್ರೀ ಸನ್ಮಾನಿಸಿದರು.
ಡಂಬಳದ ಜ.ತೋಂಟದಾರ್ಯ ಸಂಗೀತ ಪಾಠಶಾಲಾ ವಿದ್ಯಾರ್ಥಿಗಳು ಹಾಗೂ ಬಸವರಾಜ ಸಿದ್ಧಣ್ಣವರ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಧರ್ಮಗ್ರಂಥ ಪಠಣ ಸಹನಾ ಶಲವಡಿ ಹಾಗೂ ವಚನ ಚಿಂತನ ಭೂದೇವಿ ಕುರ್ತಕೋಟಿ ನೆರವೇರಿಸಿದರು.
ಸಿದ್ಧಲಿಂಗೇಶ್ವರ ಅಂಗಡಿ, ಬಸವರಾಜ ಅಂಗಡಿ, ವಿವೇಕಾನಂದಗೌಡ ಪಾಟೀಲ, ಸಂಗಮೇಶ ದುಂದೂರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ, ರತ್ನಕ್ಕ ಪಾಟೀಲ ಇದ್ದರು.ಗೌರಕ್ಕ ಬಡಿಗಣ್ಣವರ ನಿರೂಪಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಎಡೆಯೂರು ಜ.ತೋಂಟದಾರ್ಯ ಮಠದಲ್ಲಿ ನಡೆದ 2441 ನೇ ಶಿವಾನುಭವದಲ್ಲಿ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗಮ್ಮನವರು ಮಹಾಶರಣೆಯಾಗಿದ್ದು ಅವರೂ ಸಹ ಅನೇಕ ವಚನ ರಚಿಸುವ ಮೂಲಕ ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬಂತೆ ಆದರ್ಶ ಜೀವನ ಸಾಗಿಸಿದ್ದಾರೆ.
ಶರಣರು ಜಾತಿ, ವರ್ಗ, ವರ್ಣ, ಲಿಂಗಬೇಧವಿಲ್ಲದ ಸಮಾಜ ನಿರ್ಮಿಸಿ, ಸರ್ವರ ಕಲ್ಯಾಣವಾಗಬೇಕೆಂದು ಬಯಸಿದರು ಎಂದರು.
ಮಹಾಶರಣ ಹಡಪದ ಅಪ್ಪಣ್ಣನವರ ವಚನಸಾರ ಕುರಿತು ಪ್ರೊ.ಜಯಶ್ರೀ ಪಟ್ಟಣಶೆಟ್ಟಿ ಮಾತನಾಡಿ, ಅನುಭವ ಮಂಟಪದ ಆಧಾರ ಸ್ಥಂಭ ಹಡಪದ ಅಪ್ಪಣ್ಣನವರಾಗಿದ್ದರು. ಒಳ್ಳೆಯ ನಡೆ ನುಡಿ, ಕಾಯಕ್ಕೆ ಬಾಗುವವರೆ ನಿಜವಾದ ಶರಣರು ಎಂಬುದು ಅಪ್ಪಣ್ಣವರ ಅಭಿಮತವಾಗಿತ್ತು. ಅವರ ವಚನಗಳು ಸರಳತೆ ಮತ್ತು ಗಂಭೀರತೆಯಿಂದ ಕೂಡಿವೆ. ಅಲ್ಲಮಪ್ರಭುಗಳಿಂದ ಪ್ರಭಾವಿತರಾದ ಅಪ್ಪಣ್ಣನವರು ಬಂಡಾದ ವಚನ ರಚಿಸಿ ಸಮಾಜದ ಕೊಂಕು ನುಡಿಗಳಿಗೆ ಉತ್ತರಿಸಿದರು ಎಂದು ತಿಳಿಸಿದರು.
ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ರಾಗಿ ಆಯ್ಕೆಯಾದ ಈಶ್ವರಪ್ಪ ಮುನವಳ್ಳಿ,ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ನಾಗಪ್ಪ ಸವಡಿ ಅವರನ್ನು ತೋಂಟದಶ್ರೀ ಸನ್ಮಾನಿಸಿದರು.
ಡಂಬಳದ ಜ.ತೋಂಟದಾರ್ಯ ಸಂಗೀತ ಪಾಠಶಾಲಾ ವಿದ್ಯಾರ್ಥಿಗಳು ಹಾಗೂ ಬಸವರಾಜ ಸಿದ್ಧಣ್ಣವರ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಧರ್ಮಗ್ರಂಥ ಪಠಣ ಸಹನಾ ಶಲವಡಿ ಹಾಗೂ ವಚನ ಚಿಂತನ ಭೂದೇವಿ ಕುರ್ತಕೋಟಿ ನೆರವೇರಿಸಿದರು.
ಸಿದ್ಧಲಿಂಗೇಶ್ವರ ಅಂಗಡಿ, ಬಸವರಾಜ ಅಂಗಡಿ, ವಿವೇಕಾನಂದಗೌಡ ಪಾಟೀಲ, ಸಂಗಮೇಶ ದುಂದೂರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ, ರತ್ನಕ್ಕ ಪಾಟೀಲ ಇದ್ದರು.ಗೌರಕ್ಕ ಬಡಿಗಣ್ಣವರ ನಿರೂಪಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು.