ಮುಂಡರಗಿ: ಅ.28ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಪ್ರೊ. ಎಸ್.ವಿ.ಸಂಕನೂರು ಎರಡನೇ ಬಾರಿಗೆ ಸ್ಪರ್ಧಿಸಿದ್ದು, ಪಕ್ಷದ ಕಾರ್ಯಕರ್ತರು ಪರಸ್ಪರ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಎಲ್ಲರೂ ಕಡ್ಡಾಯ ಮತ ಹಾಕಿಸಲು ಪ್ರಯತ್ನಿಸಬೇಕು. ಗೆಲ್ಲಲು ಸಹಕಾರ ನೀಡಬೇಕು ಎಂದು ಮುಂಡರಗಿ ಬಿಜೆಪಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹೇಳಿದರು.
ಸ್ಥಳೀಯ ಹಂಚಿನಾಳ ಉದ್ಯಾನದಲ್ಲಿಜರುಗಿದ ಬಿಜೆಪಿ ಸಂಘಟನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಸಭೆ ಬಿಜೆಪಿ ಸದಸ್ಯರು ತಂಡ ಮಾಡಿಕೊಂಡು ಅಭ್ಯರ್ಥಿ ಗೆಲುವಿಗೆ ಪ್ರಯತ್ನಿಸುವದರ ಜತೆಗೆ ಬಿಜೆಪಿ ರಾಜ್ಯ ಕೇಂದ್ರ ಸರಕಾರದ ಯೋಜನೆ ಬಗ್ಗೆ ತಿಳಿಸಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ ಮಾತನಾಡಿದರು. ದೇವಪ್ಪ ಕಂಬಳಿ, ರಜನೀಕಾಂತ ದೇಸಾಯಿ, ಶಿವನಗೌಡ ಗೌಡರ, ಚಿನ್ನಪ್ಪ ವಡ್ಡಟ್ಟಿ, ಬಸವರಾಜ ಬಿಳಿಮಗ್ಗದ, ನಾಗರಾಜ ಮುರುಡಿ, ನಾಗರಾಜ ಕೊರ್ಲಹಳ್ಳಿ, ಪರಶುರಾಮ ಸುಣಗಾರ, ಬಳ್ಳಾರಿ, ಸೋನಿ, ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಪ್ರಹ್ಲಾದ ಹೊಸಮನಿ, ಕವಿತಾ ಉಳ್ಳಾಗಡ್ಡಿ, ತಿಮ್ಮಪ್ಪ ದಂಡಿನ, ಶಿವಪ್ಪ ಚಿಕ್ಕಣ್ಣವರ, ಶಿವಾನಂದ ಬಾರಕೇರ, ಪರಶುರಾಮ ಕರಡಿಕೊಳ್ಳ, ಪ್ರಕಾಶ ಹಲವಾಗಲಿ,
ದೇವಪ್ಪ ಇಟಗಿ ಇದ್ದರು.
ಸ್ಥಳೀಯ ಹಂಚಿನಾಳ ಉದ್ಯಾನದಲ್ಲಿಜರುಗಿದ ಬಿಜೆಪಿ ಸಂಘಟನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಸಭೆ ಬಿಜೆಪಿ ಸದಸ್ಯರು ತಂಡ ಮಾಡಿಕೊಂಡು ಅಭ್ಯರ್ಥಿ ಗೆಲುವಿಗೆ ಪ್ರಯತ್ನಿಸುವದರ ಜತೆಗೆ ಬಿಜೆಪಿ ರಾಜ್ಯ ಕೇಂದ್ರ ಸರಕಾರದ ಯೋಜನೆ ಬಗ್ಗೆ ತಿಳಿಸಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ ಮಾತನಾಡಿದರು. ದೇವಪ್ಪ ಕಂಬಳಿ, ರಜನೀಕಾಂತ ದೇಸಾಯಿ, ಶಿವನಗೌಡ ಗೌಡರ, ಚಿನ್ನಪ್ಪ ವಡ್ಡಟ್ಟಿ, ಬಸವರಾಜ ಬಿಳಿಮಗ್ಗದ, ನಾಗರಾಜ ಮುರುಡಿ, ನಾಗರಾಜ ಕೊರ್ಲಹಳ್ಳಿ, ಪರಶುರಾಮ ಸುಣಗಾರ, ಬಳ್ಳಾರಿ, ಸೋನಿ, ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಪ್ರಹ್ಲಾದ ಹೊಸಮನಿ, ಕವಿತಾ ಉಳ್ಳಾಗಡ್ಡಿ, ತಿಮ್ಮಪ್ಪ ದಂಡಿನ, ಶಿವಪ್ಪ ಚಿಕ್ಕಣ್ಣವರ, ಶಿವಾನಂದ ಬಾರಕೇರ, ಪರಶುರಾಮ ಕರಡಿಕೊಳ್ಳ, ಪ್ರಕಾಶ ಹಲವಾಗಲಿ,
ದೇವಪ್ಪ ಇಟಗಿ ಇದ್ದರು.