ಆ್ಯಪ್ನಗರ

ಸಿಎಂ ಭೇಟಿ ಮಾಡಿದ ಶಾಸಕ ಲಮಾಣಿ

ಶಿರಹಟ್ಟಿ: ರಾಜ್ಯದಲ್ಲಿಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಉಪಚುನಾವಣೆಯ ಫಲಿತಾಂಶದಿಂದ ಸುಭದ್ರವಾಗಿದ್ದು, ಹೀಗಾಗಿ ಶಿರಹಟ್ಟಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅಭಯ ನೀಡಿದ್ದಾರೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Vijaya Karnataka 12 Dec 2019, 5:30 pm
ಶಿರಹಟ್ಟಿ: ರಾಜ್ಯದಲ್ಲಿಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಉಪಚುನಾವಣೆಯ ಫಲಿತಾಂಶದಿಂದ ಸುಭದ್ರವಾಗಿದ್ದು, ಹೀಗಾಗಿ ಶಿರಹಟ್ಟಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅಭಯ ನೀಡಿದ್ದಾರೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
Vijaya Karnataka Web the legislator lamani who met the cm
ಸಿಎಂ ಭೇಟಿ ಮಾಡಿದ ಶಾಸಕ ಲಮಾಣಿ


ಅವರು ಬುಧವಾರ ಬೆಂಗಳೂರಿನಲ್ಲಿಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ದೆಶನ ಮೇರೆಗೆ ನನ್ನನ್ನು ಉಪಚುನಾವಣೆಯ ಸಂದರ್ಭದಲ್ಲಿಹಿರೇಕೆರೂರ ಹಾಗೂ ರಾಣೆಬೆನ್ನೂರ ಕ್ಷೇತ್ರಗಳಲ್ಲಿಯ ಲಂಬಾಣಿ ತಾಂಡಾಗಳಲ್ಲಿಪ್ರಚಾರ ನಡೆಸುವಂತೆ ಸೂಚನೆ ನೀಡಿದ್ದರು. ಅದರಂತೆ ನಾನು ಮತದಾನ ಮುಗಿಯುವವರೆಗೂ ಸಹ ಈ ಎರಡು ಕ್ಷೇತ್ರಗಳಲ್ಲಿಕಾರ‍್ಯಕರ್ತರೊಂದಿಗೆ ಸಂಚರಿಸಿರುವೆ. ಸಿಎಂ ನಿವಾಸಕ್ಕೆ ತೆರಳಿ ಅವರೊಂದಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಸಹ ವಿನಂತಿ ಮಾಡಲಾಗಿದೆ. ಈ ಬಗ್ಗೆ ಅವರು ಕ್ಷೇತ್ರದಲ್ಲಿಬರುವಂತಹ ಶಿರಹಟ್ಟಿ-ಮುಂಡರಗಿ-ಲಕ್ಷೆತ್ರ್ಮೕಶ್ವರ ಪಟ್ಟಣ ಸೇರಿದಂತೆ ಎಲ್ಲಗ್ರಾಮೀಣ ಪ್ರದೇಶಗಳಲ್ಲೂಸಹ ಮೂಲಸೌಲಭ್ಯಕ್ಕೆ ಆದ್ಯತೆ ನೀಡಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆಂದು ಹೇಳಿದರು.

ಶಿರಹಟ್ಟಿ ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ