ಆ್ಯಪ್ನಗರ

ನಂಬಿದ ದೇವರನ್ನು ರಕ್ಷಿಸುವ ದೇವಿ

ನರೇಗಲ್ಲ: ಪಟ್ಟಣದ ಮುಖ್ಯ ರಸ್ತೆಯಲ್ಲಿನ ಕಾಳಿಕಾದೇವಿ ನಂಬಿದ ಭಕ್ತರನ್ನು ಸದಾ ರಕ್ಷಿಸುವ ವಿಶ್ವ ಜಗನ್ಮಾತೆಯಾಗಿದ್ದಾಳೆ ಎಂದು ಜಿಪಂ ಸಹಾಯಕ ಎಂಜನಿಯರ್‌ ಪಾಂಡುರಂಗ ಪತ್ತಾರ ಹೇಳಿದರು.

Vijaya Karnataka 1 Oct 2019, 5:00 am
ನರೇಗಲ್ಲ: ಪಟ್ಟಣದ ಮುಖ್ಯ ರಸ್ತೆಯಲ್ಲಿನ ಕಾಳಿಕಾದೇವಿ ನಂಬಿದ ಭಕ್ತರನ್ನು ಸದಾ ರಕ್ಷಿಸುವ ವಿಶ್ವ ಜಗನ್ಮಾತೆಯಾಗಿದ್ದಾಳೆ ಎಂದು ಜಿಪಂ ಸಹಾಯಕ ಎಂಜನಿಯರ್‌ ಪಾಂಡುರಂಗ ಪತ್ತಾರ ಹೇಳಿದರು.
Vijaya Karnataka Web the goddess who protects the believing god
ನಂಬಿದ ದೇವರನ್ನು ರಕ್ಷಿಸುವ ದೇವಿ


ಸ್ಥಳೀಯ ಕಾಳಿಕಾದೇವಿ ದೇವಸ್ಥಾನದಲ್ಲಿ 47ನೇ ವರ್ಷದ ಪುರಾಣ ಪ್ರಾರಂಭೊತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ದುಷ್ಟ ಸಂಹಾರಿಣಿ ಶಿಷ್ಟರ ರಕ್ಷಕಿಯಾದ ದೇವಿಯ 9 ದಿನಗಳ ಆರಾಧನೆಯಿಂದ ನಮ್ಮಲ್ಲಿನ ಲಕ್ಮಷ ಹೊರಹಾಕುವಂತದ್ದಾಗಿದೆ ಎಂದರು.

ನಾರಾಯಣ ಆಚಾರ್ಯ ವಿಶ್ವಕರ್ಮ ಮಾತನಾಡಿ, ಸಕಲ ಜೀವಾತ್ಮರ ರಕ್ಷಕಳಾದ ಈ ಜಗನ್ಮಾತೆ ಕಾಳಿಕಾಂಬೆ ಸರ್ವ ಧರ್ಮಿಯರು ಪೂಜಿಸುವ ಆರಾದ್ಯ ದೇವತೆ ಎಂದರು.

ನಾರಾಯಣ ವಡ್ಡಟ್ಟಿ ಅದ್ಯಕ್ಷತೆ ವಹಿದ್ದರು.ಪಠಣಕಾರ ರವೀಂದ್ರ ಆಚಾರ್ಯ, ಮಹೇಶ ಕರಡಿಗುಡ್ಡ, ಪಪಂ ಸದಸ್ಯ ಶ್ರೀಶೈಲಪ್ಪ ಬಂಡಿಹಾಳ, ವಿಶಾಲಾಕ್ಷಿ ಹೊಸಮನಿ, ರಿಂದಮ್ಮ ವಡ್ಡಟ್ಟಿ, ನಾಗಲಿಂಗಪ್ಪ ಬಡಿಗೇರ ಇತರರು ಉಪಸ್ಥಿತರಿದ್ದರು. ಗೀತಾ ಪತ್ತಾರ ಸ್ವಾಗತಿಸಿದರು. ವೀರೇಶ ಹೊಸಮನಿ ನಿರೂಪಿಸಿದರು. ಮುತ್ತಣ್ಣ ಹೂಲಗೇರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ