ಆ್ಯಪ್ನಗರ

ಪುರಸಭೆಗೆ ಕಜವೇ ಕಾರ‍್ಯಕರ್ತರ ಮುತ್ತಿಗೆ

ಗಜೇಂದ್ರಗಡ : ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರು, ಮರಳು ಪೂರೈಕೆ ಜತೆಗೆ ಒಳಚರಂಡಿ ಯೋಜನೆ ಜಾರಿ, ಸ್ಥಗಿತವಾದ ಜಿಗಳೂರ ಕೆರೆ ನಿರ್ಮಾಣ ಕಾಮಗಾರಿ ಪುನರ್‌ ಪ್ರಾರಂಭಿಸಲು ಒತ್ತಾಯಿಸಿ ಸೋಮವಾರ ಕರ್ನಾಟಕ ಜನಹಿತ ವೇದಿಕೆ ಕಾರ‍್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Vijaya Karnataka 12 Feb 2019, 5:00 am
ಗಜೇಂದ್ರಗಡ : ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರು, ಮರಳು ಪೂರೈಕೆ ಜತೆಗೆ ಒಳಚರಂಡಿ ಯೋಜನೆ ಜಾರಿ, ಸ್ಥಗಿತವಾದ ಜಿಗಳೂರ ಕೆರೆ ನಿರ್ಮಾಣ ಕಾಮಗಾರಿ ಪುನರ್‌ ಪ್ರಾರಂಭಿಸಲು ಒತ್ತಾಯಿಸಿ ಸೋಮವಾರ ಕರ್ನಾಟಕ ಜನಹಿತ ವೇದಿಕೆ ಕಾರ‍್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Vijaya Karnataka Web GDG-11GJD2
ಗಜೇಂದ್ರಗಡದಲ್ಲಿ ಸಮರ್ಪಕ ಕುಡಿಯುವ ನೀರು, ಮರಳು ಪೂರೈಕೆ ಜತೆಗೆ ಒಳಚರಂಡಿ ಯೋಜನೆ ಜಾರಿ, ಸ್ಥಗಿತವಾದ ಜಿಗಳೂರ ಕೆರೆ ನಿರ್ಮಾಣ ಕಾಮಗಾರಿ ಪುನರ್‌ ಪ್ರಾರಂಭಿಸಲು ಒತ್ತಾಯಿಸಿ ಸೋಮವಾರ ಕರ್ನಾಟಕ ಜನಹಿತ ವೇದಿಕೆ ಕಾರ‍್ಯಕರ್ತರು ಕಂದಾಯ ನಿರೀಕ್ಷ ಕ ವೀರಣ್ಣ ಅಡಗತ್ತಿ, ಪಿಎಸ್‌ಐ ಆರ್‌.ವೈ. ಜಲಗೇರಿ, ಪುರಸಭೆ ವ್ಯವಸ್ಥಾಪಕ ಸಿ.ವಿ. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.


ಜೋಡು ರಸ್ತೆಯಿಂದ ಪ್ರಾರಂಭಿಸಿದ ಮೆರವಣಿಗೆಯಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಜಿಗಳೂರ ಕೆರೆ ನಿರ್ಮಾಣ ಕಾಮಗಾರಿ ಪುನಾರಂಭಿಸಬೇಕು. ಕುಡಿಯುವ ನೀರು ಸಮಸ್ಯೆ ಬಗೆ ಹರಿಸಿ, ಒಳ ಚರಂಡಿ ಯೋಜನೆ ಜಾರಿ, ಫಲಕ ಹಿಡಿದು ಘೋಷಣೆ ಕೂಗುತ್ತ ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಮೈಸೂರ ಮಠದ ಮಾರ್ಗವಾಗಿ ಸಂಚರಿಸಿ ಪುರಸಭೆ ಕಾರ್ಯಾಲಯಕ್ಕೆ ಆಗಮಿಸಲಾಯಿತು. ಮುಖ್ಯಾಧಿಕಾರಿ ಹನುಮಂತಮ್ಮಾ ನಾಯಕ ಡಿಸಿ ಕಚೇರಿಗೆ ಸಭೆಗೆ ತೆರಳಿರುವ ಬಗೆಗೆ ಅಧಿಕಾರಿಗಳು ತಿಳಿಸಿದಾಗ ಪ್ರತಿಭಟನಾ ನಿರತರು ಘೋಷಣೆ ಹಾಕಿದರು.

ಬಳಿಕ ಬಹಿರಂಗ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್‌.ಎಸ್‌. ಸೋಂಪುರ ಮಾತನಾಡಿ, ಪಟ್ಟಣದಲ್ಲಿ ತಿಂಗಳಿಗೊಮ್ಮೆ ನೀರು ಪೂರೈಕೆಯಿಂದ ನಾಗರಿಕರು ತತ್ತರಿಸಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ದೊರೆಯುವ ಜಿಗಳೂರ ಕೆರೆ ನಿರ್ಮಾಣ ಕಾಮ ಗಾರಿ ತ್ವರಿತವಾಗಿ ಪೂರ್ಣ ಮುಗಿಸಬೇಕು. ಒಳಚರಂಡಿ ಯೋಜನೆಗೆ ಸರಕಾರದಿಂದ ಬಿಡುಗಡೆಯಾದ ಅನುದಾನ ಮತ್ತೊಂದು ಯೋಜನೆಗೆ ಬಳಸಿರುವುದು ಏಕೆ ಎಂದು ಪ್ರಶ್ನಿಸಿದರು.ಪ್ರಸಕ್ತ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಯಮನಪ್ಪ ಚಿತ್ರಗಾರರಿಗೆ ಪುರಸಭೆಯಿಂದ ನಾಗರಿಕ ಸನ್ಮಾನ ನಡೆಸಬೇಕು ಎಂದು ಒತ್ತಾಯಿಸಿದರು.

ಏಳು ದಿನದಲ್ಲಿ ಸಮಸ್ಯೆ ಬಗೆ ಹರಿಸಲು ಮುಂದಾಗದಿದ್ದರೆ ಮುಂದಾಗುವ ಅವಘಡಗಳಿಗೆ ಅಧಿಕಾರಿಗಳು ಹೊಣೆ ಎಂದು ಎಚ್ಚರಿಸಿದರು. ಕಂದಾಯ ನಿರೀಕ್ಷ ಕಿಕ ವೀರಣ್ಣ ಅಡಗತ್ತಿ, ಪಿಎಸ್‌ಐ ಆರ್‌.ವೈ. ಜಲಗೇರಿ, ಪುರಸಭೆ ವ್ಯವಸ್ಥಾಪಕ ಸಿ.ವಿ. ಕುಲಕರ್ಣಿ ಮನವಿ ಸ್ವಿಕರಿಸಿದರು.

ರಾಜು ಸಾಂಗ್ಲಿಕರ್‌, ಮುರ್ತುಜಾ ವಂಟಿ, ರಾಜು ಕಲಾಲ, ರಾಚಯ್ಯ ಬಾಳಿಕಾಯಿಮಠ, ವೀರೇಶ ಸಂಗಮದ, ಅನೀಲ ಕರ್ಣಿ, ಶೇಖಪ್ಪ ಕಲಾಲ ಬಂಡಿ, ಮುರ್ತುಜಾ ವಂಟಿ, ರಾಘವೇಂದ್ರ ರಂಗ್ರೇಜಿ, ಮೈನು ತಾಳಿಕೋಟಿ, ಪ್ರಕಾಶ ಚಪ್ಪದ, ಅಲ್ಲಾಭಕ್ಷಿ ನದಾಫ, ಮುತ್ತು ಸಾಳುಂಕೆ, ಇಬ್ರಾಹಿಂ ಮಾರನಬಸರಿ, ಖಲಂದಾರ ಡಾಲಾಯತ್‌, ಮೂಬುಸಾಬ ಸುಂಕದ, ಮೈಬುಸಾಬ ಸಾಂಗ್ಲಿಕರ್‌, ನಿಂಗಪ್ಪ ಸೋಂಪುರ, ಅಲಿಸಾಬ ದಿಂಡವಾಡ, ಅಲ್ಲಾಭಕ್ಷಿ ಮುಚ್ಚಾಲಿ, ದಾವಲ ಗಣಿ, ಕಳಕಪ್ಪ ಸೋಂಪುರ ಇನ್ನಿತರು ಪಾಲ್ಗೋಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ