ಆ್ಯಪ್ನಗರ

ಮನೆ ಸ್ಥಳಾಂತರಿಸಲು ಶಾಸಕರ ಸೂಚನೆ

ಗಜೇಂದ್ರಗಡ : ಸಮೀಪದ ಬೊಮ್ಮಸಾಗರ ಗುಡ್ಡದ ಮೇಲಿನ ಬೃಹತ್‌ ಕಲ್ಲುಬಂಡೆ ಉರಳಿ ಕೆಳಗಿರುವ ಗ್ರಾಮ ದುರ್ಗಾದೇವಿ ಉಗ್ರಾಣ ಕೊಣೆ, ಅಂಗನವಾಡಿ ಕಟ್ಟಡಕ್ಕೆ ಅಪ್ಪಳಿಸಿರುವುದನ್ನು ಶಾಸಕ ಕಳ ಕಪ್ಪ ಬಂಡಿ ಪರಿಶೀಲನೆ ನಡೆಸಿದರು.

Vijaya Karnataka 23 Sep 2019, 5:00 am
ಗಜೇಂದ್ರಗಡ : ಸಮೀಪದ ಬೊಮ್ಮಸಾಗರ ಗುಡ್ಡದ ಮೇಲಿನ ಬೃಹತ್‌ ಕಲ್ಲುಬಂಡೆ ಉರಳಿ ಕೆಳಗಿರುವ ಗ್ರಾಮ ದುರ್ಗಾದೇವಿ ಉಗ್ರಾಣ ಕೊಣೆ, ಅಂಗನವಾಡಿ ಕಟ್ಟಡಕ್ಕೆ ಅಪ್ಪಳಿಸಿರುವುದನ್ನು ಶಾಸಕ ಕಳ ಕಪ್ಪ ಬಂಡಿ ಪರಿಶೀಲನೆ ನಡೆಸಿದರು.
Vijaya Karnataka Web the legislators notice to evacuate the house
ಮನೆ ಸ್ಥಳಾಂತರಿಸಲು ಶಾಸಕರ ಸೂಚನೆ


ಗುಡ್ಡದ ಬಳಿ ಇರುವ ಮನೆಗಳನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ದೇವಸ್ಥಾನದಲ್ಲಿನಡೆದ ಸಭೆಯಲ್ಲಿಶಾಸಕರು ಮಾತನಾಡಿ, ಘಟನೆಯಿಂದ ಭಯ ಪಡಬೇಡಿ. ಇದಕ್ಕೆ ಶಾಶ್ವತ ಪರಿಹಾರ ಶ್ರಮಿಸುವುದಾಗಿ ಭರವಸೆ ನೀಡಿದರು. ಕಲ್ಲುಬಂಡಿ ಬಿದ್ದಿರುವುದರಿಂದ ಜಖಂ ಆಗಿರುವ ದೇವಸ್ಥಾನ ಉಗ್ರಾಣ ಮತ್ತು ಅಂಗನವಾಡಿ ಕಟ್ಟಡ ಹಾಗೂ ಒಳಗಿನ ಆಹಾರ ಪದಾರ್ಥ ತಯಾರಿಸುವ ಅಡುಗೆ ಪಾತ್ರೆಗಳ ಜತೆಗೆ ಪರಿಹಾರ ನೀಡಲು ತಹಸೀಲ್ದಾರರಿಗೆ ಸೂಸಿಚಿದರು.

ತಾಪಂ ಕಾರ‍್ಯನಿರ್ವಹಣಾ ಅಧಿಕಾರಿ ಸಂತೋಷ ಪಾಟೀಲ, ತಹಸೀಲ್ದಾರ ಗುರುಶಿದ್ದಯ್ಯಾ ಹಿರೇಮಠ, ಭೂ ವಿಜ್ಞನಾ ಇಲಾಖೆ ಅಧಿಕಾರಿಗಳು ಮಾತನಾಡಿದರು. ಆತಂಕದಲ್ಲಿರವ ಗ್ರಾಮಸ್ಥರು ಅಳಲು ತೋಡಿಕೊಂಡರು. ಗ್ರಾಮಕ್ಕೆ ಹೊಂದಿಕೊಂಡ ಗುಡ್ಡದ ಮೇಲಿಂದ 15*20 ಅಡಿಯ ಬೃಹತ್‌ ಕಲ್ಲುಬಂಡೆ 300 ಅಡಿ ಎತ್ತರದ ಗುಡ್ಡದಿಂದ ಒಂದು ತುಕಡಿ ಬಂಡೆಕಲ್ಲುಕೆಳಗೆ ಉರಳುತ್ತ ಬರುವದನ್ನು ಕಂಡು ದಿಕ್ಕಾಪಾಲಗಿ ಓಡಿದೆವು. ಗ್ರಾಮ ದೇವತೆ ಉಗ್ರಾಣ ಚಾವಣಿ ಮತ್ತು ಪಕ್ಕದ ಅಂಗನವಾಡಿ ಕಡ್ಡಟದ ಮೇಲೆ ಕಲ್ಲುಬಂಡೆ ಬಿದ್ದಿದ್ದರಿಂದ ಎರಡು ಕಟ್ಟಡಗಳು ಜಖಂಗೊಂಡಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದರು. ಕಂದಾಯ ನಿರೀಕ್ಷಿಕ ವೀರಣ್ಣಾ ಅಡಗತ್ತಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ