ಆ್ಯಪ್ನಗರ

ಆದರ್ಶ ವ್ಯಕ್ತಿಗಳ ನಡೆ ದಾರಿದೀಪ

ಗಜೇಂದ್ರಗಡ : ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿ ಶಾಲೆ ನಂ5 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌, ರಾಜಗುರು,ಸುಖದೇವರವರ ಹುತಾತ್ಮ ದಿನ ಆಚರಿಸಲಾಯಿತು.

Vijaya Karnataka 25 Mar 2019, 5:00 am
ಗಜೇಂದ್ರಗಡ : ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿ ಶಾಲೆ ನಂ5 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌, ರಾಜಗುರು,ಸುಖದೇವರವರ ಹುತಾತ್ಮ ದಿನ ಆಚರಿಸಲಾಯಿತು.
Vijaya Karnataka Web GDG-23GJD3
ಗಜೇಂದ್ರಗಡ ಸರಕಾರಿ ಹಿರಿಯ ಪ್ರಾಥಮಿ ಶಾಲೆ ನಂ5 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌, ರಾಜಗುರು,ಸುಖದೇವರವರ ಹುತಾತ್ಮ ದಿನಾಚರಣೆಯಲ್ಲಿ ಮಾರುತಿ ಚಿಟಗಿ ಮಾತನಾಡಿದರು.


ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಾರುತಿ ಚಿಟಗಿ ಮಾತನಾಡಿ, ಭಗತ್‌ ಸಿಂಗ್‌ ಅಸಮಾನತೆ ಹೋಗಲಾಡಿಸಿ ಸಮಾನತೆ ಕನಸ್ಸು ಕಂಡವರು. ಸರ್ವರಿಗೂ ಶಿಕ್ಷ ಣ ಸರ್ವರಿಗೂ ಉದ್ಯೋಗದ ಜತೆಗೆ ಸಹಬಾಳ್ವೆಯೊಂದಿಗೆ ಎಲ್ಲರೂ ಜೀವನ ನಡೆಸುವಂತಾಗಬೇಕು.ಬ್ರಿಟಿಷರನ್ನು ಹೊಡೆದೊಡಿಸಿ ದೇಶದಲ್ಲಿ ಸಮಾನತೆಯ ಮಂತ್ರ ಜಪಿಸಿದವರು. ಇಂತಹ ಆದರ್ಶ ವ್ಯಕ್ತಿಯ ವಿಚಾರವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದರು.

ದಾವಲಸಾಬ ತಾಳಿಕೋಟಿ ಮಾತನಾಡಿ, ಕ್ರಾಂತಿಕಾರಿ ಸ್ವಾತಂತ್ರ ಹೊರಾಟಗಾರ ಭಗತ್‌ಸಿಂಗ್‌ ಹೋರಾಟದ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಭಗತ್‌ಸಿಂಗ್‌ ಆದರ್ಶಗಳನ್ನು ವಿದ್ಯಾರ್ಥಿಗಳು ಆಳವಡಿಸಿಕೊಳ್ಳಬೇಕು. ಭಗತ್‌ಸಿಂಗ್‌ ಅವರ ತ್ಯಾಗ, ಬಲಿದಾನ ದೇಶದ ಜನ ಎಂದು ಮರೆಯಲು ಸಾಧ್ಯವಿಲ್ಲ ಎಂದರು.

ಆರಂಭದಲ್ಲಿ ಪೌರಾಡಳಿತ ಸಚಿವ ಶಿವಳ್ಳಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ಶಿಕ್ಷ ಕಿ ಎಸ್‌.ಡಿ.ಸವದತ್ತಿ ಮಾತನಾಡಿದರು.ರೇಣುಕಾ ಇಟಗಿ, ಬಿ.ಎ.ಕುಲಕರ್ಣಿ, ಡಿ.ವಿ.ಕಳ್ಳಿ, ಸಾವಿತ್ರಿ ಪವಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ