ಆ್ಯಪ್ನಗರ

ದೀಪವು ಜ್ಞಾನದ ಸಂಕೇತ

ಮುಳಗುಂದ: ದೀಪವು ಜ್ಞಾನದ ಸಂಕೇತ. ಅಜ್ಞಾನವನ್ನು ಕಳೆಯಲು ನಾವೆಲ್ಲರೂ ಅಂತರಂಗ, ಬಹಿರಂಗ ಶುದ್ಧರಾಗಿ ದೀಪ ಬೆಳಗಿಸಬೇಕು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

Vijaya Karnataka 4 Dec 2019, 5:00 am
ಮುಳಗುಂದ: ದೀಪವು ಜ್ಞಾನದ ಸಂಕೇತ. ಅಜ್ಞಾನವನ್ನು ಕಳೆಯಲು ನಾವೆಲ್ಲರೂ ಅಂತರಂಗ, ಬಹಿರಂಗ ಶುದ್ಧರಾಗಿ ದೀಪ ಬೆಳಗಿಸಬೇಕು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
Vijaya Karnataka Web 3MUL1_25
ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠ ಆವರಣದಲ್ಲಿನಡೆದ ಕಾರ್ತಿಕೋತ್ಸವಕ್ಕೆ ಮಲ್ಲಿಕಾರ್ಜುನ ಮಹಾಸ್ವಾಮೀಜಿ ದೀಪ ಹಚ್ಚಿ ಜಾಲನೆ ನೀಡಿದರು.


ಸ್ಥಳೀಯ ಬಾಲಲೀಲಾ ಮಹಾಂತ ಶಿವಯೋಗಿಗಳ ಕಾರ್ತಿಕೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜ್ಞಾನ ಎಂಬ ದೀಪದಿಂದ ಮನುಷ್ಯನಲ್ಲಿರುವ ಅಜ್ಞಾನದ ಕತ್ತಲೆಯನ್ನು ಕಳೆಯುವುದೇ ನಿಜವಾದ ಕಾರ್ತಿಕೋತ್ಸವ. ದೀಪವು ಕತ್ತಲೆಯನ್ನು ಕಳೆದಂತೆ ನಮ್ಮಲ್ಲಿರುವ ಕಾಮ, ಕ್ರೋಧ, ಮೋಹ, ಮದ, ಮತ್ಸರ ಎಂಬ ಕತ್ತಲೆ ಕಳೆದು, ಬಸವಾದಿ ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿನವಲಗುಂದದ ಬಸವಲಿಂಗ ಸ್ವಾಮೀಜಿ, ಹಳಿಗೀಳಿಯ ಶಿವಾನಂದ ದೇವರು ಕಮರಿಮಠ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಆರ್‌.ಎನ್‌.ದೇಶಪಾಂಡೆ, ಮಹಾಂತಪ್ಪ ಪಟ್ಟಣಶೆಟ್ಟಿ, ಎಸ್‌.ಸಿ.ಬಡ್ನಿ, ಶಿದ್ದಲಿಂಗೇಶ ಕುರ್ತಕೋಟಿ, ಶಿವಬಸವ ಹಸಬಿ,ಅಶೋಕ ಮೆಣಸಿನಕಾಯಿ, ಮಹಾಂತೇಶ ಕೋರಿ, ಪಿ.ಎಸ್‌.ಮರಿದೇವರಮಠ, ಎಸ್‌.ಎಂ.ಉಜ್ಜಣ್ಣವರ, ಬಸವರಾಜ ಹಕಾರಿ ಹಾಗೂ ಗವಿಮಠದ ಸದ್ಭಕ್ತ ಮಂಡಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ