ಮುಂಡರಗಿ : ಸರಕಾರ ರಾಜ್ಯದ ಜನತೆಯ ಆರೋಗ್ಯ ದೃಷ್ಟಿಯಿಂದ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವುದಕ್ಕಾಗಿ ಜನಪ್ರತಿನಿಧಿಗಳು ಹೆಚ್ಚು ಅನುದಾನ ಮೀಸಲಿಡುವಂತೆ ಭಾರತೀಯ ವೈದ್ಯಕೀಯ ಸಂಘ ಈಚೆಗೆ ಸೇರಿದ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಮಿತಿಯಲ್ಲಿ ಚರ್ಚಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ರಾಜ್ಯ ಐಎಂಎ ಅಧ್ಯಕ್ಷ ಡಾ.ಅನ್ನದಾನಿ ಮೇಟಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಕ್ಷೇತ್ರ ಎಲ್ಲ ರೀತಿಯಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದು ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯ ಕಾಯಲು ಹಲವು ಅಂಶಗಳನ್ನು ಗುರ್ತಿಸಿದ್ದು ಇದಕ್ಕೆ ಜನಪ್ರತಿನಿಧಿಗಳ, ಸರಕಾರದ ಆಸಕ್ತಿ ಮುಖ್ಯವಾಗಿದೆ ಎಂದರು.
ಆರೋಗ್ಯ ರಕ್ಷ ಣೆಗಾಗಿ ಜಿಡಿಪಿ ಕೇವಲ ಶೇ.1.2 ದಷ್ಟಿದೆ ಇದು ಶೇ. 2.5 ಆಗಬೇಕು ನಂತರ 2020ರಲ್ಲಿ ಶೇ.3 ರಿಂದ ಶೇ. 5 ರಷ್ಟು ಅನುದಾನ ತೆಗೆದಿರಿಸಬೇಕು. ಇದರಿಂದ ಬಡತನದ ರೇಖೆಗಿಂತ ಇರುವ ಜನ ಆರೋಗ್ಯ ಸೇವೆ ಪಡೆಯದೆ ಸಾಲ ಇತರ ಉಳಿಯಲ್ಲಿ ಸಿಲುಕಬೇಕಾಗುತ್ತದೆ, ಈ ಬಗ್ಗೆ ಆರೋಗ್ಯವೇ ಪ್ರಮುಖ ಎಂಬ ಪ್ರಣಾಳಿಕೆ ಬಿಡುಗಡೆಗೊಳಿಸಿದೆ ಇದನ್ನು ಸರಕಾರಕ್ಕೆ ತಲುಪಿಸಲಾಗುವುದು. ಎಲ್ಲ ರಾಜಕೀಯ ಪಕ್ಷ ಗಳು ಆರೋಗ್ಯಕ್ಕೆ ಮೊದಲು ಆದ್ಯತೆ ನೀಡುವ ಕುರಿತು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ, ಭಾರತೀಯ ವೈದ್ಯ ಸಂಘವು ದೇಶಾದ್ಯಂತ ವೈದ್ಯರು ಸೇರಿ ಕುಟುಂಬದವರ 5 ಲಕ್ಷ ಮೀರುತ್ತಾರೆ, ಇವರೆಲ್ಲ ಜನಸಾಮಾನ್ಯ ಆರೋಗ್ಯ ಸ್ವಾಸ್ಥ್ಯ ದೊರಕಿಸಿಕೊಡಲು ಐಎಂಎ ಕಾರ್ಯಪ್ರತ್ತವಾಗಿದೆ.
ಆರೋಗ್ಯಕ್ಕಾಗಿ ಪ್ರಮುಖವಾಗಿ ಪ್ರಣಾಳಿಕೆಯಲ್ಲಿ ಸೇರಿದ ಅಂಶಗಳೆಂದರೆ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚು ಹಣ ಮೀಸಲಿಡುವುದು, ಪ್ರಾಥಮಿಕ, ಗ್ರಾಮೀಣ ಆರೋಗ್ಯಕ್ಕೆ ಒತ್ತು ನೀಡುವುದು, ಉದ್ದೇಶಪೂರ್ವಕವಲ್ಲದ ವೈದ್ಯರನ್ನು ಅವಘಡ ನಡೆದಾಗ ಅಪರಾಧಿ ಸ್ಥಾನದಲ್ಲಿ ನಿಲ್ಲಸದಿರುವುದು, 10 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರನ್ನು ನೇಮಿಸುವುದು, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಲ್ಲರಿಗೂ ಎಟಕುವಂತೆ ಶುಲ್ಕ ನಿಗದಿಗೊಳಿಸುವುದು, ಕೀಟನಾಶಕಗಳ ಮೇಲೆ ನಿಯಂತ್ರಣ, ಮದ್ಯಪಾನ ಜಂಕ್ ಫುಡ್ ಮೇಲೆ ತೆರಿಗೆ ಹಾಕುವುದು, ಅನಧಿಕೃತ ಚಿಕಿತ್ಸೆಗಳು, ಜಾಹಿರಾತುಗಳ, ಕ್ವಾಕರಿ ಬಗ್ಗೆ ನಿಯಂತ್ರಣ ಮತ್ತು ಶಾಸನ ರೂಪಿಸುವುದು, ಚಿಕ್ಕ ಮತ್ತು ಮದ್ಯಮ ಗಾತ್ರದ ನರ್ಸಿಂಗ್ ಹೋಂಗಳ ರಕ್ಷ ಣೆಗೆ ಮುಂದಾಗುವುದು, ಸೇರಿದಂತೆ ಸುರಕ್ಷಿತ ಆಹಾರ ಬಗ್ಗೆಯೂ ಜಾಗೃತಿ ಮೂಡಿಸುವುದು, ಹೀಗೆ ಈ ಪ್ರಣಾಳಿಯ ಬಿಡುಗಡೆ ಸಂದರ್ಭದಲ್ಲಿ ಐಎಂಎ ರಾಷ್ಟ್ರಾಧ್ಯಕ್ಷ ಡಾ.ಶಂತನು ಸೇನ್, ಗೌರವಾನ್ವಿತ ಕಾರ್ಯದರ್ಶಿ ಡಾ.ಆರ್.ವಿ.ಅಶೋಕನ್, ಆರೋಗ್ಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ರವಿ. ವಾಂಖಡೇಕರ್, ಡಾ.ಮಾತಾಂಡ ಪಿಳ್ಳೈ, ಡಾ.ಎಸ್.ಶ್ರಿನಿವಾಸ ಉಪಸ್ಥಿತರಿದ್ದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಕ್ಷೇತ್ರ ಎಲ್ಲ ರೀತಿಯಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದು ಬಡವರು ಮತ್ತು ಮಧ್ಯಮ ವರ್ಗದವರ ಆರೋಗ್ಯ ಕಾಯಲು ಹಲವು ಅಂಶಗಳನ್ನು ಗುರ್ತಿಸಿದ್ದು ಇದಕ್ಕೆ ಜನಪ್ರತಿನಿಧಿಗಳ, ಸರಕಾರದ ಆಸಕ್ತಿ ಮುಖ್ಯವಾಗಿದೆ ಎಂದರು.
ಆರೋಗ್ಯ ರಕ್ಷ ಣೆಗಾಗಿ ಜಿಡಿಪಿ ಕೇವಲ ಶೇ.1.2 ದಷ್ಟಿದೆ ಇದು ಶೇ. 2.5 ಆಗಬೇಕು ನಂತರ 2020ರಲ್ಲಿ ಶೇ.3 ರಿಂದ ಶೇ. 5 ರಷ್ಟು ಅನುದಾನ ತೆಗೆದಿರಿಸಬೇಕು. ಇದರಿಂದ ಬಡತನದ ರೇಖೆಗಿಂತ ಇರುವ ಜನ ಆರೋಗ್ಯ ಸೇವೆ ಪಡೆಯದೆ ಸಾಲ ಇತರ ಉಳಿಯಲ್ಲಿ ಸಿಲುಕಬೇಕಾಗುತ್ತದೆ, ಈ ಬಗ್ಗೆ ಆರೋಗ್ಯವೇ ಪ್ರಮುಖ ಎಂಬ ಪ್ರಣಾಳಿಕೆ ಬಿಡುಗಡೆಗೊಳಿಸಿದೆ ಇದನ್ನು ಸರಕಾರಕ್ಕೆ ತಲುಪಿಸಲಾಗುವುದು. ಎಲ್ಲ ರಾಜಕೀಯ ಪಕ್ಷ ಗಳು ಆರೋಗ್ಯಕ್ಕೆ ಮೊದಲು ಆದ್ಯತೆ ನೀಡುವ ಕುರಿತು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ, ಭಾರತೀಯ ವೈದ್ಯ ಸಂಘವು ದೇಶಾದ್ಯಂತ ವೈದ್ಯರು ಸೇರಿ ಕುಟುಂಬದವರ 5 ಲಕ್ಷ ಮೀರುತ್ತಾರೆ, ಇವರೆಲ್ಲ ಜನಸಾಮಾನ್ಯ ಆರೋಗ್ಯ ಸ್ವಾಸ್ಥ್ಯ ದೊರಕಿಸಿಕೊಡಲು ಐಎಂಎ ಕಾರ್ಯಪ್ರತ್ತವಾಗಿದೆ.
ಆರೋಗ್ಯಕ್ಕಾಗಿ ಪ್ರಮುಖವಾಗಿ ಪ್ರಣಾಳಿಕೆಯಲ್ಲಿ ಸೇರಿದ ಅಂಶಗಳೆಂದರೆ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚು ಹಣ ಮೀಸಲಿಡುವುದು, ಪ್ರಾಥಮಿಕ, ಗ್ರಾಮೀಣ ಆರೋಗ್ಯಕ್ಕೆ ಒತ್ತು ನೀಡುವುದು, ಉದ್ದೇಶಪೂರ್ವಕವಲ್ಲದ ವೈದ್ಯರನ್ನು ಅವಘಡ ನಡೆದಾಗ ಅಪರಾಧಿ ಸ್ಥಾನದಲ್ಲಿ ನಿಲ್ಲಸದಿರುವುದು, 10 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರನ್ನು ನೇಮಿಸುವುದು, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಲ್ಲರಿಗೂ ಎಟಕುವಂತೆ ಶುಲ್ಕ ನಿಗದಿಗೊಳಿಸುವುದು, ಕೀಟನಾಶಕಗಳ ಮೇಲೆ ನಿಯಂತ್ರಣ, ಮದ್ಯಪಾನ ಜಂಕ್ ಫುಡ್ ಮೇಲೆ ತೆರಿಗೆ ಹಾಕುವುದು, ಅನಧಿಕೃತ ಚಿಕಿತ್ಸೆಗಳು, ಜಾಹಿರಾತುಗಳ, ಕ್ವಾಕರಿ ಬಗ್ಗೆ ನಿಯಂತ್ರಣ ಮತ್ತು ಶಾಸನ ರೂಪಿಸುವುದು, ಚಿಕ್ಕ ಮತ್ತು ಮದ್ಯಮ ಗಾತ್ರದ ನರ್ಸಿಂಗ್ ಹೋಂಗಳ ರಕ್ಷ ಣೆಗೆ ಮುಂದಾಗುವುದು, ಸೇರಿದಂತೆ ಸುರಕ್ಷಿತ ಆಹಾರ ಬಗ್ಗೆಯೂ ಜಾಗೃತಿ ಮೂಡಿಸುವುದು, ಹೀಗೆ ಈ ಪ್ರಣಾಳಿಯ ಬಿಡುಗಡೆ ಸಂದರ್ಭದಲ್ಲಿ ಐಎಂಎ ರಾಷ್ಟ್ರಾಧ್ಯಕ್ಷ ಡಾ.ಶಂತನು ಸೇನ್, ಗೌರವಾನ್ವಿತ ಕಾರ್ಯದರ್ಶಿ ಡಾ.ಆರ್.ವಿ.ಅಶೋಕನ್, ಆರೋಗ್ಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ರವಿ. ವಾಂಖಡೇಕರ್, ಡಾ.ಮಾತಾಂಡ ಪಿಳ್ಳೈ, ಡಾ.ಎಸ್.ಶ್ರಿನಿವಾಸ ಉಪಸ್ಥಿತರಿದ್ದರು.