ಆ್ಯಪ್ನಗರ

ಶಿಕ್ಷಣ ಕೊರತೆಯಿಂದ ದೇವಾಂಗ ಸಮಾಜಕ್ಕೆ ಹಿನ್ನಡೆ

ಲಕ್ಷ್ಮೇಶ್ವರ: ಸಮಾಜದಲ್ಲಿ ಶಿಕ್ಷ ಣದ ಕೊರತೆಯಿಂದಾಗಿ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಸಮಾಜದವರು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷ ಣ ನೀಡಲು ಆದ್ಯತೆ ನೀಡಬೇಕು ಎಂದು ಹಳೇಹುಬ್ಬಳ್ಳಿಯ ವೀರಬಿಕ್ಷಾವರ್ತಿ ನೀಲಕಂಠಮಠದ ಜ.ಶ್ರೀ.ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Vijaya Karnataka 16 Feb 2019, 5:00 am
ಲಕ್ಷ್ಮೇಶ್ವರ: ಸಮಾಜದಲ್ಲಿ ಶಿಕ್ಷ ಣದ ಕೊರತೆಯಿಂದಾಗಿ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಸಮಾಜದವರು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷ ಣ ನೀಡಲು ಆದ್ಯತೆ ನೀಡಬೇಕು ಎಂದು ಹಳೇಹುಬ್ಬಳ್ಳಿಯ ವೀರಬಿಕ್ಷಾವರ್ತಿ ನೀಲಕಂಠಮಠದ ಜ.ಶ್ರೀ.ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
Vijaya Karnataka Web the lack of education has led to the devangan society
ಶಿಕ್ಷಣ ಕೊರತೆಯಿಂದ ದೇವಾಂಗ ಸಮಾಜಕ್ಕೆ ಹಿನ್ನಡೆ


ಪಟ್ಟಣದ ಕೆಂಚಲಾಪುರ ಬಡಾವಣೆಯಯಲ್ಲಿ ದೇವಾಂಗ ಸಮಾಜದವರು ನಿರ್ಮಿಸಿರುವ ನೂತನ ಬನಶಂಕರಿ ದೇವಿ ದೇವಸ್ಥಾನದ ಲೋಕಾರ್ಪಣೆ ಮತ್ತು ಬನಶಂಕರಿದೇವಿ ಮೂರ್ತಿ ಪ್ರತಿಷ್ಠಾಪನೆಯ ನಂತರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವನ ನೀಡಿದ ಶ್ರೀಗಳು, ಹಿಂದುಳಿದ ವರ್ಗದಲ್ಲಿ ಬರುವ ಈ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ನೇಕಾರಿಕೆಯನ್ನೇ ನಂಬಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಾಜದ ಅಭಿವೃದ್ದಿಗಾಗಿ ವಿಶೇಷ ಸೌಲಭ್ಯ ನೀಡಬೇಕು ಮತ್ತು ರಾಜಕೀಯವಾಗಿ ಬೆಳೆಯಲು ಎಲ್ಲ ಪಕ್ಷ ಗಳು ಇವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ನಂತರ ಆಶೀರ್ವನ ನೀಡದ ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮಿಗಳು, ದೇವಾಂಗ ಸಮಾಜದ ಹಿರಿಯ ಮಹಾಬಳೇಶ್ವರಪ್ಪ ಬೇವಿನಮರದ ನಮ್ಮ ಸಮಾಜ ಒಗ್ಗೂಡಿಸಿಕೊಂಡು ಇತರೆ ಸಮಾಜಗಳ ನೆರವಿನೊಂದಿಗೆ 12 ವರ್ಷಗಳ ಕಾಲ ಪರಿಶ್ರಮ ಪಟ್ಟು ಇಂದು ಬನಶಂಕರಿದೇವಿ ದೇವಸ್ಥಾನ ಲೋಕಾರ್ಪಣೆ ಮಾಡುತ್ತಿರುವುದು ಅವರ ಶ್ರದ್ಧಾ ಭಕ್ತಿಯ ಸಂಕೇತವಾಗಿದೆ ಎಂದರು.

ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿದರು.

ಧರ್ಮಸಭೆಯಲ್ಲಿ ಹಂಪಿ ಹೇಮಕೂಟ ಮಠದ ದೇವಾಂಗ ಜಗದ್ಗುರು ಶ್ರೀ ದಯಾನಂದ ಪುರಿ ಶ್ರೀ, ಮುಕ್ತಿಮಂದಿರ ಶ್ರೀ, ಗುಳೇದಗಡ್ಡದ ಬ್ರಹನ್ಮಠದ ಶ್ರೀ, ಗಂಜೀಗಟ್ಟಿ ಚರಮೂರ್ತೆಶ್ವರ ಶ್ರೀ, ಕರ್ಜಗಿಯ ಸಿದ್ದಭಾವನಮಠದ ಯೋಗಿ ರಾಮನಾಥಜಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಮಹಾಬಳೇಶ್ವರಪ್ಪ ಬೇವಿನಮರದ ಅಧ್ಯಕ್ಷ ತೆ ವಹಿಸಿದ್ದರು. ಅತಿಥಿಗಳಾಗಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ, ಅಶೋಕ ಬಣ್ಣದ, ರಾಜೇಂದ್ರ ಬರದ್ವಾಡ, ವೀರಭದ್ರಪ್ಪ ಜವಳಿ, ವಿನಾಯಕ ಹಣಗಿ, ಶಾಂತರಾಜ ಗುಡಗೇರಿ, ಯಲ್ಲಪ್ಪಗೌಡ ಉದ್ದನಗೌಡರ, ಚಂದ್ರಕಾಂತ ಘಾಟಗಿ, ಗಣೇಶ ಬೇವಿನಮರದ, ಡಿ.ಬಿ.ಬಳಿಗಾರ ಸೇರಿದಂತೆ ಸೇವಾ ಸಮಿತಿು ಪದಾಧಿಕಾರಿಗಳು ಇದ್ದರು.

ಈಶ್ವರ ಮೆಡ್ಲೇರಿ, ನಾರಾಯಣಪ್ಪ ಗಾರ್ಗಿ, ಗುರುಪುತ್ರಪ್ಪ ಮೆಡ್ಲೇರಿ ಕಾರ್ಯಕ್ರಮ ನಿರ್ವಹಿಸಿದರು.

ನೇಕಾರರ ಸಾಲಮನ್ನಾಕ್ಕೆ ಮನವಿ ಸಲ್ಲಿಕೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ. ಆರ್ಥಿಕವಾಗಿ ಹಿಂದುಳಿದ ದೇವಾಂಗ ಸಮಾಜವನ್ನಷ್ಟೇ ಅಲ್ಲದೇ ಮೇಲ್ವರ್ಗದಲ್ಲೂ ಕೂಡಾ ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಗುರುತಿಸಿ ಸರಕಾರ ಅವುಗಳ ಶ್ರೆಯೋಭಿವೃದ್ಧಿಗಾಗಿ ಅನುದಾನ ನೀಡಬೇಕು. ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಕೈಮಗ್ಗ ಮತ್ತು ವಿದ್ಯುತ್‌ ಮಗ್ಗಗಳ ನೇಕಾರರು ಜವಳಿ ಇಲಾಖೆಯಿಂದ ಪಡೆದ ಸುಮಾರು 32 ಕೋಟಿ ಗೃಹಸಾಲ ಮತ್ತು ಸಾಲ ಮನ್ನಾ ಮಾಡಲಾಗಿತ್ತು. ಆದರೆ ಇದೀಗ ರೂಪಿಸಿರುವ ಸಾಲಮನ್ನಾ ಯೋಜನೆಯ ಕಠಿಣ ನಿಲುವಿನಿಂದಾಗಿ ಸಾಲಮನ್ನಾ ಆಗದಿರುವುದರಿಂದ ಈ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ