ಆ್ಯಪ್ನಗರ

ಜನಸಂಖ್ಯೆ ನಿಯಂತ್ರಣ ಕ್ರಮ ಪಾಲನೆ ಅವಶ್ಯ

ಶಿರಹಟ್ಟಿ : ಜನಸಂಖ್ಯೆ ಬೆಳವಣಿಗೆಯ ತೀವ್ರತೆ ಕಡಿಮೆ ಮಾಡಲು ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಪಾಲಿಸಿದಾಗ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ಎಫ್‌.ಎಂ.ಡಬಾಲಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಸಿ.ಭಜಂತ್ರಿ ಹೇಳಿದರು.

Vijaya Karnataka 16 Jul 2019, 5:00 am
ಶಿರಹಟ್ಟಿ : ಜನಸಂಖ್ಯೆ ಬೆಳವಣಿಗೆಯ ತೀವ್ರತೆ ಕಡಿಮೆ ಮಾಡಲು ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಪಾಲಿಸಿದಾಗ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ಎಫ್‌.ಎಂ.ಡಬಾಲಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಸಿ.ಭಜಂತ್ರಿ ಹೇಳಿದರು.
Vijaya Karnataka Web GDG-15SHT1
ಶಿರಹಟ್ಟಿಯ ಎಫ್‌.ಎಂ.ಡಬಾಲಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸೋಮವಾರ ನಡೆದ ವಿಶ್ವಜನಸಂಖ್ಯಾ ದಿನಾಚರಣೆಯಲ್ಲಿ ಪ್ರಾಚಾರ್ಯ ಎಂ.ಸಿ.ಭಜಂತ್ರಿ ಮಾತನಾಡಿದರು.


ಇಲ್ಲಿಯ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸೋಮವಾರ ನಡೆದ ವಿಶ್ವಜನಸಂಖ್ಯಾ ದಿನಾಚರಣೆ ಸಮಾರಂಭದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಆರೋಗ್ಯ, ಶಿಕ್ಷ ಣ, ಉತ್ತಮ ಜೀವನಮಟ್ಟ ಇವುಗಳ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸುವುದು ಪ್ರಸ್ತುತ ದಿನಗಳಲ್ಲಿ ಅವಶ್ಯವಿದೆ ಎಂದರು.

ಉಪನ್ಯಾಸಕಿ ಸುಧಾ ಹುಚ್ಚಣ್ಣನವರ ಮಾತನಾಡಿ, 1989ರಲ್ಲಿ ವಿಶ್ವ ಸಂಸ್ಥೆ ಜನರಲ್ಲಿ ಜನಸಂಖ್ಯೆ ನಿಯಂತ್ರಿಸುವ ಅರಿವು ಮೂಡಿಸುವುದಕ್ಕಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. 2019ರ ವರದಿಯ ಪ್ರಕಾರ ದೇಶದ ಜನಸಂಖ್ಯೆ 137 ಕೋಟಿ ಹಾಗೂ ಚೀನಾ 143ಕೋಟಿ ಜನಸಂಖ್ಯೆ ಹೊಂದಿವೆ. ಇನ್ನು 7-8 ವರ್ಷಗಳಲ್ಲಿ ಭಾರತದ ಚೀನಾ ದೇಶವನ್ನು ಹಿಂದಿಕ್ಕಿ ಪ್ರಥಮಸ್ಥಾನ ಹೊಂದಲಿರುವುದು ಆಘಾತಕಾರಿ ಸಂಗತಿಯಾಗಿದೆ. ಆದ್ದರಿಂದ ಪ್ರಜ್ಞಾವಂತ ನಾಗರಿಕರು ಜನಸಂಖ್ಯಾ ಬೆಳವಣಿಗೆಯಿಂದಾಗುವ ದುಷ್ಪರಿಣಾಮ ಅರಿತು ಸುಂದರ ಸಮಾಜ ನಿರ್ಮಿಸುವುದಲ್ಲಿ ಪ್ರೇರಕರಾಗಬೇಕೆಂದು ಹೇಳಿದರು.

ವೈದ್ಯಾಧಿಕಾರಿ ಚಂದ್ರು ಲಮಾಣಿ ಮಾತನಾಡಿ, ಕುಟುಂಬ ಯೋಜನೆಯನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಜನಸಂಖ್ಯೆ ಪ್ರಮಾಣ ಇಳಿಮುಖವಾಗಲು ಸಾಧ್ಯ. ಇದನ್ನು ಎಲ್ಲರೂ ರೂಢಿಯಲ್ಲಿ ತರಬೇಕೆಂದು ಹೇಳಿದರು.

ಎಂ.ಕೆ.ಲಮಾಣಿ, ಎನ್‌.ಹನುಮರಡ್ಡಿ, ಪಿ.ಎನ್‌.ಕುಲಕರ್ಣಿ, ಎಂ.ಎಂ.ನದಾಫ್‌, ಎಫ್‌.ಎ.ಬಾಬುಖಾನವರ, ನಂದೀಶ ಕಾಳಗಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ