ಆ್ಯಪ್ನಗರ

ಅಣುಕು ಸಂಸತ್‌ ಕಾರ್ಯಕ್ರಮ ಶ್ಲಾಘನೀಯ

ಮುಂಡರಗಿ : ಸಂಸತ್‌ ತನ್ನದೆ ಘನತೆ, ಗೌರವ ಹೊಂದಿದೆ. ಹೀಗಾಗಿ ಬಹಳ ಗಂಭೀರವಾಗಿರಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಮಾನತೆ ತರುವ, ಜಾತಿ ಮತ್ತು ವರ್ಗ ತಾರತಮ್ಯ ತೊಡೆದುಹಾಕುವ, ಸಮಾಜದ ಶೋಷಿತ , ದುರ್ಬಲ ವರ್ಗಗಳಿಗೆ ವಿಶೇಷ ಅವಕಾಶ ನೀಡುವ ಚರ್ಚೆಗಳು, ವಿಚಾರಗಳು ಬಹಳಷ್ಟು ಗಂಭೀರವಾಗಿ ನಡೆಯುತ್ತವೆ ಎಂದು ಕುರಿ ಹಾಗೂ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್‌.ಗೌಡರ ಹೇಳಿದರು.

Vijaya Karnataka 10 Dec 2018, 5:00 am
ಮುಂಡರಗಿ : ಸಂಸತ್‌ ತನ್ನದೆ ಘನತೆ, ಗೌರವ ಹೊಂದಿದೆ. ಹೀಗಾಗಿ ಬಹಳ ಗಂಭೀರವಾಗಿರಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಮಾನತೆ ತರುವ, ಜಾತಿ ಮತ್ತು ವರ್ಗ ತಾರತಮ್ಯ ತೊಡೆದುಹಾಕುವ, ಸಮಾಜದ ಶೋಷಿತ , ದುರ್ಬಲ ವರ್ಗಗಳಿಗೆ ವಿಶೇಷ ಅವಕಾಶ ನೀಡುವ ಚರ್ಚೆಗಳು, ವಿಚಾರಗಳು ಬಹಳಷ್ಟು ಗಂಭೀರವಾಗಿ ನಡೆಯುತ್ತವೆ ಎಂದು ಕುರಿ ಹಾಗೂ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್‌.ಗೌಡರ ಹೇಳಿದರು.
Vijaya Karnataka Web the nuclear parliament program is commendable
ಅಣುಕು ಸಂಸತ್‌ ಕಾರ್ಯಕ್ರಮ ಶ್ಲಾಘನೀಯ


ಪದವಿ ಪೂರ್ವ ಶಿಕ್ಷ ಣ ಇಲಾಖೆ ಬೆಂಗಳೂರು, ಸಂಸದೀಯ ವ್ಯವಹಾರಗಳ ಇಲಾಖೆ ಬೆಂಗಳೂರು, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷ ಣ ಇಲಾಖೆ ಗದಗ, ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರುಗಳ ಸಂಘ ಮತ್ತು ಶ್ರೀ ಜ.ಅ.ವಿ.ಸಮಿತಿಯ ಜ.ಅ.ಪದವಿ ಪೂರ್ವ ಕಾಲೇಜು ಸಂಯುಕ್ತ ಅಶ್ರಯದಲ್ಲಿ ಜ.ಅ.ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಯುವ ಅಣಕು ಸಂಸತ್‌ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸತ್‌ನಲ್ಲಿ ಮಾತನಾಡುವುದು ಮತ್ತು ಚೆರ್ಚೆಯಲ್ಲಿ ಭಾಗವಹಿಸುವ ಸಂಸದರು ಸಂಪೂರ್ಣ ಮಾಹಿತಿ ತಿಳಿದುಕೊಂಡು ಮಾತನಾಡುವುದು ಪೂರ್ಣಪ್ರಮಾಣದ ಚರ್ಚೆ ಎನಿಸಿಕೊಳ್ಳುತ್ತವೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಸಂಸತ್‌ಗೆ ಧಕ್ಕೆ ಬರುವಂತಹ ಘಟನೆಗಳು ಆಗಾಗ ನಡೆಯುತ್ತಿದ್ದು, ಇಂತಹ ಘಟನೆಗಳು ಸದನದ ಘನತೆ ಕೆಡಿಸುತ್ತಿವೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ಇಂದಿನ ಯುವ ಪೀಳಿಗೆಯ ಜವಾಬ್ದಾರಿಯಾಗಿದೆ. ಇಂದಿನ ಯುವಕರು ಮುಂದೆ ಸರಕಾರ ನಡೆಸುವ ಮಂತ್ರಿ, ಸಭಾಧ್ಯಕ್ಷ ರು ಆಗಬಹುದು. ಅವರಿಗೆ ಅಣಕು ಸ್ಪರ್ಧೆ ನಡೆಸುವುದರ ಮೂಲಕ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ನಿರ್ಣಾಯಕರಾದ ನಿವೃತ್ತ ಪ್ರಾಚಾರ್ಯ ಎ.ಬಿ.ಹಿರೇಮಠ ಮಾತನಾಡಿ, ಕ್ರಮಬದ್ಧವಾಗಿ ನಡೆಯುವ ಸದನದ ಕಾರ್ಯಕಲಾಪಗಳನ್ನು ಯುವಕರು ಆಸಕ್ತಿಯಿಂದ ತಿಳಿದುಕೊಳ್ಳಬೇಕು. ಸದಸ್ಯರಿಂದ ಪ್ರಮಾಣ ವಚನ, ಸಂತಾಪ ಸೂಚನೆಯ ಪ್ರಸ್ತಾವನೆ, ಪ್ರಶ್ನೆಗಳು, ಸಂಕ್ಷಿಪ್ತ ಸೂಚನಾ ಪ್ರಶ್ನೆ, ನಿಲುವಳಿ ಸೂಚನೆ, ಹಕ್ಕುಚ್ಯುತಿ ಒಳಗೊಳ್ಳುವ ಪ್ರಶ್ನೆಗಳು, ಸಭೆ ಮುಂದೆ ಮಂಡಿಸಬೇಕಾಗಿರುವ ಪತ್ರಗಳು, ಗಮನ ಸೆಳೆಯುವ ಸೂಚನೆ, ಶಾಸನ ರಚನಾ ವ್ಯವಹಾರ, ವಿಧೇಯಕಗಳ ವರ್ಗೀಕರಣ, ನಿರ್ಣಯ ಹೀಗೆ ವಿವಿಧ ಹಂತಗಳಲ್ಲಿ ನಡೆಯುವ ಕಲಾಪಗಳು ಸ್ವಾರಸ್ಯಕರವಾಗಿರುತ್ತವೆ ಎಂದರು.

ಡಾ.ನಾಗರಾಜ ಹಾವಿನಾಳ ಫಲಿತಾಂಶ ಸಾದರಪಡಿಸಿದರು. ಸ್ಪರ್ಧೆಯಲ್ಲಿ ಮೊದಲು 5 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಆರ್‌.ಎಸ್‌.ಪಾಟೀಲ, ಶ್ರೀಮತಿ ಸಂಶಿ, ಪ್ರಾ.ಅಸೂಟಿ, ಪ್ರೋ.ಮೇಟಿ, ಪ್ರಾ.ಜೋಗಣ್ಣವರ, ಪ್ರೊ.ಹಕಾರಿ ಮುಂತಾದವರಿದ್ದರು. ಜ.ಅ.ಪದವಿ ಪೂರ್ವ ಕಾಲೇಜಿನ ಪ್ರಾ.ಸಿ.ಎಸ್‌.ಅರಸನಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಮೇಲ್ವಿಚಾರಣಾ ಸಮಿತಿ ಉಪಕಾರ್ಯಾಧ್ಯಕ್ಷ ಎಸ್‌.ಬಿ.ಹಿರೇಮಠ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ